ಮೈಸೂರಿನಲ್ಲೇ ತಯಾರಾದ ರೇಷ್ಮೆ ಸೀರೆಯಲ್ಲಿ ಆಗಮಿಸಿ, ದಸರಾಗೆ ಮೆರುಗು ತಂದ ರಾಷ್ಟ್ರಪತಿ!
ಮೈಸೂರು, ಸೆಪ್ಟೆಂಬರ್ 26: ದಸರಾ ಮಹೋತ್ಸವ ಉದ್ಘಾಟಿಸಿದ ಪ್ರಪ್ರಥಮ ರಾಷ್ಟ್ರಪತಿ ಎಂಬ ಗೌರವಕ್ಕೆ ಪಾತ್ರರಾದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೈಸೂರಿನಲ್ಲೇ ತಯಾರಾದ ಮೈಸೂರು ರೇಷ್ಮೆ ಸೀರೆ ಧರಿಸಿ, ದಸರಾ ಉದ್ಘಾಟಿಸುವ ಮೂಲಕ ಮೈಸೂರಿಗೆ ವಿಶೇಷ ಗೌರವ ನೀಡಿದ್ದಾರೆ.
ರಾಷ್ಟ್ರಪತಿಯವರಿಗಾಗಿ ವಿಶೇಷವಾಗಿ ನೇಯ್ದ ಮೈಸೂರು ರೇಷ್ಮೆ ಸೀರೆಯನ್ನು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಜಿಲ್ಲಾಡಳಿತದ ಪರವಾಗಿ ರಾಷ್ಟ್ರಪತಿಯವರನ್ನು ಅಧಿಕೃತವಾಗಿ ಆಹ್ವಾನಿಸುವಾಗ ಗೌರವಸೂಚಕವಾಗಿ ಈ ಮೈಸೂರು ರೇಷ್ಮೆ ಸೀರೆ ಜೊತೆಗೆ ಫಲ ತಾಂಬೂಲ ನೀಡಿ ಗೌರವಿಸಿದ್ದರು.
ವಿಶ್ವ ವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಇದೀಗ ವಿಶ್ವ ವಿಖ್ಯಾತ ದಸರಾ ಮಹೋತ್ಸವಹ ವೇಳೆ ಅದೇ ಉಡುಪು ಧರಿಸಿ ರಾಷ್ಟ್ರಪತಿಯವರು ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸಿದ್ದು ಮೈಸೂರಿಗರಿಗೆ ಸಂತಸವನ್ನುಂಟು ಮಾಡಿದೆ.
ರಾಷ್ಟ್ರಪತಿಯವರು ಬಿಳಿ ಸೀರೆ ಇಷ್ಟಪಡುತ್ತಾರೆ ಎಂಬುದನ್ನು ಅರಿತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಸರಕಾರಿ ಸ್ವಾಮ್ಯದ ಕೆ.ಎಸ್.ಐ.ಸಿ.ಯ ಸರಕಾರಿ ರೇಷ್ಮೆ ಕಾರ್ಖಾನೆಗೆ ಈ ಉಡುಪು ತಯಾರಿಕೆಗೆ ಆದೇಶ ನೀಡಿ, ಸಿದ್ಧಪಡಿಸಿದ್ದರು. ಮೈಸೂರಿನ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1912ರಲ್ಲಿ ನಿರ್ಮಿಸಿದ ರೇಷ್ಮೆ ಕಾರ್ಖಾನೆ ಎಂಬ ಹೆಮ್ಮೆ ಈ ಕಾರ್ಖಾನೆಗೆ ಇದೆ.
ಮೈಸೂರು ರೇಷ್ಮೆ ಸೀರೆ ಬ್ರಾಂಡ್ ವಿಶ್ವಪ್ರಸಿದ್ಧ ಬ್ರಾಂಡ್ ಆಗಿದೆ. ನೂರಾರು ವರ್ಷಗಳಿಂದ ಮಹಿಳೆಯರಿಗೆ ಮೈಸೂರು ಸಿಲ್ಕ್ ಸೀರೆ ಎಂದರೆ ಎಲ್ಲಿಲ್ಲದ ಅಚ್ಚುಮೆಚ್ಚು. ಹಾಗಾಗಿ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಷ್ಟಪಡುವ ನೈಸರ್ಗಿಕ ಬಿಳಿ ಬಣ್ಣದ ಅಪ್ಪಟ ರೇಷ್ಮೆ ಮತ್ತು ಅಪ್ಪಟ ಚಿನ್ನದ ಎಳೆಗಳನ್ನು ಬಳಸಿ ತಯಾರಿಸಿದ ಈ ಉಡುಪನ್ನು ಗೌರವಸೂಚಕವಾಗಿ ಅವರಿಗೆ ಸಮರ್ಪಿಸಲಾಗಿತ್ತು.
