ಮೈಸೂರಿನ KR ಆಸ್ಪತ್ರೆಯಲ್ಲಿ ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ
ಮೈಸೂರು, ಜುಲೈ 10: ಮಾನಸಿಕ ಚಿಕಿತ್ಸೆಗೆಂದು ದಾಖಲಾದ ಬುದ್ಧಿಮಾಂದ್ಯ ಮಹಿಳೆಯ ಮೇಲೆ ದುಷ್ಕರ್ಮಿಯೋರ್ವ ಅತ್ಯಾಚಾರ ಎಸಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಪ್ರತಿಷ್ಠಿತ ಹಾಗೂ ದೊಡ್ಡ ಆಸ್ಪತ್ರೆ ಎಂದೇ ಖ್ಯಾತಿವೆತ್ತ ಕೆ.ಆರ್. ಆಸ್ಪತ್ರೆಯಲ್ಲಿ ಈ ಕೃತ್ಯ ಘಟಿಸಿದ್ದು, ದುಷ್ಕರ್ಮಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಸಿದ್ದ ಉತ್ತರ ಆಸ್ಪತ್ರೆಯ ಅಧಿಕಾರಿಗಳಿಂದ ಎಂದಿನಂತೆ ಬಂದಿದೆ. 30 ವರ್ಷದ ಮಹಿಳೆ ಮೇಲೆ ಈ ಅಮಾನುಷ ಕೃತ್ಯ ನಡೆದಿದೆ. ರಾತ್ರಿ ವೇಳೆ ಆಸ್ಪತ್ರೆಯ ವಾರ್ಡ್ ಕಿಟಕಿ ಗ್ರಿಲ್ ಕಿತ್ತು ಒಳನುಗ್ಗಿ ಅಪರಿಚಿತ ವ್ಯಕ್ತಿಯೊಬ್ಬ ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ.
ಮಾನವ ಹಕ್ಕುಗಳ ಸೇವಾ ಸಮಿತಿಯಿಂದ ಈ ಪ್ರಕರಣ ಬೆಳಕಿಗೆ ಬಂದಿದ್ದು, ಬುದ್ದಿಮಾಂದ್ಯ ಮಹಿಳೆ ಇದ್ದ ಅದೇ ವಾರ್ಡ್ನ ವೃದ್ಧೆಯಿಂದ ಸತ್ಯ ಬಯಲಾಗಿದೆ. ಅತ್ಯಾಚಾರದ ಬಗ್ಗೆ ವೃದ್ಧೆ ವಾರದ ಹಿಂದೆಯೇ ವೈದ್ಯರಿಗೆ ಮಾಹಿತಿ ನೀಡಿದ್ದರು. ಆದರೆ, ಮಾಹಿತಿ ನೀಡಿದ ವೃದ್ಧೆಗೆ ಆಸ್ಪತ್ರೆ ಸಿಬ್ಬಂದಿ ಹಲ್ಲೆ ಮಾಡಿ ಬಾಯಿ ಬಿಡದಂತೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಅತ್ಯಾಚಾರದ ಬಗ್ಗೆ ವೃದ್ಧೆ ಮಾಹಿತಿ ನೀಡಿದರೂ ವೈದ್ಯರು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಅತ್ಯಾಚಾರ ಪ್ರಕರಣ ಮುಚ್ಚಿ ಹಾಕಲು ಕೆ.ಆರ್. ಆಸ್ಪತ್ರೆ ವೈದ್ಯರು ಯತ್ನಿಸಿದ್ದಾರೆ ಎಂಬ ಅನುಮಾನ ಮೂಡಿದೆ.
