ಪ್ರೇಮಿಗಳ ದಿನ ಆಚರಿಸದಂತೆ ಕರಪತ್ರ ಹಂಚಿದ ಶ್ರೀರಾಮ ಸೇನೆ
Recommended Video
ಮೈಸೂರು, ಫೆಬ್ರವರಿ 14: ಶ್ರೀರಾಮ ಸೇನೆ, ಮೈಸೂರು ಘಟಕದ ವತಿಯಿಂದ ಈ ದಿನಾಚರಣೆ ನಮಗೆ ಬೇಡ ಎಂದು ಜಾಗೃತಿ ಮೂಡಿಸುವ ಕರಪತ್ರ ಹಂಚಲಾಯಿತು.
ನಗರದ ಜೆಎಲ್ಬಿ ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಮುಂಭಾಗ ಶ್ರೀರಾಮಸೇನೆ ಕಾರ್ಯಕರ್ತರು ವಿದ್ಯಾರ್ಥಿನಿಯರಿಗೆ ಕರಪತ್ರ ಹಂಚುವ ಮೂಲಕ ದೇಶದ ಸಂಸ್ಕೃತಿ ಉಳಿಸಿ ಎಂದು ಮನವಿ ಮಾಡಿದರು.
ಮೈಸೂರಿನಲ್ಲಿರುವ ಈ ಎಲ್ಲಾ ತಾಣಗಳು ಪ್ರೇಮಿಗಳಿಗೆ ಅಚ್ಚುಮೆಚ್ಚು
ಈ ಸಂದರ್ಭದಲ್ಲಿ ಮಾತನಾಡಿದ ಸಂಚಾಲಕ ಸಂಜಯ್, ನಾವು ಪ್ರೀತಿಯನ್ನು ವಿರೋಧಿಸುವುದಿಲ್ಲ. ಆದರೆ ವಿದೇಶಿಯರು ನಿರ್ಧರಿಸಿದ ದಿನಾಂಕದಂದು ಆಚರಿಸಲು ಮುಂದಾದರೆ ಅದು ಪ್ರೇಮಿಗಳ ದಿನವಲ್ಲ. ಡ್ರಗ್ಸ್ ಮಾಫಿಯಾ, ಸೆಕ್ಸ್ ಮಾಫಿಯಾ, ಮಲ್ಟಿನ್ಯಾಷನಲ್ ಕಂಪನಿಗಳ ಆಕ್ರಮಣದ ಮೂಲ ಪ್ರೇಮಿಗಳ ದಿನಾಚರಣೆ. ಈ ಮೂಲಕ ಯುವ ಜನತೆ ಎಚ್ಚರವಹಿಸಬೇಕು ಎಂದರು.
ಇನ್ನು ಕಾಲೇಜು ಸುತ್ತ ಗೋಡೆಗಳ ಮೇಲೆ ಭಿತ್ತಿ ಪತ್ರವನ್ನು ಅಂಟಿಸಿದರು. ಪ್ರೇಮಿಗಳ ದಿನಾಚರಣೆಯಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಿ ಕಾಲೇಜಿನ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.