"ರಾಜ್ಯದ ಇಂದಿನ ಘಟನೆಗಳಿಗೆ ಹಿಂದಿನ ಸರ್ಕಾರವೇ ಹೊಣೆ"; ಡಿಸಿಎಂ
ಮೈಸೂರು, ಜನವರಿ 23: "ರಾಜ್ಯದ ಇಂದಿನ ಪರಿಸ್ಥಿತಿಗೆ ಹಿಂದಿನ ಸರ್ಕಾರವೇ ಕಾರಣ. ಸಮಾಜಘಾತುಕ ಶಕ್ತಿಗೆ ಕಡಿವಾಣ ಹಾಕೋದು ಬಿಟ್ಟು ಪ್ರೋತ್ಸಾಹ ಕೊಟ್ಟಿದ್ದಾರೆ. ಅದಕ್ಕೇ ಮತ್ತೆ ಮತ್ತೆ ಇಂಥ ಪ್ರಕರಣಗಳು ನಡೆಯುತ್ತಿವೆ" ಎಂದು ಮೈತ್ರಿ ಸರ್ಕಾರವನ್ನು ಆರೋಪಿಸಿದ್ದಾರೆ ಡಿಸಿಎಂ ಅಶ್ವತ್ಥ ನಾರಾಯಣ.
ಮೈಸೂರಿನಲ್ಲಿ
ಮಾತನಾಡಿದ
ಅವರು,
"ಹಿಂದಿನ
ಸರ್ಕಾರದಲ್ಲಿ
ಇಂಥ
ಸಮಾಜ
ಘಾತುಕ
ಕೆಲಸ
ಮಾಡುವವರ
ಮೇಲಿನ
ಕೇಸ್ಗಳನ್ನು
ವಾಪಸ್
ತೆಗೆದುಕೊಂಡಿದ್ದಾರೆ.
ಅದಕ್ಕೆ
ಅವರೆಲ್ಲ
ಈಗ
ಕಾನೂನು
ಮೀರಿ
ದೊಡ್ಡ
ಶಕ್ತಿಯಾಗಿ
ನಿಂತಿದ್ದಾರೆ.
ಹಾಗಾಗಿ
ರಾಜ್ಯದಲ್ಲಿ
ಇಂದು
ಇಂತಹ
ಪರಿಸ್ಥಿತಿ
ಸೃಷ್ಟಿಯಾಗಿದೆ.
ನಮ್ಮ
ಸರ್ಕಾರ
ಎಲ್ಲವನ್ನು
ನಿಯಂತ್ರಣ
ಮಾಡುವ
ಪ್ರಯತ್ನ
ಮಾಡುತ್ತಿದೆ"
ಎಂದು
ತಮ್ಮ
ಸರ್ಕಾರದ
ಪರವಾಗಿ
ಮಾತನಾಡಿದರು.
ಎಸ್ಪಿ ವಿರುದ್ಧ ಸುರೇಶ್ ನಡೆ ಖಂಡಿಸಿದ ಬಿಜೆಪಿ ಮುಖಂಡ ಅಶ್ವತ್ಥ ನಾರಾಯಣ್
"ಈಗ ಅದೇಷ್ಟೋ ಘಟನೆಗಳು ನಡೆಯುವ ಮುನ್ನವೇ ತಡೆಹಿಡಿಯಲಾಗಿದೆ. ತಡೆಯುವ ಕೆಲಸವೂ ನಡೆಯುತ್ತಿದೆ. ಸ್ಫೋಟಕ ತಯಾರಿಕೆಯ ಕೆಲ ವಸ್ತುಗಳು ಕಾರ್ಖಾನೆ ಬಳಕೆಗೆಂದು ಸಿಗುತ್ತವೆ. ಅವುಗಳನ್ನು ಬಳಸಿಕೊಂಡು ಈ ಕೃತ್ಯ ಎಸಗುತ್ತಿದ್ದಾರೆ. ಇಂತಹ ವಸ್ತುಗಳನ್ನು ಅವರ ಕೈಗೆ ಸಿಗದಂತೆ ನೋಡಿಕೊಳ್ಳುತ್ತೇವೆ. ಈ ರೀತಿಯ ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಕೆಲ ಸಂಘಟನೆಗಳ ನಿಷೇಧಕ್ಕೆ ಕ್ರಮವಹಿಸಲಾಗುವುದು" ಎಂದು ತಿಳಿಸಿದ್ದಾರೆ.
ಸದ್ಯಕ್ಕಿಲ್ಲ ಕನಕಪುರಕ್ಕೆ ಮೆಡಿಕಲ್ ಕಾಲೇಜು: "ಪ್ರತಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಮಾಡುವ ಆಲೋಚನೆಯಿದೆ. ರಾಮನಗರದಲ್ಲಿ ಮೆಡಿಕಲ್ ಕಾಲೇಜು ಜೊತೆ ಹೆಲ್ತಿ ಸಿಟಿ ಮಾಡಲಾಗುತ್ತದೆ. ರಾಮನಗರದಲ್ಲಿ ಮೆಡಿಕಲ್ ಕಾಲೇಜು ಮಾಡುತ್ತಿರುವುದರಿಂದ ತಾಲೂಕು ಕೇಂದ್ರದಲ್ಲಿ ಕಾಲೇಜಿನ ಅಗತ್ಯ ಇಲ್ಲ. ಮಂಜೂರಾಗಿರುವ ನಾಲ್ಕು ಮೆಡಿಕಲ್ ಕಾಲೇಜಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ" ಎಂದು ಮಾಹಿತಿ ನೀಡಿದರು.