ಕಾಂಗ್ರೆಸ್ 'ಕೈ' ತಪ್ಪಿದ ಮೈಸೂರು ಜಿಲ್ಲಾ ಪಂಚಾಯಿತಿ
ಮೈಸೂರು, ಮೇ 07 : ತವರು ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖಭಂಗವಾಗಿದೆ. ಜೆಡಿಎಸ್ ಪಕ್ಷದ ರಣ ತಂತ್ರಕ್ಕೆ ಮಣಿದ ಕಾಂಗ್ರೆಸ್, 22 ಸದಸ್ಯ ಬಲ ಹೊಂದಿದ್ದರೂ ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರ ವಂಚಿತವಾಗಿದೆ.
ಶನಿವಾರ
ಜಿಲ್ಲಾ
ಪಂಚಾಯಿತಿ
ಅಧ್ಯಕ್ಷ
ಮತ್ತು
ಉಪಾಧ್ಯಕ್ಷರ
ಆಯ್ಕೆಗೆ
ಚುನಾವಣೆ
ನಡೆಯಿತು.
ಜೆಡಿಎಸ್ನ
ನಹಿಮಾ
ಸುಲ್ತಾನ
ಅವರು
ಅಧ್ಯಕ್ಷರಾಗಿ
ಆಯ್ಕೆಯಾದರು.
ಬಿಜೆಪಿಯ
ಕೆ.ಜಿ.ನಾಗರಾಜ್
ಉಪಾಧ್ಯಕ್ಷರಾಗಿ
ಆಯ್ಕೆಯಾದರು.
ಮೈಸೂರು
ಜಿಲ್ಲಾ
ಪಂಚಾಯಿತಿ
ಇತಿಹಾಸದಲ್ಲೇ
ಮೊದಲ
ಬಾರಿಗೆ
ಅಲ್ಪಸಂಖ್ಯಾತ
ಸಮುದಾಯಕ್ಕೆ
ಸೇರಿದವರು
ಅಧ್ಯಕ್ಷರಾಗಿ
ಆಯ್ಕೆಯಾಗಿದ್ದಾರೆ.
[ಶಿವಮೊಗ್ಗದಲ್ಲಿ
ಯಡಿಯೂರಪ್ಪಗೆ
ಮುಖಭಂಗ]
49 ಸದಸ್ಯ ಬಲದ ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್ 22 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. 18 ಸ್ಥಾನಗಳಲ್ಲಿ ಜೆಡಿಎಸ್ ಮತ್ತು 8 ಸ್ಥಾನಗಳಲ್ಲಿ ಬಿಜೆಪಿ ಸದಸ್ಯರು ಗೆಲುವು ಸಾಧಿಸಿದ್ದರು. ಒಬ್ಬರು ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದರು. [ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಮೀಸಲು ಪಟ್ಟಿ]
ಜೆಡಿಎಸ್ ಮತ್ತು ಬಿಜೆಪಿ ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯಲು ಮೈತ್ರಿ ಮಾಡಿಕೊಂಡಿದ್ದವು. 22 ಸ್ಥಾನಗಳಲ್ಲಿ ಜಯಗಳಿಸಿದರೂ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಸಿಗಲಿಲ್ಲ. ನಹಿಮಾ ಸುಲ್ತಾನ ಅವರು ಕಾಂಗ್ರೆಸ್ನ ಜಯಮ್ಮ ಅವರನ್ನು 5 ಮತಗಳ ಅಂತರದಿಂದ ಸೋಲಿಸಿ ಅಧ್ಯಕ್ಷರಾಗಿ ಆಯ್ಕೆಯಾದರು. [30 ಜಿಲ್ಲೆಗಳ ಪಂಚಾಯ್ತಿ ಫಲಿತಾಂಶ ಸಂಪೂರ್ಣ ವಿವರ]
ಕಾಂಗ್ರೆಸ್ ಪಕ್ಷದವರು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರನ್ನು ಸೆಳೆಯಲು ಪ್ರಯತ್ನ ನಡೆಸಿದ್ದರು. ಆದ್ದರಿಂದ, ಚುನಾವಣೆಗೆ 4 ದಿನವಿರುವಾಗಲೇ ಸದಸ್ಯರೆಲ್ಲಾ ಬೆಂಗಳೂರು ಸಮೀಪದ ಈಗಲ್ ಟನ್ ರೆಸಾರ್ಟ್ಗೆ ಬಂದಿದ್ದರು. ರೆಸಾರ್ಟ್ ರಾಜಕಾರಣಕ್ಕೆ ಕೊನೆಗೂ ಗೆಲುವು ಸಿಕ್ಕಿದೆ.