ಸೆಲ್ಫಿ ತೆಗೆಯಲು ಬಂದವನಿಗೆ ಬಿತ್ತು ಸಿದ್ದರಾಮಯ್ಯರಿಂದ ಏಟು
Recommended Video
ಮೈಸೂರು, ಫೆಬ್ರವರಿ 9: ರಾಜಕಾರಣಿಗಳು, ಚಿತ್ರರಂಗದವರು ಅಂದರೆ ಕೇಳಬೇಕೆ ಸಾಮಾನ್ಯ ಜನರು, ಅಭಿಮಾನಿಗಳು ಫೋಟೊಗಾಗಿ ಮುಗಿಬೀಳುವುದು ಸಾಮಾನ್ಯ ಆದರೆ ಸೆಲ್ಫಿ ತೆಗೆಯಲು ಬಂದವನಿಗೆ ಸಿದ್ದರಾಮಯ್ಯ ಏಟು ಕೊಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.
ಸೆಲ್ಫಿ ಚಿತ್ರ ತೆಗೆದುಕೊಳ್ಳಲು ಬಂದ ಅಭಿಮಾನಿಯೊಬ್ಬರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏಟು ಕೊಟ್ಟ ಪ್ರಸಂಗ ನಡೆದಿದೆ.
ಮಾಜಿ
ಮುಖ್ಯಮಂತ್ರಿ
ಅವರು
ಕನಕ
ಭವನ
ಉದ್ಘಾಟನೆ
ಕಾರ್ಯಕ್ರಮಕ್ಕೆ
ಆಗಮಿಸಿದ
ಸಂದರ್ಭದಲ್ಲಿ
ಅಭಿಮಾನಿಗಳು
ಸೆಲ್ಫಿ
ಚಿತ್ರ
ತೆಗೆದುಕೊಳ್ಳಲು
ಮುಗಿಬಿದ್ದಿದ್ದರು.
ದಾರಿಗೆ ಅಡ್ಡ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಅಭಿಮಾನಿ ಮೇಲೆ ಕೋಪ ಪ್ರದರ್ಶಿಸಿರುವ ಅವರು, ಆತನನ್ನು ತಳ್ಳಿ ಗೂಸಾ ನೀಡಿದ್ದಾರೆ.
ಈ ಹಿಂದೆ ಸೆಲ್ಫಿ ತೆಗೆದುಕೊಳ್ಳಲು ಯತ್ನ ನಡೆಸಿದ್ದ ಯುವಕನೊಬ್ಬನ ಮೇಲೆ ಸಚಿವ ಡಿ.ಕೆ.ಶಿವಕುಮಾರ್ ಅವರು ಕೆಂಡಾಮಂಡಲರಾಗಿದ್ದ ಘಟನೆ ಬೆಳಗಾವಿಯಲ್ಲಿ ನಡೆದಿತ್ತು. ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ ಈ ರೀತಿ ನಡೆದುಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.