ದಸರಾ ಉದ್ಘಾಟನೆಗೆ ಆರಿಸಿದ್ದು ಖುಷಿ ತಂದಿದೆ: ಸಾಹಿತಿ ಎಸ್.ಎಲ್. ಭೈರಪ್ಪ
ಮೈಸೂರು, ಆಗಸ್ಟ್ 14: "ದಸರಾ ಉದ್ಘಾಟನೆಗೆ ನನ್ನನ್ನು ಆಯ್ಕೆ ಮಾಡಿದ್ದು ಬಹಳ ಸಂತೋಷವಾಗಿದೆ. ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ" ಎಂದು ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.
ಈ
ಬಾರಿ
ಸಾಹಿತಿ
ಎಸ್
ಎಲ್
ಭೈರಪ್ಪ
ಅವರಿಂದ
ದಸರಾ
ಉದ್ಘಾಟನೆ
ಸುದ್ದಿಗಾರರೊಂದಿಗೆ
ಮಾತನಾಡಿದ
ಅವರು,
"ನಾನು
ಎರಡು
ಮೂರು
ಬಾರಿ
ಹತ್ತಿರದಿಂದ
ದಸರಾ
ನೋಡಿದ್ದೇನೆ.
1949ರಿಂದಲೂ
ದಸರಾ
ನೋಡುತ್ತಾ
ಬಂದಿದ್ದೇನೆ.
ಆಗ
ಮಹಾರಾಜರು
ಅದ್ದೂರಿಯಾಗಿ,
ವೈಭವದಿಂದ
ದಸರಾ
ನಡೆಸುತ್ತಿದ್ದರು.
ಈಗ
ನನ್ನನ್ನು
ದಸರಾ
ಉದ್ಘಾಟನೆಗೆ
ಆಯ್ಕೆ
ಮಾಡಿರುವುದು
ಖುಷಿಯಾಗುತ್ತಿದೆ"
ಎಂದರು.
"ಕಳೆದ ವರ್ಷ ಕೊಡಗಿಗೆ ಮಳೆ ಬಂದಾಗ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. ನೀರು ಕೇಳುವ ತಮಿಳುನಾಡಿನಿಂದ ಕೊಡಗಿಗೆ ಹಣ ಕೇಳಿ ಎಂದಿದ್ದೆ. ಅವರು ನನ್ನ ಪತ್ರಕ್ಕೆ ಉತ್ತರವೂ ಬರೆಯಲಿಲ್ಲ, ಅದನ್ನು ಗಂಭೀರವಾಗಿಯೂ ಪರಿಗಣಿಸಲಿಲ್ಲ. ಈಗಲೂ ಅದೇ ಒತ್ತಾಯ ಮಾಡುತ್ತೀನಿ. ರಾಜ್ಯದಲ್ಲಿ ಹೆಚ್ಚು ನೆರೆ ಬಂದಿದೆ. ನಮ್ಮ ಬಳಿ ಇಲ್ಲದಿದ್ದಾಗಲೂ ನೀರು ಕೇಳುವ ತಮಿಳುನಾಡಿನ ನಿಲುವು ಏನು ಅಂತ ಕೇಳಿ. ಅವರು ಎಷ್ಟು ಹಣ ನಮ್ಮ ರಾಜ್ಯಕ್ಕೆ ಕೊಡುತ್ತಾರೆ ಎಂದು ಪ್ರಶ್ನಿಸಿ. ಈ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪಿಸಿದರೆ ನಾಳೆ ಅದು ಉಪಯೋಗ ಆಗಲಿದೆ. ಹಾಗೆಯೇ ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಿದ ಸರ್ಕಾರವನ್ನು ಈ ವಿಷಯಕ್ಕೂ ಒತ್ತಾಯಿಸುತ್ತೇನೆ" ಎಂದರು.