ಕೊನೆಗೂ ಒಂದಾದ ಸಿದ್ದರಾಮಯ್ಯ, ಜಿಟಿಡಿ:ಇಂದು ಚಾಮುಂಡೇಶ್ವರಿಯಲ್ಲಿ ಭರ್ಜರಿ ಪ್ರಚಾರ
ಮೈಸೂರು, ಏಪ್ರಿಲ್ 14: ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಬದ್ಧ ಎದುರಾಳಿಗಳಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಕೊನೆಗೂ ನಿನ್ನೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಅಲ್ಲದೇ ಇಂದು ಸಹ ತಮ್ಮ ರಾಜಕೀಯ ಕರ್ಮ ಭೂಮಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಂಟಿಯಾಗಿ ಪ್ರಚಾರ ಕೈಗೊಳ್ಳಲಿದ್ದಾರೆ. ಈ ಬೆಳವಣಿಗೆ ಮೈಸೂರು-ಕೊಡಗು ಕ್ಷೇತ್ರದ ಚುನಾವಣೆ ಫಲಿತಾಂಶದ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರಬಹುದು ಎಂಬ ಚರ್ಚೆ ಕಾವೇರಿದೆ.
ಕೃಷ್ಣ ಬೈರೇಗೌಡ ಪರ ಕುಮಾರಸ್ವಾಮಿ, ಸಿದ್ದರಾಮಯ್ಯ ಪ್ರಚಾರ
ಬೆಂಗಳೂರಿನಲ್ಲಿ ಕಳೆದ ವಾರ ನಡೆದ ಮಾತುಕತೆ ಬಳಿಕ ಇಬ್ಬರು ಜತೆಯಾಗಲು ಒಪ್ಪಿಗೆ ಸೂಚಿಸಿದ್ದರು. ಮಂಡ್ಯ, ಹಾಸನ ಮತ್ತು ತುಮಕೂರು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಲು ಜೆಡಿಎಸ್ ಗೆ ಕಾಂಗ್ರೆಸ್ನ ಬೆಂಬಲ ಬೇಕಿದೆ. ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವುದು ಜೆಡಿಎಸ್ ಗೆ ಅನಿವಾರ್ಯವಾಗಿದೆ. ಈ ಕಾರಣ ಜಿ.ಟಿ.ದೇವೇಗೌಡ ಅವರು ಪ್ರಚಾರಕ್ಕೆ ಇಳಿದಿದ್ದಾರೆ.
ಸಿದ್ದರಾಮಯ್ಯ ಮತ್ತು ಜಿ.ಟಿ.ದೇವೇಗೌಡ ಅವರು ಚಾಮುಂಡೇಶ್ವರಿ ಕ್ಷೇತ್ರದ ವಿವಿಧೆಡೆ ಜಂಟಿಯಾಗಿ ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ಕಡಕೊಳ, ಜಯಪುರ, ಇಲವಾಲ ಮತ್ತು ಸಿದ್ದಲಿಂಗಪುರದಲ್ಲಿ ಪ್ರಚಾರ ಸಭೆ ನಡೆಸಲು ಉದ್ದೇಶಿಸಲಾಗಿದೆ.
ದೇವೇಗೌಡ ಪರ ಸಿದ್ದರಾಮಯ್ಯ ಮತಯಾಚನೆ: ಮೋದಿ ವಿರುದ್ಧ ವಾಗ್ದಾಳಿ
ಕಳೆದ
ವರ್ಷ
ಎದುರಾಳಿಗಳಾಗಿ
ಮತಯಾಚನೆ
ಮಾಡಿದ್ದ
ಈ
ನಾಯಕರು
ಇದೀಗ
ಜಂಟಿಯಾಗಿ
ಪ್ರಚಾರ
ನಡೆಸಲಿರುವುದು
ಉಭಯ
ಪಕ್ಷಗಳ
ಕಾರ್ಯಕರ್ತರಲ್ಲಿ
ಕುತೂಹಲ
ಮೂಡಿಸಿದೆ.
ಮೈಸೂರು
ಲೋಕಸಭಾ
ಕ್ಷೇತ್ರದ
ಅಭ್ಯರ್ಥಿಯ
ಗೆಲುವಿನಲ್ಲಿ
ಚಾಮುಂಡೇಶ್ವರಿ
ವಿಧಾನಸಭಾ
ಕ್ಷೇತ್ರದ
ಮತಗಳೂ
ನಿರ್ಣಾಯಕ
ಎನಿಸಲಿವೆ.
ಇತರ
ಕ್ಷೇತ್ರಗಳಿಗೆ
ಹೋಲಿಸಿದರೆ
ಇಲ್ಲಿ
ಮತದಾರರು
ಹೆಚ್ಚಿನ
ಸಂಖ್ಯೆಯಲ್ಲಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ವಿಧಾನಸಭಾ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡ 1.21 ಲಕ್ಷ ಮತಗಳನ್ನು ಹಾಗೂ ಸಿದ್ದರಾಮಯ್ಯ 85 ಸಾವಿರ ಮತಗಳನ್ನು ಪಡೆದುಕೊಂಡಿದ್ದರು. ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ ಪರೋಕ್ಷವಾಗಿ ಜಿ.ಟಿ.ದೇವೇಗೌಡ ಅವರನ್ನು ಬೆಂಬಲಿಸಿತ್ತು.
ಇದರಿಂದಾಗಿ ಅವರಿಗೆ ಬಿದ್ದ ಮತಗಳು ಒಂದು ಲಕ್ಷದ ಗಡಿ ದಾಟಿತ್ತು. ಹಾಗಾಗಿ ಇಂದಿನ ಮೈತ್ರಿ ನಾಯಕರ ಪ್ರಚಾರ ಮತವಾಗಿ ಪರಿಣಮಿಸುತ್ತದೆಯಾ ಕಾದುನೋಡಬೇಕಿದೆ.