ಶ್ರೀಕಂಠದತ್ತ ಒಡೆಯರ್ ಪುಣ್ಯ ಸ್ಮರಣೆ ಆಚರಣೆ
ಮೈಸೂರು, ಡಿಸೆಂಬರ್ 10: ಮೈಸೂರಿನ ರಾಜಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ 3ನೇ ಪುಣ್ಯಸ್ಮರಣೆಯನ್ನು ಶನಿವಾರ ಆಚರಿಸಲಾಯಿತು.
ಡಿಸೆಂಬರ್ 10, 2013ರಂದು ಇಹಲೋಕ ತ್ಯಜಿಸಿದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಮೂರನೇ ಪುಣ್ಯಸ್ಮರಣೆಯನ್ನು ಡಿಸೆಂಬರ್ 10ರಂದು ಆಚರಿಸಲಾಗಿದ್ದು, ಮಧುವನದಲ್ಲಿ ಅವರ ಸ್ಮಾರಕಕ್ಕೆ ಪೂಜೆ-ಪುನಸ್ಕಾರಗಳನ್ನು ರಾಜಮನೆತನದ ಪುರೋಹಿತರು ನೆರವೇರಿಸಿದರು. ಇನ್ನು ಈ ಕಾರ್ಯಕ್ರಮಕ್ಕೆ ಒಡೆಯರ್ ಬಂಧುಗಳು, ಸ್ನೇಹಿತರು, ಆಪ್ತರು ಕೂಡ ಭಾಗವಹಿಸಿದ್ದರು.[ಮೈಸೂರಿನಲ್ಲಿ ಒಡೆಯರ್ ಪುಣ್ಯಾರಾಧನೆ]
ಇನ್ನು ಸಂಪ್ರದಾಯದಂತೆ ರಾಣಿ ಪ್ರಮೋದಾದೇವಿ ಹಾಗೂ ಯದುವೀರ್ ಪಾಲ್ಗೊಂಡಿರಲಿಲ್ಲ. ಇದೇ ವೇಳೆ ಅರಮನೆ ಆಡಳಿತ ಮಂಡಳಿ ವತಿಯಿಂದ ಅನ್ನಸಂತರ್ಪಣೆಯನ್ನು ನಡೆಸಲಾಯಿತು.
3000ಕ್ಕೂ ಅಧಿಕ ಜನರಿಗೆ ಅನ್ನದಾನ ಮಾಡಲಾಯಿತು. ವಿವಿಧ ಸಂಘ ಸಂಸ್ಥೆಗಳ ವತಿಯಿಂದಲೂ ಶ್ರೀಕಂಠದತ್ತ ಒಡೆಯರ್ ಅವರ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು.[ಮೈಸೂರು: ಫೆ. 23 ರಂದು ಯದುರಾಜ್ ಗೆ ಪಟ್ಟಾಭಿಷೇಕ]
ಮುಂದಿನ ದಿನಗಳಲ್ಲಿ ಶ್ರೀಕಂಠದತ್ತ ಒಡೆಯರ್ ರವರ ನೆಚ್ಚಿನ ಆಟ ಕ್ರಿಕೆಟ್ ಆಗಿರುವುದರಿಂದ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗುವುದು ಎಂದು ಅರಮನೆ ಆಡಳಿತ ಮಂಡಳಿ ತಿಳಿಸಿದೆ.