ಈ ಸೀರೆಗೆ ಸುಮಾರು 70 ಸಾವಿರ ರೂ. ಬೆಲೆ ಎಂದು ತಿಳಿದುಬಂದಿದ್ದು, ಇದೇ ಸೀರೆಯನ್ನುಟ್ಟುಕೊಂಡೇ ಸಾಂಸ್ಕೃತಿಕ ನಗರಿಗೆ ಆಗಮಿಸಿದ ರಾಷ್ಟ್ರಪತಿಗಳು ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ದಸರಾ ಮಹೋತ್ಸವವನ್ನು ಉದ್ಘಾಟಿಸಿದರು.
ಬೆಳ್ಳಿ
ಚಾಮುಂಡಿ
ಉಡುಗೊರೆ
ರಾಷ್ಟ್ರಪತಿ
ಹುದ್ದೆ
ಅಲಂಕರಿಸಿದ
ಬಳಿಕ
ಮೊದಲ
ಬಾರಿಗೆ
ಕರ್ನಾಟಕ್ಕೆ
ಆಗಮಿಸಿದ
ರಾಷ್ಟ್ರಪತಿ
ದ್ರೌಪದಿ
ಮುರ್ಮು
ಚಾಮುಂಡಿ
ಬೆಟ್ಟದಲ್ಲಿ
ದಸರಾ
ಮಹೋತ್ಸವಕ್ಕೂ
ಚಾಲನೆ
ನೀಡಿದರು.
ಈ
ವೇಳೆ
ನೆನಪಿನ
ಕಾಣಿಕೆಯಾಗಿ
ಬೆಳ್ಳಿಯ
ಚಾಮುಂಡಿ
ವಿಗ್ರಹವನ್ನು
ನೀಡಲಾಗಿದೆ.
ಈ
ಉಡುಗೊರೆಯು
92.5%
ಪರಿಶುದ್ಧ
ಬೆಳ್ಳಿಯಿಂದ
ಕೂಡಿದ್ದು,
4.25
ಕೆಜಿ
ತೂಕವನ್ನು
ಹೊಂದಿದೆ.
ಕಾರ್ಯಕ್ರಮದಲ್ಲಿ
ಹಾಜರಿದ್ದ
ಎಲ್ಲಾ
ಗಣ್ಯರಿಗೂ
ಜಿಲ್ಲಾಡಳಿತ
ವತಿಯಿಂದೆ
ಬೆಳ್ಳಿ
ಆನೆಯನ್ನು
ಉಡುಗೊರೆಯಾಗಿ
ನೀಡಲಾಯಿತು.
ಆದಿವಾಸಿಗಳಿಂದಲೂ
ಉಡುಗೊರೆ
ಚಾಮುಂಡಿ
ಬೆಟ್ಟಕ್ಕೆ
ರಾಷ್ಟ್ರಪತಿ
ಆಗಮಿಸುವ
ಹಿನ್ನಲೆ
ನೂರಾರು
ಬುಡಕಟ್ಟು
ಸಮುದಾಯದ
ಜನರು
ಭೇಟಿಯಾಗಲು
ಆಗಮಿಸಿದ್ದರು.
ತಮ್ಮದೇ
ಸಮುದಾಯದವರು
ರಾಷ್ಟ್ರದ
ಉನ್ನತ
ಸ್ಥಾನಕ್ಕೇರಿರುವುದಕ್ಕೆ
ಹೆಮ್ಮೆ
ಅನ್ನಿಸುತ್ತಿದೆ
ಎಂದ
ಅವರು,
ರೇಷ್ಮೆ
ಸೀರೆ,
ಜೇನು
ತುಪ್ಪ,
ಮೈಸೂರು
ಪೇಡ,
ಮೈಸೂರು
ಪೇಟವನ್ನು
ಪ್ರೀತಿಯಿಂದ
ನೀಡಲಾಯಿತು.