ಈ ಬಗ್ಗೆ ಮಾನವ ಹಕ್ಕುಗಳ ಸೇವಾ ಸಮಿತಿ ನೀಡಿದ ಮಾಹಿತಿಯಿಂದ ಪೊಲೀಸರು ಆಸ್ಪತ್ರೆಗೆ ದೌಡಾಯಿಸಿದ್ದು, ವಿಷಯ ಬಹಿರಂಗ ಆಗುತ್ತಿದ್ದಂತೆ ಆಸ್ಪತ್ರೆ ಭದ್ರತಾ ಸಿಬ್ಬಂದಿ ಪರಾರಿಯಾಗಿದ್ದಾರೆ. ಪೊಲೀಸರು ಬಂದರೂ ಸಹ ಸ್ಥಳಕ್ಕೆ ವೈದ್ಯರು ಬಂದಿಲ್ಲ. ಅಲ್ಲಿದ್ಧ ನರ್ಸ್ಗಳು ಜಾಗ ಖಾಲಿ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಅಮಾನವೀಯ ಕೃತ್ಯ ಕೇಳಿ ಪಕ್ಕದ ವಾರ್ಡ್ನ ರೋಗಿಗಳ ಪೋಷಕರು ಬೆಚ್ಚಿ ಬಿದ್ದಿದ್ದಾರೆ. ಪ್ರಕರಣ ಕುರಿತು ತನಿಖೆ ಮುಂದುವರೆದಿದೆ.
ಶಾಸಕ
ಭೇಟಿ:
ಕೆ.ಅರ್.
ಆಸ್ಪತ್ರೆಯಲ್ಲಿ
ಬುದ್ದಿಮಾಂದ್ಯ
ಮಹಿಳೆ
ಮೇಲೆ
ಅತ್ಯಾಚಾರ
ವಿಚಾರ
ತಿಳಿಯುತ್ತಿದ್ದಂತೆ
ಕೆ.ಆರ್.
ಆಸ್ಪತ್ರೆಗೆ
ಶಾಸಕ
ಎಲ್.
ನಾಗೇಂದ್ರ
ಭೇಟಿ
ನೀಡಿ
ಪರಿಶೀಲನೆ
ನಡೆಸಿದರು.
ಆಸ್ಪತ್ರೆಯ
ವಾರ್ಡ್ಗಳ
ಪರಿಶೀಲನೆ
ನಡೆಸಿದ
ಶಾಸಕರು,
ಆಸ್ಪತ್ರೆಯ
ಡೀನ್
ನಂಜರಾಜ್
ಹಾಗೂ
ವೈದ್ಯಕೀಯ
ಅಧೀಕ್ಷಕ
ನಂಜುಂಡಸ್ವಾಮಿಯಿಂದ
ಮಾಹಿತಿ
ಪಡೆದರು.
ಕೂಡಲೇ
ಅವ್ಯವಸ್ಥೆ
ಸರಿಪಡಿಸಿ
ಸೆಕ್ಯುರಿಟಿ
ಹೆಚ್ಚಿಸುವಂತೆ
ಸೂಚನೆ
ನೀಡಿದರು.
"ಈ ಬಗ್ಗೆ ಶೀಘ್ರದಲ್ಲೇ ಸಭೆ ನಡೆಸುತ್ತೇನೆ. ಕೆ.ಆರ್ ಆಸ್ಪತ್ರೆ ಹೆಚ್ಚಿನ ಸೆಕ್ಯುರಿಟಿಯ ಅವಶ್ಯಕತೆ ಇದೆ. ಮೂರು ಪಾಳಿಯಲ್ಲಿ ಸೆಕ್ಯುರಿಟಿ ಕೆಲಸ ನಿರ್ವಹಿಸುವಂತೆ ಸೂಚಿಸಿದ್ದೇನೆ. ಜೊತೆಗೆ ಎಲ್ಲಾ ಭಾಗಗಳಲ್ಲೂ ಸಿಸಿಟಿವಿ ಅಳವಡಿಸುವಂತೆ ಹೇಳಿದ್ದೇನೆ. ಸದ್ಯಕ್ಕೆ ಚಲುವಾಂಬ ಆಸ್ಪತ್ರೆಯಲ್ಲಿ ಮಹಿಳೆ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾದಿಂದಾಗಿ ಜಯದೇವ ಬಿಲ್ಡಿಂಗ್ನಲ್ಲಿದ್ದ ರೋಗಿಗಳಿಗನ್ನು ಇಲ್ಲಿಗೆ ಶಿಫ್ಟ್ ಮಾಡಲಾಗಿತ್ತು. ಈ ವೇಳೆ ಕೃತ್ಯ ನಡೆದಿದೆ. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುತ್ತೇವೆ,'' ಎಂದು ಶಾಸಕ ಎಲ್. ನಾಗೇಂದ್ರ ಮಾಧ್ಯಮಗಳಿಗೆ ತಿಳಿಸಿದರು.
Recommended Video