ಶೌಚಾಲಯ ತೆರವುಗೊಳಿಸಲು ಒತ್ತಾಯಿಸಿ ಕುಟುಂಬಕ್ಕೆ ಬಹಿಷ್ಕಾರ
ಮೈಸೂರು, ಜುಲೈ 20: ಸರ್ಕಾರದಿಂದ ಅನುದಾನ ಪಡೆದು ನಿರ್ಮಿಸಿದ ಶೌಚಾಲಯವನ್ನು ತೆರವುಗೊಳಿಸಿ ಎಂದು ಒತ್ತಡ ಹೇರುತ್ತಿರುವುದಲ್ಲದೆ ತಮಗೆ ಬಹಿಷ್ಕಾರ ಹಾಕಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳದಿದ್ದಲ್ಲಿ ತಮಗೆ ಆತ್ಮಹತ್ಯೆಯೊಂದೇ ದಾರಿ ಎಂದು ನಂಜನಗೂಡಿನ ಶಿರಮಳ್ಳಿ ಗ್ರಾಮದ ಮಹದೇವಪ್ಪ ಎಂಬುವರು ನಂಜನಗೂಡು ತಹಶೀಲ್ದಾರರ ಮೊರೆ ಹೋಗಿದ್ದು, ತಹಶೀಲ್ದಾರ್ ಅವರು ಕ್ರಮಕ್ಕೆ ಸೂಚಿಸಿದ್ದಾರೆ.
ತಹಶೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಿರುವ ಅವರು, ಶಿರಮಳ್ಳಿ ಗ್ರಾಮದಲ್ಲಿ ಚರಂಡಿ ಕಾಮಗಾರಿಗೆ ಸಂಬಂಧಿಸಿದಂತೆ ತಮಗೆ ಸೇರಿರುವ ಹಾಗೂ ಸರ್ಕಾರದಿಂದ ಅನುದಾನ ಪಡೆದು ನಿರ್ಮಿಸಿರುವ ಶೌಚಾಲಯವನ್ನು ತೆರವುಗೊಳಿಸಿ ಎಂದು ಒತ್ತಡ ಹೇರುತ್ತಿದ್ದು, ಬಹಿಷ್ಕಾರ ಹಾಕಿದ್ದಾರೆಂದು ಅರ್ಜಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಮಂಡ್ಯದಲ್ಲಿ ದಲಿತ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ
ಶೌಚಾಲಯದ ವಿಚಾರವನ್ನು ಮುಂದಿಟ್ಟುಕೊಂಡು ಗ್ರಾಮದಲ್ಲಿ ಕೆಲವರು ತಮಗೆ ಬಹಿಷ್ಕಾರ ಹಾಕಿದ್ದಾರೆ. ಇದರಿಂದ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಮತ್ತು ವ್ಯವಸಾಯದ ಕಾರ್ಯಗಳನ್ನು ನಡೆಸಲು ತೊಂದರೆಯಾಗುತ್ತಿದೆ. ನಮಗೆ ನ್ಯಾಯ ದೊರಕಿಸಿಕೊಡಿ ಇಲ್ಲದಿದ್ದಲ್ಲಿ ನಮಗೆ ಆತ್ಮಹತ್ಯೆಯೊಂದೇ ದಾರಿ ಎಂದಿದ್ದರು. ಅರ್ಜಿಯನ್ನು ಪರಿಶೀಲಿಸಿದ ತಹಶೀಲ್ದಾರ್ ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ನಿಯಮಾನುಸಾರ ಅಗತ್ಯ ಕ್ರಮ ವಹಿಸಲು ತಿಳಿಸಿದ್ದಾರೆ.