ರಾಜ್ಯದಲ್ಲಿ 26 ಸಾವಿರ ಪೌರ ಕಾರ್ಮಿಕರ ನೇಮಕಾತಿಗೆ ಕ್ರಮ: ಎಂ.ಶಿವಣ್ಣ
ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರ್ಕಾರ ಉತ್ತಮವಾಗಿ ಸ್ಪಂದಿಸುತ್ತಿದೆ ಎಂದು ಎಂ.ಶಿವಣ್ಣ ತಿಳಿಸಿದ್ದಾರೆ.
ಮೈಸೂರು, ಫೆಬ್ರವರಿ, 03: ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರ್ಕಾರ ಉತ್ತಮವಾಗಿ ಸ್ಪಂದಿಸುತ್ತಿದೆ. ಪೌರ ಕಾರ್ಮಿಕರ ಆರೋಗ್ಯ, ಮಕ್ಕಳ ಶಿಕ್ಷಣ, ನಿವೇಶನ, ಮನೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಯೋಜನೆಗಳ ರೂಪುರೇಷೆ ಸಿದ್ಧಪಡಿಸಿದೆ ಎಂದು ಸಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಮೈಸೂರಿನಲ್ಲಿ ತಿಳಿಸಿದರು.
ಮಾನಸ ಗಂಗೋತ್ರಿ ಆವರಣದ ಅಂಬೇಡ್ಕರ್ ಅಭಿವೃದ್ಧಿ ನಿಗಮ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ಥಳೀಯ ಸಂಸ್ಥೆ ಪೌರ ಕಾರ್ಮಿಕರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾನಾ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿ ಆಧಾರದಲ್ಲಿ ಕೆಲಸ ಮಾಡುತ್ತಿರುವ ರಾಜ್ಯದ 11,138 ಪೌರಕಾರ್ಮಿಕರ ಕಾಯಂಗೆ ಸರ್ಕಾರ ಸಮ್ಮತಿಸಿದೆ. ಅಲ್ಲದೆ 12,000 ಪೌರ ಕಾರ್ಮಿಕರ ನೇಮಕಾತಿಗೆ ಆರ್ಥಿಕ ಅನುಮೋದನೆ ದೊರೆತಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್: ಸಿಎಂ ಬೊಮ್ಮಾಯಿ
ಪೌರ
ಕಾರ್ಮಿಕರ
ನೇಮಕಕ್ಕೆ
ಕ್ರಮ
ಸಮಾನ
ಕೆಲಸಕ್ಕೆ
ಸಮಾನ
ವೇತನ
ನಿಗದಿಗೊಳಿಸಿ,
ನೇಮಕಾತಿಯಲ್ಲಿ
ರೋಸ್ಟರ್
ಪದ್ಧತಿ
ಜಾರಿಗೆ
ತಂದಿರುವುದರಿಂದ
ನಿಜವಾದ
ಪೌರಕಾರ್ಮಿಕರ
ನೇಮಕಾತಿಗೆ
ತೊಂದರೆಯಾಗಿದೆ.
ಹಾಗಾಗಿ,
ಈ
ಪದ್ಧತಿ
ರದ್ದುಗೊಳಿಸಬೇಕು.
ನೇಮಕಾತಿಗೆ
ಶೈಕ್ಷಣಿಕ
ಅರ್ಹತೆ
ನಿಗದಿಗೊಳಿಸಿರುವುದನ್ನು
ತೆಗೆದುಹಾಕಬೇಕು.
ಜನಸಂಖ್ಯೆ
ಆಧಾರದಲ್ಲಿ
ಪೌರ
ಕಾರ್ಮಿಕರನ್ನು
ನೇಮಿಸಬೇಕು
ಎಂಬುದು
ಸೇರಿದಂತೆ
ಇನ್ನಿತರ
ಹಲವು
ಬೇಡಿಕೆಗಳನ್ನು
ಈಡೇರಿಸುವಂತೆ
ಪೌರಕಾರ್ಮಿಕರು
ಮನವಿ
ಮಾಡಿದರು.
ಸಮಸ್ಯೆಗೆ
ಸರ್ಕಾರ
ಸ್ಪಂದಿಸುತ್ತಿದೆ
ಸಿಎಂ
ಬಸವರಾಜ
ಬೊಮ್ಮಾಯಿ
ಅವರ
ನೇತೃತ್ವದ
ರಾಜ್ಯ
ಸರ್ಕಾರ
ಪೌರ
ಕಾರ್ಮಿಕರ
ಸಮಸ್ಯೆಗಳಿಗೆ
ಸ್ಪಂದಿಸುತ್ತಿದೆ.
