ಸುತ್ತೂರು ಮಠದ ಧರ್ಮನಿಷ್ಠೆ, ಸಕಾರಾತ್ಮಕ ಶಕ್ತಿ ಪ್ರಸಿದ್ಧಿ: ರಾಜ್ಯಪಾಲ ಗೆಹ್ಲೋಟ್ ಶ್ಲಾಘನೆ
ಮೈಸೂರು, ಆಗಸ್ಟ್, 18: ಸದಾಚಾರ, ಧರ್ಮನಿಷ್ಠೆ ಮತ್ತು ಸಕಾರಾತ್ಮಕ ಶಕ್ತಿ ಹೊಂದಿರುವ ಸುತ್ತೂರು ಮಠವು ನಾಡಿನ ಪ್ರಸಿದ್ಧ ಮಠಗಳಲ್ಲಿ ಒಂದಾಗಿದೆ. ಮಠವು ಸಾಮಾಜಿಕ ಪ್ರಗತಿಯಲ್ಲಿ ಮಹತ್ವದ ಕೊಡುಗೆಯನ್ನು ನೀಡಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಸುತ್ತೂರು ಮಠದ 23ನೇ ಗುರುಗಳಾದ ಜಗದ್ಗುರು ಡಾ. ರಾಜೇಂದ್ರ ಮಹಾಸ್ವಾಮೀಜಿಯವರ 107ನೇ ಜಯಂತೋತ್ಸವವನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, "ಸಾಧುಗಳು, ಸಂತರು ಮತ್ತು ಗುರುಗಳ ಜನ್ಮ ದಿನಾಚರಣೆಯನ್ನು ಆಚರಿಸುವುದು ರಾಷ್ಟ್ರದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ನಮ್ಮ ಧರ್ಮದ ಏಕತೆ, ಸಮಗ್ರತೆ ಮತ್ತು ಸನಾತನ ಧರ್ಮದ ಪರಂಪರೆಯನ್ನು ಶ್ರೀಮಂತಗೊಳಿಸುವಲ್ಲಿ ಸಾಧುಗಳು, ಸಂತರು ಅಪಾರ ಕೊಡುಗೆ ನೀಡಿದ್ದಾರೆ. ರಾಜೇಂದ್ರ ಮಹಾಸ್ವಾಮಿ ಅವರು ಚಿಂತನಾಶೀಲರಾಗಿದ್ದರು. ಹಾಗೆಯೇ ಧರ್ಮ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಪೋಷಕರಾಗಿದ್ದರು. ಸಮಾಜದಲ್ಲಿನ ಅಸಮಾನತೆ, ಬಡತನ ಮತ್ತು ಅನಕ್ಷರತೆಯಯನ್ನು ಹೋಗಲಾಡಿಸಲು ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದರು. ಈ ಹಿಂದೆ ಮೈಸೂರಿನಲ್ಲಿ ನಿರ್ಗತಿಕ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ನಿರಂಜನಾಲಯವನ್ನು ಅವರ ವಾಸಸ್ಥಳದಲ್ಲಿ ಪ್ರಾರಂಭಿಸಿದ್ದರು. ಅದು ನಂತರ ಜೆಎಸ್ಎಸ್ ಮಹಾವಿದ್ಯಾಪೀಠ ಎಂಬ ಸಂಸ್ಥೆಯ ರೂಪವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿ ಆಯಿತು," ಎಂದು ತಿಳಿಸಿದರು.
ಜೆಎಸ್ಎಸ್
ಬಗ್ಗೆ
ಗೆಹ್ಲೋಟ್
ಹೇಳಿದ್ದೇನು?
ಸಮಾಜವನ್ನು
ಸ್ವಾವಲಂಬಿಯನ್ನಾಗಿ
ಮಾಡಲು
ಜೆಎಸ್ಎಸ್
ಮಹಾವಿದ್ಯಾಪೀಠವು
ಕಾರ್ಯನಿರ್ವಹಿಸುತ್ತಿದೆ.
ಸಾಮಾಜಿಕ
ಸಮಾನತೆ,
ಸಮೃದ್ಧಿ,
ಶ್ರೇಷ್ಠತೆ,
ಸಬಲೀಕರಣ,
ಉದ್ಯಮಶೀಲತೆ
ಮತ್ತು
ಜ್ಞಾನೋದಯಕ್ಕಾಗಿ
ಅಮೂಲ್ಯವಾದ
ಶಿಕ್ಷಣವನ್ನು
ನೀಡುವ
ಉದ್ದೇಶದಿಂದ
ಜೆಎಸ್ಎಸ್
ಕಾರ್ಯನಿರ್ವಹಿಸುತ್ತಿದೆ.
