ಕುಮಾರಸ್ವಾಮಿಗೇ ಜಯವಾಗಲೆಂದು ಮೈಸೂರಿನಲ್ಲಿ ವಿಶೇಷ ಪೂಜೆ
ಮೈಸೂರು, ಜುಲೈ 17: ನಾಳೆ ಸಿಎಂ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ವಿಶ್ವಾಸಮತ ಯಾಚಿಸಲು ತಯಾರಾಗಿದೆ. ಅತೃಪ್ತ ಶಾಸಕರ ಸಿಟ್ಟು ಇನ್ನೂ ಕಡಿಮೆಯಾದಂತೆ ಕಾಣುತ್ತಿಲ್ಲವಾದರೂ ವಿಶ್ವಾಸಮತದ ಮೇಲಿನ ನಂಬಿಕೆಯನ್ನು ಮಾತ್ರ ಮೈತ್ರಿ ಸರ್ಕಾರ ಕೈಬಿಟ್ಟಿಲ್ಲ.
ಕನಿಕರ ಹುಟ್ಟಿಸುವಂಥ ಭಾಷಣ ಮಾಡಿ ನಿರ್ಗಮನಕ್ಕೆ ಸಿದ್ಧರಾಗ್ತಾರಾ ಕುಮಾರಸ್ವಾಮಿ?
ಇದೇ ಸಂದರ್ಭ, ಸರ್ಕಾರ ಉಳಿಸಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರೇ ಮುಂದುವರಿಯಬೇಕೆಂದು ಪ್ರಾರ್ಥಿಸಿ ಜೆಡಿಎಸ್ ಕಾರ್ಯಕರ್ತರು ಹಾಗೂ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಬೆಳವಾಡಿ ಗ್ರಾಮಸ್ಥರು ಮೈಸೂರಿನ ಈಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನಾಳೆ ಕುಮಾರಸ್ವಾಮಿ ವಿಶ್ವಾಸ ಮತಯಾಚನೆ ಮಾಡಲಿದ್ದು, ಅವರಿಗೆ ಜಯವಾಗಲೆಂದು ಗ್ರಾಮಸ್ಥರು ಪೂಜೆ ಸಲ್ಲಿಸಿದ್ದಲ್ಲದೇ ಘೋಷಣೆಯನ್ನೂ ಕೂಗಿದರು.
Comments
English summary
Special pooja offered by JDS Activists in Mysuru for CM H D Kumarswamy success. Kumaraswamy will ask for confidant vote proceeding.
Story first published: Wednesday, July 17, 2019, 13:54 [IST]