ಸುತ್ತೂರು ಶ್ರೀಗಳಿಂದ ಮೈಸೂರು ಮೃಗಾಲಯಕ್ಕೆ ಹಣಕಾಸಿನ ನೆರವು
ಮೈಸೂರು, ಜೂನ್ 13: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯು ಕೊರೊನಾ ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ಮೃಗಾಲಯಕ್ಕೆ ಸಹಾಯ ಹಸ್ತ ಚಾಚಿದ್ದು, ಮೈಸೂರಿನ ಜಯಚಾಮರಾಜೆಂದ್ರ ಮೃಗಾಲಯಕ್ಕೆ 5 ಲಕ್ಷ ರುಪಾಯಿಗಳ ಹಣಕಾಸಿನ ನೆರವು ನೀಡಿದ್ದಾರೆ.
Recommended Video
ಅಮೂಲ್ಯ
ಲಿಯೊನಾ
ಸಿಕ್ಕಿದೆ
ಬೇಲ್..!
|
Amulya
Leone
gets
bail
|
Oneindia
Kannada
ಸುತ್ತೂರು ಮಠದಿಂದ ಸಿಎಂ ಪರಿಹಾರ ನಿಧಿಗೆ 50ಲಕ್ಷ ರೂ. ದೇಣಿಗೆ
ಸುಮಾರು ಎರಡೂವರೆ ತಿಂಗಳುಗಳ ಕಾಲ ಲಾಕ್ಡೌನ್ ಇದ್ದಿದ್ದರಿಂದ ಮೃಗಾಲಯಕ್ಕೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಹೀಗಾಗಿ ಮೃಗಾಲಯದಲ್ಲಿನ ಪ್ರಾಣಿಗಳ ಆಹಾರ ನಿರ್ವಹಣೆಗೆ ಹಣಕಾಸಿನ ಸಮಸ್ಯೆ ಎದುರಾಗಿತ್ತು.
ಮೃಗಾಲಯಕ್ಕೆ ಜನರು ಬರದೆ ಇರುವ ಕಾರಣ, ಪ್ರಾಣಿಗಳ ನಿರ್ವಹಣೆಗೆ ಹಣಕಾಸಿನ ನೆರವು ಬೇಕಿದೆ. ಹೀಗಾಗಿ ಈಗಾಗಲೇ ಅನೇಕರು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಇದೀಗ ಸುತ್ತೂರು ಶ್ರೀಗಳು 5 ಲಕ್ಷ ರೂಪಾಯಿ ನೀಡಿದ್ದಾರೆ.
ಶ್ರೀಗಳಿಂದ ಆರ್ಥಿಕ ನೆರವು ಸಿಕ್ಕಿದ್ದು, ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿದೇಶಕರ ಅಜಿತ್ ಕುಲಕರ್ಣಿ ಧನ್ಯವಾದ ತಿಳಿಸಿದ್ದಾರೆ.
Comments
English summary
Suttur Jagadguru Sri Shivarathri Deshikendra Mahaswamiji donates 5 lakh to mysore zoo.