"ಜೆಎಸ್ಎಸ್
ಮಹಾವಿದ್ಯಾಪೀಠದ
ಆಶ್ರಯದಲ್ಲಿ
ಅವರು
ಅಕ್ಷರ
ದಾಸೋಹಕ್ಕಾಗಿ
ಶಾಲೆಗಳು
ಮತ್ತು
ಕಾಲೇಜುಗಳನ್ನು
ಪ್ರಾರಂಭಿಸಿದರು.
ಅನ್ನ
ದಾಸೋಹಕ್ಕಾಗಿ
ವಸತಿ
ಮತ್ತು
ಆರೋಗ್ಯ
ದಾಸೋಹಕ್ಕಾಗಿ
ಆಸ್ಪತ್ರೆಗಳನ್ನು
ಪ್ರಾರಂಭಿಸಿದರು,"
ಎಂದರು.
1953ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಮುಖ್ಯಸ್ಥರಾಗಿದ್ದ ಗೌರವಾನ್ವಿತ ಜಯಚಾಮರಾಜೇಂದ್ರ ಒಡೆಯರ್ ಅವರು ಸಮಾಜಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಇವರ ಕೊಡುಗೆಗಾಗಿ ರಾಜೇಂದ್ರ ಸ್ವಾಮೀಜಿ ಅವರಿಗೆ "ರಾಜಗುರುತಿಲಕ" ಎಂಬ ಬಿರುದು ನೀಡಿ ಗೌರವಿಸಿದರು. 1989ರಲ್ಲಿ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ನೀಡಲಾಯಿತು.
ಜೆಎಸ್ಎಸ್
ಕಾರ್ಯಕ್ಕೆ
ಶ್ಲಾಘನೆ
ಪುರಾತನ
ಗ್ರಂಥಗಳ
ಶ್ರೀಮಂತ
ಜ್ಞಾನವನ್ನು
ಪ್ರಸಾರ
ಮಾಡುವಂತಾಗಲಿ.
ಸುತ್ತೂರು
ಮಠವು
ದೇಶ
ಮತ್ತು
ವಿದೇಶಗಳಲ್ಲಿ
300ಕ್ಕೂ
ಹೆಚ್ಚು
ಶಿಕ್ಷಣ
ಮತ್ತು
ಇತರ
ಸಂಸ್ಥೆಗಳ
ಮೂಲಕ
ಅತ್ಯುತ್ತಮ
ಸೇವೆಯನ್ನು
ಮಾಡುತ್ತಿದೆ.
ಅಗತ್ಯವಿರುವ
ಮತ್ತು
ಬಡ
ವಿದ್ಯಾರ್ಥಿಗಳಿಗೆ
ಮೌಲ್ಯಾಧಾರಿತ
ಶಿಕ್ಷಣವನ್ನು
ನೀಡಲು
ಶ್ರೀಮಠವು
ಹೆಚ್ಚಯ
ಒತ್ತು
ನೀಡಿದೆ.
ಇಲ್ಲಿ
ಉಚಿತ
ಊಟ
ಮತ್ತು
ವಸತಿ
ವ್ಯವಸ್ಥೆ
ಮಾಡಲಾಗುತ್ತಿದ್ದು,
ಸಾವಿರಾರು
ಬಡ
ವಿದ್ಯಾರ್ಥಿಗಳಿಗೆ
ಉಚಿತ
ಶಿಕ್ಷಣ
ನೀಡುತ್ತಿದೆ
ಎಂದು
ಶ್ಲಾಘನೀಯ
ವ್ಯಕ್ತಪಡಿಸಿದರು.
ಮಠದ ಈಗಿನ 24ನೇ ಜಗದ್ಗುರುಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ತಮ್ಮ ಗುರುಪರಂಪರೆಯನ್ನು ಹೆಚ್ಚಿಸುತ್ತಾ ಇದ್ದಾರೆ. ಶ್ರೀಮಠದ ಸೇವಾ ಮನೋಭಾವ ಮತ್ತು ಕೀರ್ತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಶ್ಲಾಘಿಸಿದರು. ಕಾರ್ಯಕ್ರಮಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ, ಸಚಿವರಾದ ಎಸ್.ಟಿ ಸೋಮಶೇಖರ್, ಮೇಯರ್ ಸುನಂದಾ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.