ಮೈಸೂರು: ಚಾಮುಂಡೇಶ್ವರಿ ದೇವಾಲಯದ ಆದಾಯದಲ್ಲಿ ಭಾರೀ ಇಳಿಕೆ
ಮೈಸೂರು, ಸೆಪ್ಟೆಂಬರ್ 25: ಮೈಸೂರು ನಗರದ ಚಾಮುಂಡಿ ಬೆಟ್ಟದಲ್ಲಿರುವ ನಾಡ ಅಧಿದೇವತೆ ಚಾಮುಂಡೇಶ್ವರಿ ದೇಗುಲದ ಆದಾಯದಲ್ಲಿ ಈ ಬಾರಿ ಇಳಿಕೆಯಾಗಿದೆ. ಪ್ರತಿ ಬಾರಿ ತಾಯಿ ಚಾಮುಂಡೇಶ್ವರಿ ದೇಗುಲದ ಭಕ್ತರ ಹುಂಡಿಯ ಹಣ ಕೋಟಿ ರೂ ದಾಟುತ್ತಿತ್ತು. ಆದರೆ ಈಗ ಸುಮಾರು 18 ಲಕ್ಷರೂಗಳಷ್ಟು ಆದಾಯ ಇಳಿಕೆಯಾಗಿದೆ.
ದೇವಸ್ಥಾನದಲ್ಲಿ ಹುಂಡಿಹಣ ಎಣಿಕೆ ಕಾರ್ಯ ನಡೆದಿದ್ದು, ಕಳೆದ ಒಂದು ತಿಂಗಳ ಅವಧಿಯಲ್ಲಿ 82,16,754 ರೂ. ಸಂಗ್ರಹವಾಗಿದೆ. ಇದರಲ್ಲಿ 2 ಸಾವಿರ ಮುಖ ಬೆಲೆಯ 81 ನೋಟುಗಳು. ಐನೂರು ಮುಖ ಬೆಲೆಯ 6754 ನೋಟುಗಳು. ಇನ್ನೂರು ಮುಖಬೆಲೆಯ 2291 ನೋಟುಗಳು. ನೂರು ರೂ. ಮುಖಬೆಲೆಯ 26,048 ನೋಟುಗಳು, ನಾಣ್ಯಗಳು ಸೇರಿದಂತೆ ಒಟ್ಟು 82,16,754 ರೂ. ಸಂಗ್ರಹವಾಗಿದೆ.
ಕೊರೊನಾ 3ನೇ ಅಲೆಯ ಭೀತಿಯ ಹಿನ್ನಲೆಯಲ್ಲಿ ವಾರಾಂತ್ಯ ಹಾಗೂ ಸರ್ಕಾರಿ ರಜೆ ದಿನ, ಹಬ್ಬಗಳಂದು ಚಾಮುಂಡಿ ಬೆಟ್ಟಕ್ಕೆ ಪ್ರವಾಸಿಗರು, ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರಿಂದ ದೇವಸ್ಥಾನಕ್ಕೆ ಬರುತ್ತಿದ್ದ ಆದಾಯ ಕುಸಿತ ಕಂಡಿದೆ.
ಮೈಸೂರು
ದಸರಾ
ಸಾಂಪ್ರದಾಯಿಕ
ಕಾರ್ಯಕ್ರಮಗಳು
ನಿಗದಿ
ವಿಶ್ವವಿಖ್ಯಾತ
ಮೈಸೂರು
ದಸರಾ
ಮಹೋತ್ಸವಕ್ಕೆ
ದಿನಗಣನೆ
ಆರಂಭವಾಗಿದ್ದು,
ಅಂಬಾವಿಲಾಸ
ಅರಮನೆಯಲ್ಲಿ
ಕೂಡ
ದಸರಾ
ಸಿದ್ಧತೆಗಳು
ನಡೆಯುತ್ತಿದ್ದು,
ಈ
ಬಾರಿ
ಕೂಡ
ರಾಜ
ಮನೆತನದವರು
ಕೊರೊನಾ
ಮಹಾಮಾರಿಯ
ಹಿನ್ನಲೆಯಲ್ಲಿ
ಸಾಂಪ್ರದಾಯಿಕ
ಕಾರ್ಯಕ್ರಮಗಳನ್ನು
ನಿಗದಿ
ಮಾಡಿದ್ದಾರೆ.
ಅಂಬಾವಿಲಾಸ ಅರಮನೆಯಲ್ಲಿ ಅಕ್ಟೋಬರ್ 1ಕ್ಕೆ ವಜ್ರ, ರತ್ನ ಖಚಿತ ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದ್ದು, ಅಂದು ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಅ.7 ರಿಂದ 14ರವರೆಗೂ ಅರಮನೆಯಲ್ಲಿ ದಸರಾ ಕಾರ್ಯಕ್ರಮ ನಡೆಯಲಿದ್ದು, ಅ.7ರಿಂದ ಅಕ್ಟೋಬರ್ 15ರ ಮಧ್ಯಾಹ್ನ 2.30ರವರೆಗೆ ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ಅ.7ರಿಂದ ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ಪ್ರಾರಂಭವಾಗಲಿದ್ದು, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರತ್ನ ಖಚಿತ ಸಿಂಹಾಸನವೇರಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.
