ನನಗೆ ಯಾವುದೇ ಗೊಂದಲ ಇಲ್ಲ, ನನ್ನ ಜೊತೆ ಅವರಿದ್ದಾರೆ: ಸುಮಲತಾ
Recommended Video
ಮೈಸೂರು, ಮಾರ್ಚ್ 20: ಈ ಬಾರಿ ಮಂಡ್ಯ ಲೋಕಸಭಾ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದೆ. ರಾಜ್ಯದಲ್ಲೇ ಹೈಟೆನ್ಷನ್ ಕ್ಷೇತ್ರವೆಂದೇ ಗುರುತಿಸಿಕೊಂಡಿರುವ ಈ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಟಿ ಸುಮಲತಾ ಇಂದು ನಾಮಪತ್ರ ಸಲ್ಲಿಸಲಿದ್ದು, ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೆ ನೀವೂ ಬನ್ನಿ: ಸುಮಲತಾ ಅಂಬರೀಷ್ ಆಹ್ವಾನ
ತಾಯಿ
ಚಾಮುಂಡೇಶ್ವರಿ
ಮುಂದೆ
ನಾಮಪತ್ರ
ಇರಿಸಿ
ನಟಿ
ಸುಮಲತಾ
ಪೂಜೆ
ನೆರವೇರಿಸಿ,
ವಿಶೇಷ
ಪ್ರಾರ್ಥನೆ
ಸಲ್ಲಿಸಿದರು.
ನಂತರ
ಸುದ್ದಿಗಾರರ
ಜೊತೆ
ಮಾತನಾಡಿದ
ಅವರು,
ಪ್ರತಿ
ಬಾರಿ
ಅಂಬರೀಶ್
ನಾಮಪತ್ರ
ಸಲ್ಲಿಕೆಗೂ
ಮುನ್ನ
ಚಾಮುಂಡಿ
ಬೆಟ್ಟಕ್ಕೆ
ಬರುತ್ತಿದ್ದರು.
ಅವರ
ಜೊತೆಯಲ್ಲಿ
ನಾನು
ಇರುತ್ತಿದ್ದೆ.
ಇವತ್ತು
ನಾನು
ನಾಮಪತ್ರ
ಸಲ್ಲಿಕೆಗೂ
ಮುನ್ನ
ಬೆಟ್ಟಕ್ಕೆ
ಬಂದಿದ್ದೇನೆ.
ನನ್ನ
ಜೊತೆ
ಅವರಿದ್ದಾರೆ.
ನನಗೆ
ಯಾವುದೇ
ಗೊಂದಲ
ಇಲ್ಲ
ಎಂದರು.
ಅಭಿಮಾನಿಗಳ ಜೊತೆ ನಾಮಪತ್ರ ಸಲ್ಲಿಸಲು ಹೋಗುತ್ತೇನೆ. ಒಂದು ಒಳ್ಳೆಯ ಉದ್ದೇಶದಿಂದ ಹೆಜ್ಜೆ ಇಟ್ಟಿರುವುದರಿಂದ ಒಳ್ಳೆಯದೇ ನಡೆಯುತ್ತದೆ ಎಂಬ ನಂಬಿಕೆ ಇದೆ ಎಂದು ಸುಮಲತಾ ವಿಶ್ವಾಸ ವ್ಯಕ್ತಪಡಿಸಿದರು. ನಟಿ ಸುಮಲತಾ ಜೊತೆ ನಟರಾದ ರಾಕ್ ಲೈನ್ ವೆಂಕಟೇಶ್, ಪುತ್ರ ಅಭಿಷೇಕ್ ಜೊತೆ ಇದ್ದರು.