ಪ್ರೋಟೋಕಾಲ್ ನಲ್ಲಿ ಹೆಸರಿಲ್ಲದಿದ್ದರೂ ದಸರಾ ವೇದಿಕೆ ಏರಿದರು ಆ ಮಹಿಳೆ!
Recommended Video
ಮೈಸೂರು, ಅಕ್ಟೋಬರ್. 10: ನಾಡಹಬ್ಬ ದಸರೆ ವೀಕ್ಷಣೆಗೆ ದೇಶ ವಿದೇಶದಿಂದ ಜನರು ಆಗಮಿಸುತ್ತಾರೆ. ಅವರೆಲ್ಲರೂ ದಸರಾ ವೈಭವವನ್ನು ಕಣ್ತುಂಬಿಕೊಳ್ಳಬೇಕೆಂಬ ಕುತೂಹಲದಿಂದ ತುದಿಗಾಲಲ್ಲಿ ನಿಂತಿರುತ್ತಾರೆ.
ಅಂದಹಾಗೆ ದಸರೆಯ ವೇಳೆ ಸೂಕ್ತ ಭದ್ರತೆ ಕೂಡ ಕೈಗೊಳ್ಳಲಾಗುತ್ತದೆ. ಯಾರಿಗೂ ಸಹ ಕಾರ್ಯಕ್ರಮದ ವೇದಿಕೆಯ ಬಳಿ ಬರಲು ಬಿಡುವುದಿಲ್ಲ. ಅಂತಹದ್ದರಲ್ಲಿ ದಸರೆ ಉದ್ಘಾಟನೆಯ ವೇಳೆ ಅಪರಿಚಿತವೆನಿಸಿದ ಮಹಿಳೆಯೋರ್ವರು ದಸರೆ ಉದ್ಘಾಟನೆ ಸಮಯ ಹಾಗೂ ವೇದಿಕೆಯ ಮೊದಲ ಸಾಲಿನಲ್ಲಿ ಕಂಡುಬಂದರು. ಅವರು ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಿತು.
408ನೇ ಮೈಸೂರು ದಸರಾ: ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭ
ಪ್ರೋಟೋಕಾಲ್ ಪ್ರಕಾರ ದಸರಾ ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸಿದ ಹೆಸರಿನ ಮುಖಂಡರು, ನಾಯಕರು, ಗಣ್ಯರೇ ವೇದಿಕೆಗೆ ಆಗಮಿಸರಲಿಲ್ಲ. ಅಂತಹದ್ದರಲ್ಲಿ ಓರ್ವ ಮಹಿಳೆ ವೇದಿಕೆ ಮೇಲೆ ಹತ್ತಿ ಬಂದಿದ್ದರು. ಅವರು ಬೇರೇ ಯಾರು ಅಲ್ಲ, ಬೆಂಗಳೂರಿನ ಚರ್ಮ ರೋಗ ತಜ್ಞೆ ವೈದ್ಯೆ ಸುಮಾ ಕೃಪಾ ಶಂಕರ್.
ದಸರೆಗೆ ವೈಭವದ ಚಾಲನೆ: ಕೊಡಗು ಸಂತ್ರಸ್ತರಿಗೆ 25 ಕೋಟಿ ರೂ. ಘೋಷಿಸಿದ ಸುಧಾ ಮೂರ್ತಿ
ಅವರ ಹೆಸರು ಕೂಡ ಆಮಂತ್ರಣ ಪತ್ರಿಕೆಯಲ್ಲಿರಲಿಲ್ಲ. ಆದರೂ ವೇದಿಕೆಯ ಮೇಲಿದ್ದರು. ಸುಧಾಮೂರ್ತಿಯವರೊಂದಿಗೆ ಬಂದಿರಬಹುದೆಂದುಕೊಂಡ ಹಲವರು ಸುಮ್ಮನಿದ್ದರು.
ಮೈಸೂರು ದಸರಾ ಉದ್ಘಾಟನೆ LIVE: ಇದು ನನ್ನ ಪೂರ್ವಜನ್ಮದ ಪುಣ್ಯ ಎಂದ ಸುಧಾಮೂರ್ತಿ
ಆದರೆ ಎಲ್ಲರಿಗೂ ಕೊರೆಯುತ್ತಿದ್ದ ಪ್ರಶ್ನೆಯೆಂದರೆ ಸುಧಾಮೂರ್ತಿಯವರ ಪತಿ ನಾರಾಯಣ ಮೂರ್ತಿಯವರೇ ವೇದಿಕೆಯ ಮೇಲಿರಲಿಲ್ಲ. ಆದರೆ ಇವರು ಬಂದಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಸಂಘಟಕರ ಬಳಿ ಪ್ರಶ್ನಿಸಿದರೇ ಹಾರಿಕೆಯ ಉತ್ತರ ನೀಡಿದರು. ಮುಂದಾದರೂ ಆಯೋಜಕರು ಇಂತಹ ಅಚಾತುರ್ಯವನ್ನು ಮರುಕಳಿಸದಂತೆ ನಡೆದುಕೊಳ್ಳಬೇಕಿದೆ.