ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವ್ಯಾಸರಾಯ ಮಠದ ಪೀಠಾಧಿಪತಿ ವಿರುದ್ಧ ಎಫ್‌ಐಆರ್ ದಾಖಲು

|
Google Oneindia Kannada News

ಮೈಸೂರು, ಮೇ.06:ವ್ಯಾಸರಾಯ ಮಠದ 41ನೇ ಪೀಠಾಧ್ಯಕ್ಷರ ಮೇಲೆ ಮೂಲ ಪ್ರತಿಮೆ ಬದಲು ಮಾಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ.

ಮಠದ ಭಕ್ತರು ದೂರು ದಾಖಲಿಸಿದ್ದು, ಆಂಧ್ರಪ್ರದೇಶದ ಅನಂತಪುರದಲ್ಲಿ ವಿದ್ಯಾ ಶ್ರೀ ಸ್ವಾಮೀಜಿ ವಿರುದ್ಧ ಎಫ್.ಐ.ಆರ್. ದಾಖಲಾಗಿದೆ.ಮಠದ ವೆಬ್‌ಸೈಟ್ ನಲ್ಲಿ ಪ್ರಕಟವಾದ ಫೋಟೋ, ಮೂಲ ವಿಗ್ರಹಕ್ಕೂ ವ್ಯತ್ಯಾಸವಿದ್ದು, ಮೂಲ ರೂಪದ ಡೂಪ್ಲಿಕೇಟ್ ವಿಗ್ರಹ ಮಾಡಿಟ್ಟಿರುವ ಶಂಕೆ ವ್ಯಕ್ತವಾಗಿದೆ.

The FIR was registered against Vidya Sri Swamiji of Vyasaraya Mutt

ಚಿತ್ರದುರ್ಗ ಜಿಲ್ಲೆಯಲ್ಲಿ ಕೆರೆ ಹೂಳೆತ್ತಲು ಸಾಥ್ ಕೊಟ್ಟ ಮಠಾಧೀಶರುಚಿತ್ರದುರ್ಗ ಜಿಲ್ಲೆಯಲ್ಲಿ ಕೆರೆ ಹೂಳೆತ್ತಲು ಸಾಥ್ ಕೊಟ್ಟ ಮಠಾಧೀಶರು

ಸದಾ ಕಾಲ ಮೂಲ ವಿಗ್ರಹಗಳು ಸ್ವಾಮೀಜಿ ಬಳಿಯೇ ಇರುವುದಾಗಿ ತಿಳಿದು ಬಂದಿದೆ. ಇನ್ನು ಮೂಲ ವಿಗ್ರಹ ಬದಲಾವಣೆ ಬಗ್ಗೆ ಆತಂಕ ವ್ಯಕ್ತಪಡಿಸಿದ 40 ನೇ ಪೀಠಾಧಿಪತಿ ವಿದ್ಯಾಮನೊಹರ ತೀರ್ಥ ಸ್ವಾಮೀಜಿ, ಮೂಲ ವಿಗ್ರಹ ಪರಿಶೀಲನೆಗೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ.

The FIR was registered against Vidya Sri Swamiji of Vyasaraya Mutt

ವಿಗ್ರಹ ಬದಲಾಣೆ ಬಗ್ಗೆ ಮೌನ ಮುರಿಯುವಂತೆ ಹಾಲಿ ಸ್ವಾಮೀಜಿ ಮೇಲೆ ಒತ್ತಾಯ ಕೇಳಿಬರುತ್ತಿದ್ದು, ಚಿನ್ನ, ತಾಮ್ರ, ಪಂಚಲೋಹ, ಬೆಳ್ಳಿ ಪ್ರತಿಮೆಗಳ ಬದಲಾವಣೆ ಬಗ್ಗೆ ಅನುಮಾನವಿದೆ.
ಇದೀಗ ಎಲ್ಲಾ ಮಾದರಿಯ ಪ್ರತಿಮೆಗಳ ಪರಿಶೀಲನೆಗೆ ಒತ್ತಾಯಿಸಲಾಗಿದೆ.

English summary
The FIR was registered against Vidya Sri Swamiji of Vyasaraya Mutt. According to devotees of the monastery, Swamiji is changing the original statue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X