ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂಜನಗೂಡಿನ ಶ್ರೀಕಂಠೇಶ್ವರನಿಗೆ ಮೂರು ದಿನ ಪೂಜೆಯಿಲ್ಲ

|
Google Oneindia Kannada News

Recommended Video

Nanjanagudu: ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ 3 ದಿನ ಪೂಜೆಯಿಲ್ಲ

ಮೈಸೂರು, ಮೇ 10: ಪ್ರಸಿದ್ಧ ನಂಜನಗೂಡಿನ ದೇವಸ್ಥಾನದ ಶ್ರೀಕಂಠೇಶ್ವರನಿಗೆ ಇನ್ನೆರಡು ದಿನ ಪೂಜೆಯ ಭಾಗ್ಯವಿಲ್ಲದಂತಾಗಿದೆ. ದೇವಸ್ಥಾನಕ್ಕೆ ಹೊಂದಿಕೊಂಡಂತೆ ಪಕ್ಕದ ರಥಬೀದಿಯಲ್ಲಿ ಮಹಿಳೆಯೋರ್ವರು ಗುರುವಾರ (ಮೇ.09) ಮೃತಪಟ್ಟಿದ್ದು, ಈ ಸೂತಕದ ಹಿನ್ನೆಲೆಯಲ್ಲಿ ಶ್ರೀಕಂಠೇಶ್ವರ ದೇಗುಲದ ದೇವರಿಗೆ ಇನ್ನೂ ಎರಡು ದಿನ ಪೂಜಾ ಕೈಂಕರ್ಯಗಳು ನಡೆಯುವುದಿಲ್ಲ, ಆದರೆ ಭಕ್ತರಿಗೆ ದರ್ಶನ ಭಾಗ್ಯವಿದೆ.

ಸಂಪ್ರದಾಯದಂತೆ ಯಾವುದೇ ದೇವಾಲಯದ ಆಸುಪಾಸಿನಲ್ಲಿ ಸಾವು ಸಂಭವಿಸಿದರೆ ಅಂತ್ಯಕ್ರಿಯೆಯಾಗುವವರೆಗೂ ಪೂಜಾ ಕೈಂಕರ್ಯಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಅಂತ್ಯಕ್ರಿಯೆ ನಂತರ ಶುದ್ಧೀಕರಣ ಮಾಡಿ ಪೂಜಾ ಕೈಂಕರ್ಯ ಆರಂಭಿಸಲಾಗುತ್ತದೆ. ಈ ಕಾರಣಕ್ಕಾಗಿಯೇ ದೇವಸ್ಥಾನದ ಆಸುಪಾಸು ಸಾವಿನ ವಿಚಾರ ತಿಳಿದಾಗ ಕೂಡಲೇ ಅಂತ್ಯಕ್ರಿಯೆ ನಡೆಸುವುದು ವಾಡಿಕೆ.

ನಂಜನಗೂಡಿನ ಪಂಚರಥೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರನಂಜನಗೂಡಿನ ಪಂಚರಥೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ

ಆದರೆ ಶ್ರೀಕಂಠೇಶ್ವರ ದೇಗುಲದ ಮಾಜಿ ನೌಕರ ಶ್ರೀಕಂಠಯ್ಯ ಅವರ ಪತ್ನಿ ಪದ್ಮಾವತಮ್ಮ ನಿಧನ ಹೊಂದಿದ್ದು, ವಿದೇಶದಲ್ಲಿರುವ ಅವರ ಪುತ್ರ ಶಂಕರ್ ನಾಳೆ ಶನಿವಾರ (ಮೇ.11) ಊರಿಗೆ ಬರಲಿದ್ದಾರೆ. ಆ ನಂತರವೇ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಆ ಕಾರಣದಿಂದ ಶ್ರೀಕಂಠೇಶ್ವರ ದೇವಾಲಯದಲ್ಲಿ ಪೂಜಾ ಕೈಂಕರ್ಯವನ್ನು ಅಲ್ಲಿವರೆಗೆ ಸ್ಥಗಿತಗೊಳಿಸಲಾಗಿದೆ.

Three days no pooja in Nanjangud Srikanteshwara temple

ನಂಜನಗೂಡು ಶ್ರೀಕಂಠೇಶ್ವರ ಜಾತ್ರೆಯಲ್ಲಿ ಮತದಾನದ ಜಾಗೃತಿನಂಜನಗೂಡು ಶ್ರೀಕಂಠೇಶ್ವರ ಜಾತ್ರೆಯಲ್ಲಿ ಮತದಾನದ ಜಾಗೃತಿ

ಶ್ರೀಕಂಠೇಶ್ವರ ದೇಗುಲದಲ್ಲಿ ವಿವಿಧ ಸೇವೆಗಳಿಗಾಗಿ ಭಕ್ತಾದಿಗಳು ಕೆಲವು ತಿಂಗಳ ಹಿಂದೆಯೇ ಬುಕ್ ಮಾಡಿರುತ್ತಾರೆ. ಅಂತಹ ಭಕ್ತರು ತೊಂದರೆ ಅನುಭವಿಸುವಂತಾಗಿದೆ. ಈ ಎರಡು ದಿನ ವಿಶೇಷ ಸೇವೆಗಾಗಿ ಬುಕ್ ಮಾಡಿರುವ ಭಕ್ತಾದಿಗಳು ಮತ್ತೊಂದು ಸೂಕ್ತ ದಿನಕ್ಕಾಗಿ ಕಾಯಬೇಕಾದ ಅನಿವಾರ್ಯತೆ ಇದೆ.

English summary
Three days no pooja in Nanjangud Srikanteshwara temple.Due to death of 90 year old lady near temple, pooja and seva has been cancelled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X