ಚಿತ್ರಗಳಲ್ಲಿ ಮೈಸೂರಿನಲ್ಲಿ ಭಾರತದ ಪ್ರಥಮ ಪ್ರಜೆ
ಮೈಸೂರು, ಸೆ.23:ಭಾರತದ ಪ್ರಥಮ ಪ್ರಜೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಾಂಸ್ಕೃತಿಕ ನಗರ ಮೈಸೂರಿಗೆ ಸೋಮವಾರ ಆಗಮಿಸಿ ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಜೆಎಸ್ಎಸ್ ಆಸ್ಪತ್ರೆಯ ಹೊಸ ಕಟ್ಟಡ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಲೋಕಾರ್ಪಣೆ ಮಾಡಿದರು.
ಭಾರತದ ಕೇಲವೇ ಆಸ್ಪತ್ರೆಗಳು ಹೊಂದಿರುವ ವಿಶೇಷ ಸೌಲಭ್ಯಗಳನ್ನು ಒಳಗೊಂಡಿರುವ ನೂತನ ಆಸ್ಪತ್ರೆ ಈ ಭಾಗದ ಜನರಿಗೆ ವರದಾನವಾಗಲಿದೆ. ಒಟ್ಟು 12.5 ಎಕರೆ ವಿಸ್ತೀರ್ಣದ ಜಾಗದಲ್ಲಿ ಉತ್ಕೃಷ್ಟ ಗುಣಮಟ್ಟದ ಸೌಲಭ್ಯಗಳನ್ನು ಹೊಂದಿರುವ ನೂತನ ಕಟ್ಟಡಕ್ಕೆ ಭಾರತದ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ ಲೋಕಾರ್ಪಣೆ ಮಾಡಿದ್ದು ತುಂಬಾ ಸಂತೋಷ ಎಂದು ಜೆಎಸ್ಎಸ್ ಮಹಾವಿದ್ಯಾಪೀಠ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಹೇಳಿದರು.
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಶ್ರೀ ಗಳಾದ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಹಂಸರಾಜ ಭಾರದ್ವಾಜ ಅಧ್ಯಕ್ಷತೆ ವಹಿಸಿದ್ದರು. ಪ್ರಸಾದ ವಿಶೇಷ ಸಂಚಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಎಸ್ಎಸ್ ಮಾಸ ಪತ್ರಿಕೆಯನ್ನು ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಬಿಡುಗಡೆ ಮಾಡಿದರು.
ಶ್ರೀ
ಶಿವರಾತ್ರಿ
ರಾಜೇಂದ್ರ
ಮಹಾಸ್ವಾಮಿಗಳ
98ನೇ
ಜಯಂತಿ
ಮಹೋತ್ಸವದ
ಸಂಸ್ಮರಣೆ
ಹಾಗೂ
ಸಾರ್ವಜನಿಕ
ಅನುಕೂಲಕ್ಕಾಗಿ
ಈ
ಆಸ್ಪತ್ರೆಯನ್ನು
ಸಮರ್ಪಿಸಲಾಗಿದೆ.
ಮೈಸೂರಿಗೆ
ವಿಶೇಷ
ವಿಮಾನದಲ್ಲಿ
ಆಗಮಿಸಿದ
ಪ್ರಣಬ್
ಮುಖರ್ಜಿ
ಅವರ
ಭೇಟಿ
ಚಿತ್ರಗಳು
ಇಲ್ಲಿವೆ
ನೋಡಿ..
ದಕ್ಷಿಣ ಭಾರತ ಪ್ರವಾಸ
*
ಸೆ.23ರಂದು
ಮೈಸೂರಿನಲ್ಲಿ
ಜೆಎಸ್ಎಸ್
ಆಸ್ಪತ್ರೆ
ಉದ್ಘಾಟನೆ.
*
ಸೆ.24ರಂದು
ಬಿಜಾಪುರದ
ಸೈನಿಕ
ಶಾಲೆ
ಚಿನ್ನದ
ಹಬ್ಬ
ಆಚರಣೆ.
*
ನಂತರ
ಚೆನ್ನೈನಲ್ಲಿ
ಚಲನಚಿತ್ರಕ್ಕೆ
ನೂರರ
ಸಂಭ್ರಮ
ಕಾರ್ಯಕ್ರಮದಲ್ಲಿ
ಪಾಲ್ಗೊಳ್ಳಲಿದ್ದಾರೆ.
*
ಸೆ.25ರಂದು
ಪಾಂಡಿಚೇರಿ
ವಿವಿಯ
23ನೇ
ಘಟಿಕೋತ್ಸವದಲ್ಲಿ
ಭಾಗವಹಿಸಲಿದ್ದು,
*
ಶ್ರೀ
ಅರವಿಂದೋ
ಆಶ್ರಮದಲ್ಲಿ
ಭಾಷಣ
ಮಾಡಲಿದ್ದಾರೆ.
