ಘನ ತ್ಯಾಜ್ಯ ನಿರ್ವಹಣೆ, ದಕ್ಷಿಣ ಭಾರತದಲ್ಲೇ ಹುಣಸೂರಿಗೆ ಅಗ್ರಸ್ಥಾನ
ಬೆಂಗಳೂರು, ಜೂನ್ 24: ಘನ ತ್ಯಾಜ್ಯ ನಿರ್ವಹಣೆಯಲ್ಲಿ ಮೈಸೂರು ಜಿಲ್ಲೆಯ ಹುಣಸೂರು ದಾಖಲೆ ಬರೆದಿದೆ. ಅತ್ಯುತ್ತಮ ಘನ ತ್ಯಾಜ್ಯ ನಿರ್ವಹಣೆಯಲ್ಲಿ ದಕ್ಷಿಣ ಭಾರತದಲ್ಲೇ ಮೊದಲ ಸ್ಥಾನವನ್ನು ಹುಣಸೂರು ತನ್ನದಾಗಿಸಿಕೊಂಡಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಸಚಿವಾಲಯ ಪ್ರಕಟಿಸಿದ ಸ್ವಚ್ಛ್ ಸರ್ವೇಕ್ಷಣ್ 2018 ರ ಪಟ್ಟಿಯಲ್ಲಿ ಹುಣಸೂರು 476ಕ್ಕೆ 280 ಅಂಕಗಳನ್ನು ಪಡೆದು ದಕ್ಷಿಣ ಭಾರತಕ್ಕೆ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
ಮೋದಿ ಸರ್ಕಾರಕ್ಕೆ 4 ವರ್ಷ : ಶುದ್ಧ ಕುಡಿಯುವ ನೀರು ಪ್ರತಿಯೊಬ್ಬರ ಹಕ್ಕು
ಹುಣಸೂರು ನಗರ ಪ್ರತಿದಿನಕ್ಕೆ ಪ್ರತಿಯೊಬ್ಬರಿಂದ 390 ಗ್ರಾಂ ತ್ಯಾಜ್ಯ ಸಂಗ್ರಹಿಸುತ್ತದೆ. ಈ ಮೂಲಕ ಪ್ರತಿದಿನ ಸಂಗ್ರಹಿಸುವ ತ್ಯಾಜ್ಯದ ಪ್ರಮಾಣ 21.9 ಟನ್ ಆಗಿದೆ.
ಹುಣಸೂರು ನಗರ ಸಭೆ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಹಲವು ಅಭಿನಂದನಾರ್ಹ ಕೆಲಸಗಳನ್ನು ನಡೆಸುತ್ತಿದೆ. ಉದಾಹರಣೆ ಆ ದಿನ ಸಂಗ್ರಹಿಸಿದ ತ್ಯಾಜ್ಯವನ್ನು ಅಂದೇ ಸಂಸ್ಕರಣೆ ಮಾಡಲಾಗುತ್ತದೆ.
ಹುಣಸೂರಿನಲ್ಲಿ 1 ಲಕ್ಷಕ್ಕಿಂತ ಹೆಚ್ಚು ಜನ ಸಂಖ್ಯೆ ಇದ್ದು, ಪ್ರತಿ ಮನೆ ಬಾಗಿಲಿಗೆ ಹೋಗಿ ದಿನವೂ ಕಸವನ್ನು ಸಂಗ್ರಹಣೆ ಮಾಡಲಾಗುತ್ತದೆ. ಇದನ್ನು ಆಟೋ ರಿಕ್ಷಾಗಳಲ್ಲಿ ಸಾಗಿಸಲಾಗುತ್ತದೆ. ಪ್ರತೀ ರಿಕ್ಷಾದಲ್ಲೂ ಪಾಲಿಥೀನ್ ಬ್ಯಾಗ್ ಗಳಳಿರುತ್ತವೆ. ಘನ ತ್ಯಾಜ್ಯವನ್ನು ಈ ಬ್ಯಾಗ್ ಗಳಿಗೆ ಹಾಕಲಾಗುತ್ತದೆ.
ಇನ್ನು ತೆಲಂಗಾಣದ ಸಿದ್ದಿಪೇಟೆ ಎರಡನೇ ಸ್ಥಾನ ಮತ್ತು ಮೈಸೂರಿನ ಪಿರಿಯಾಪಟ್ಟಣ ಮೂರನೇ ಸ್ಥಾನವನ್ನು ಪಡೆದಿದೆ. ಇನ್ನು ಟಾಪ್ 20 ಸ್ಥಾನಗಳಲ್ಲಿ ಕರ್ನಾಟಕದ ಹುಣಸೂರು, ಪಿರಿಯಾಪಟ್ಟಣ ಮಾತ್ರವಲ್ಲದೇ ದಕ್ಷಿಣ ಕನ್ನಡದ ಪುತ್ತೂರು ಮತ್ತು ಮೂಲ್ಕಿಯೂ ಸ್ಥಾನ ಪಡೆದಿದೆ.