ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುತ್ತೂರು ಮಠದಲ್ಲಿ ಆರು ಗಂಧದ ಮರ ಕಳುವು

|
Google Oneindia Kannada News

ಮೈಸೂರು, ಜುಲೈ 15: ಮೈಸೂರಿನ ಪ್ರತಿಷ್ಠಿತ ಸುತ್ತೂರು ಮಠದಲ್ಲಿ ನೈಸರ್ಗಿಕವಾಗಿ ಬೆಳೆದಿದ್ದ ಒಟ್ಟು 6 ಗಂಧದ ಮರಗಳನ್ನು ಕಳವು ಮಾಡಲಾಗಿದೆ.

ಇದೇ ಜುಲೈ 10ರಂದು ರಾತ್ರಿ ಮಠದ ಆವರಣದಲ್ಲಿನ ಕಲ್ಯಾಣಿ ಬಳಿ ಇರುವ 2 ಶ್ರೀಗಂಧದ ಮರಗಳನ್ನು ಕತ್ತರಿಸಿಕೊಂಡು ಹೋಗಿದ್ದರು. ಆದರೆ, ಮಠದ ವತಿಯಿಂದ ಪೊಲೀಸರಿಗೆ ದೂರು ನೀಡಿರಲಿಲ್ಲ.

ದೇವರಮನೆಯ ದೇವಸ್ಥಾನದಲ್ಲಿ ಹುಂಡಿ ಕಳ್ಳತನ ದೇವರಮನೆಯ ದೇವಸ್ಥಾನದಲ್ಲಿ ಹುಂಡಿ ಕಳ್ಳತನ

ಆದರೆ ಮತ್ತೆ ಜುಲೈ 14ರಂದು ಮಠದ ಆವರಣಕ್ಕೆ ರಾತ್ರಿ ವೇಳೆ ಬಂದ ಗಂಧಚೋರರು, ನಾಲ್ಕು ಮರಗಳನ್ನು ಕತ್ತರಿಸಿಕೊಂಡು ಹೋಗಿದ್ದಾರೆ.

six sandalwood trees theft in Suttur mutt at Mysuru

ಮಠದ ಕಾಂಪೌಂಡ್ ಗೆ ಅಳವಡಿಸಿರುವ ಕಬ್ಬಿಣದ ಮುಳ್ಳುತಂತಿಗಳನ್ನೇ ಕತ್ತರಿಸಿ ಮರವನ್ನು ಹೊತ್ತೊಯ್ದಿದ್ದಾರೆ. ಆರು ಮರಗಳ ಒಟ್ಟು ಅಂದಾಜು ಬೆಲೆ 45 ಸಾವಿರವಾಗಿದ್ದು, ಕಳ್ಳರನ್ನು ಪತ್ತೆ ಮಾಡಬೇಕು ಎಂದು ಮಠದ ವತಿಯಿಂದ ಶಿವಣ್ಣ ಎಂಬುವವರು ಕೆ.ಆರ್.ಠಾಣೆಗೆ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

English summary
A six sandalwood trees were stolen at the prestigious sutturu Matt in Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X