ಅ.14 ಅರಮನೆಯಲ್ಲಿ ಆಯುಧ ಪೂಜೆ ನಡೆಯಲಿದ್ದು, ಬೆಳಗ್ಗೆ 5.30ರಿಂದ ಪೂಜಾ ವಿಧಿ ವಿಧಾನ ಆರಂಭವಾಗಲಿದೆ. ಬೆಳಿಗ್ಗೆ 7.45ಕ್ಕೆ ರಾಜರ ಆಯುಧಗಳು ಅರಮನೆ ಕೋಡಿ ಸೋಮೇಶ್ವರ ದೇಗುಲಕ್ಕೆ ರವಾನೆ ಮಾಡಿ, ನಂತರ ಪೂಜೆ ಸಲ್ಲಿಸಿ ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆ ಕಲ್ಯಾಣಮಂಟಪಕ್ಕೆ ತರಲಾಗುತ್ತದೆ.
ಅಂದು ಬೆಳಿಗ್ಗೆ 11.02 ರಿಂದ 11.22ರ ಶುಭ ಮುಹೂರ್ತದಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಲಿದ್ದಾರೆ. ಆಗಸ್ಟ್ 15ರಂದು ಅರಮನೆಯಲ್ಲಿ ವಿಜಯದಶಮಿ ಆಚರಣೆ ನಡೆಯಲಿದೆ.
ಅಂದು
ಬೆಳಿಗ್ಗೆ
5.45ಕ್ಕೆ
ಅರಮನೆ
ಆನೆ
ಕುದುರೆ
ಹಸುಗಳು
ಆಗಮಿಸಲಿದ್ದು,
6.13
ರಿಂದ
6.32ರವರೆಗೆ
ಪೂಜಾ
ಕೈಂಕರ್ಯ
ನೆರವೇರಲಿದೆ.
7.20ರಿಂದ
7.40ರವರೆಗೆ
ವಿಜಯದಶಮಿ
ಮೆರವಣಿಗೆ
ನಡೆಯಲಿದ್ದು,
ಅರಮನೆ
ಮುಖ್ಯದ್ವಾರದಿಂದ
ಅರಮನೆ
ಆವರಣ
ಭುವನೇಶ್ವರಿ
ದೇಗುಲದವರೆಗೂ
ಮೆರವಣಿಗೆ
ನಡೆಯಲಿದೆ.
ಬಳಿಕ
ದೇಗುಲದ
ಬನ್ನಿ
ಮರಕ್ಕೆ
ರಾಜವಂಶಸ್ಥ
ಯದುವೀರ್
ಕೃಷ್ಣದತ್ತ
ಚಾಮರಾಜ
ಒಡೆಯರ್
ಪೂಜೆ
ಸಲ್ಲಿಸಲಿದ್ದಾರೆ.
ನಂತರ ಅಕ್ಟೋಬರ್ 31ರಂದು ಸಿಂಹಾಸನ ವಿಂಗಡಿಸಿ ಖಜಾನೆಗೆ ರವಾನೆ ಮಾಡಲಾಗುತ್ತದೆ. ಅಂದು ಸಹ ಮಧ್ಯಾಹ್ನ 1.30ರವರೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗುತ್ತದೆ.
ಕೊರೊನಾ 2 ಅಲೆಯ ಆರ್ಭಟ ತಗ್ಗಿದ್ದರೂ, 3ನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಈ ಬಾರಿಯೂ ಪಾರಂಪರಿಕ ಮೈನವಿರೇಳಿಸುವ ವಜ್ರಮುಷ್ಠಿ ಕಾಳಗವನ್ನು ರದ್ದುಗೊಳಿಸಲಾಗಿದೆ. ಅರಮನೆ ಒಳಗಿನ ಆವರಣದಲ್ಲಿ ಜಟ್ಟಿ ಮಣ್ಣಿನಲ್ಲಿ ಜಟ್ಟಿಗಳು ವಜ್ರದ ನಖವನ್ನು ಮುಷ್ಠಿಯಲ್ಲಿ ಹಿಡಿದು ವೀರಾವೇಶದಿಂದ ಕಾಳಗ ನಡೆಸುತ್ತಿದ್ದರು.
ಈ ವೇಳೆ ಜಟ್ಟಿಗಳ ಮೈನಿಂದ ನೆತ್ತರು ಹರಿದ ತಕ್ಷಣವೇ ಕಾಳಗವನ್ನು ನಿಲ್ಲಿಸಲಾಗುತ್ತದೆ. ಈ ಕಾಳಗಕ್ಕಾಗಿ ಜಟ್ಟಿಗಳು ಗರಡಿಗಳಲ್ಲಿ ಸಿದ್ಧತೆ ನಡೆಸುತ್ತಿದ್ದರು. ಆದರೆ ಈಗ ವಜ್ರ ಮುಷ್ಠಿ ಕಾಳಗವನ್ನು ಕಳೆದ ಬಾರಿಯಂತೆ ಈ ಬಾರಿಯೂ ರದ್ದುಪಡಿಸಿರುವುದು ಜಟ್ಟಿಗಳಿಗೆ ಮಾತ್ರವಲ್ಲ, ಮೈನವಿರೇಳಿಸುತ್ತಿದ್ದ ಈ ಕಾಳಗವನ್ನು ನೋಡ ಬಯಸುತ್ತಿದ್ದವರಿಗೂ ನಿರಾಶೆಯನ್ನುಂಟು ಮಾಡಿದೆ.