ಮೈಸೂರು ಪ್ರಥಮ ಪ್ರಜೆ ಸ್ವಾಗತ
ಭಾರತದ ಪ್ರಥಮ ಪ್ರಜೆ ಪ್ರಣಬ್ ಮುಖರ್ಜಿ ಅವರಿಗೆ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರಿದ ನಗರದ ಮೇಯರ್ ರಾಜೇಶ್ವರಿ
ಡಿಸಿ ಶಿಖಾರಿಂದ ಸ್ವಾಗತ
ಭಾರತದ ಪ್ರಥಮ ಪ್ರಜೆ ಪ್ರಣಬ್ ಮುಖರ್ಜಿ ಅವರಿಗೆ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರಿದ ಮೈಸೂರು ಜಿಲ್ಲಾಧಿಕಾರಿ ಶ್ರೀಮತಿ ಶಿಖಾ
ಉಚಿತ ತಪಾಸಣೆ
ಹೊಸ ಆಸ್ಪತ್ರೆಯಲ್ಲಿ ಸೆ.25ರಿಂದ ಅಕ್ಟೋಬರ್ 2 ರ ತನಕ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 1090 ಅಥವಾ 98451 64360
ಪ್ರಣಬ್ ಗೆ ಸ್ಮರಣಿಕೆ
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಸ್ಮರಣಿಕೆ ನೀಡುತ್ತಿರುವ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ
ಆಸ್ಪತ್ರೆಯಲ್ಲಿ ಸೌಲಭ್ಯಗಳು
ಇಂಡೋ ಸಾರಾಮಿಕ್ ವಿನ್ಯಾಸದ ಕಟ್ಟಡದಲ್ಲಿ ಕಾರ್ಡಿಯಾಲಾಜಿ, ಕಾರ್ಡಿಯೋ ಥೋರಾಸಿಕ್ ಸರ್ಜರಿ, ನೆಫ್ರೊಲಾಜಿ, ಉರೋಲಾಜಿ, ನ್ಯೂರಾಲಜಿ, ನ್ಯೂರೋ ಸರ್ಜರಿ, ಸರ್ಜಿಕಲ್ ಗ್ಯಾಸ್ಟ್ರೊ ಎಂಟೆರೊಲಾಜಿ, ಪಲ್ಮೊನೊಲಾಜಿ, ಗೈನಾಕಾಲಜಿ, ಪ್ಲಾಸ್ಟಿಕ್ ಸರ್ಜರಿ, ಪೆಡಿಯಾಟ್ರಿಕ್, ನಿಯೋ ನಾಟಲ್ ಕೇರ್, ಕೀ ಹೋಲ್ ಲ್ಯಾಪ್ರೊಸ್ಕೋಪಿಕ್ ಸರ್ಜರಿ ಸೇರಿದಂತೆ ಅತ್ಯಾಧುನಿಕ ಚಿಕಿತ್ಸೆ ವಿಭಾಗಗಳಿವೆ
ಸ್ಮರಣ ಸಂಚಿಕೆ ಬಿಡುಗಡೆ
ಜೆಎಸ್ಎಸ್ ಮಹಾವಿದ್ಯಾಪೀಠದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ಸಿಎಂ ಗೋಲ್ಡ್ ಕಾರ್ಡ್
ಮೈಸೂರು ದಸರಾ ಅಂಗವಾಗಿ ಜಿಲ್ಲೆಗೆ ಮತ್ತೆ 19 ಕೋಟಿ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರಲ್ಲದೆ ಪ್ರವಾಸಿಗರಿಗಾಗಿ ಗೋಲ್ಡ್ ಕಾರ್ಡ್ ಬಿಡುಗಡೆ ಮಾಡಿದರು.
ಮೊಬೈಲ್ ಅಪ್
ಇತ್ತೀಚೆಗೆ ಲಲಿತ ಮಹಲ್ ಹೋಟೆಲ್ ನಲ್ಲಿ ದಸರಾ ಪೋಸ್ಟರ್ ಬಿಡುಗಡೆ ಮಾಡಿದ್ದ ಸಿದ್ದರಾಮಯ್ಯ ಅವರು ದಸರಾ ಸಂಬಂಧಿಸಿದ ಮೊಬೈಲ್ ಅಪ್ ಬಿಡುಗಡೆ ಮಾಡಿದರು.ಹೆಚ್ಚಿನ ವಿವರ ಇಲ್ಲಿದೆ ಓದಿ