ಪೌರ
ಕಾರ್ಮಿಕರ
ಆರೋಗ್ಯ,
ಮಕ್ಕಳ
ಶಿಕ್ಷಣ,
ನಿವೇಶನ,
ಮನೆ
ನೀಡುವ
ವಿಚಾರಕ್ಕೆ
ಸಂಬಂಧಿಸಿದಂತೆ
ಹಲವು
ಯೋಜನೆಗಳ
ರೂಪುರೇಷೆ
ಸಿದ್ಧಪಡಿಸಿದೆ.
ಅಲ್ಲದೆ
ಸ್ಥಳೀಯ
ಸಂಸ್ಥೆಗಳಲ್ಲಿ
ನೇರ
ಪಾವತಿ
ಆಧಾರದಲ್ಲಿ
ದುಡಿಯುವ
ಪೌರ
ಕಾರ್ಮಿಕರ
ನೇರ
ನೇಮಕಾತಿಗೆ
ಕ್ರಮವಹಿಸುತ್ತಿದೆ.
ಈಗಾಗಲೇ
11,138
ಕಾರ್ಮಿಕರ
ಕಾಯಂಗೊಳಿಸಲಾಗುತ್ತಿದೆ.
ಅಲ್ಲದೇ
12,000
ಕಾರ್ಮಿಕರ
ನೇಮಕಾತಿಗೆ
ಆರ್ಥಿಕ
ಅನುಮೋದನೆ
ನೀಡಿರುವುದು
ಸೇರಿದಂತೆ
ಒಟ್ಟು
26,000
ಪೌರ
ಕಾರ್ಮಿಕರ
ನೇಮಕಾತಿಗೆ
ಕ್ರಮ
ಕೈಗೊಳ್ಳಲಾಗುತ್ತಿದೆ.
ಮಾರ್ಚ್
ತಿಂಗಳ
ಒಳಗಾಗಿ
ಪೌರಕಾರ್ಮಿಕರ
ಬಹುತೇಕ
ಎಲ್ಲಾ
ಸಮಸ್ಯೆಗಳಿಗೂ
ಸರ್ಕಾರ
ಸ್ಪಂದಿಸಲಿದೆ
ಎಂದು
ತಿಳಿಸಿದರು.
ಒರಿಸ್ಸಾ
ಮಾದರಿಯಲ್ಲಿ
ಸೌಲಭ್ಯ
ಪಾಲಿಕೆ
ಪೌರಕಾರ್ಮಿಕರ
ಸಂಘದ
ಉನ್ನತ
ಸಮಿತಿ
ಅಧ್ಯಕ್ಷ
ಮಾತನಾಡಿ,
ಪೌರ
ಕಾರ್ಮಿಕರಿಗೆ
ಬೆಳಗಿನ
ಉಪಾಹಾರ
ವ್ಯವಸ್ಥೆ
ಹಾಗೂ
ವಿಶ್ರಾಂತಿ
ಗೃಹ
ನಿರ್ಮಾಣಕ್ಕೆ
ಒತ್ತಾಯಿಸಲಾಗಿದೆ.
ಅವುಗಳನ್ನು
ಅನುಷ್ಠಾನಗೊಳಿಸಲು
ಒಪ್ಪಿದ್ದಾರೆ.
ಒರಿಸ್ಸಾ
ಮಾದರಿಯಲ್ಲಿ
ಸೌಲಭ್ಯ
ನೀಡಿಕೆಗೆ
ಯೋಜನೆ
ಸಿದ್ಧಪಡಿಸಲಾಗಿದೆ.
ಶೀಘ್ರದಲ್ಲಿಯೇ
ಅನುಷ್ಠಾನಗೊಳಿಸುವುದಾಗಿ
ಮುಖ್ಯಮಂತ್ರಿಯವರು
ತಿಳಿಸಿದ್ದಾರೆ
ಎಂದು
ತಿಳಿಸಿದರು.
ಈ ಸಂದರ್ಭದಲ್ಲಿ ಸಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ವೆಂಕಟೇಶ್, ಪಾಲಿಕೆ ಆರೋಗ್ಯಾಧಿಕಾರಿ ನಾಗರಾಜ್, ಆಯೋಗದ ಸದಸ್ಯ ಎಂ.ವಿ. ವೆಂಕಟೇಶ್, ಯೋಜನಾ ನಿರ್ದೇಶಕಿ ಶೋಭಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಮಾಲತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.