ಮೈಸೂರು : ತಿ.ನರಸೀಪುರ ಕುಂಭಮೇಳಕ್ಕೆ ಸಕಲ ಸಿದ್ಧತೆ
ಮೈಸೂರು, ಫೆಬ್ರವರಿ 04 : ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ 11ನೇ ಕುಂಭಮೇಳಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಫೆ.17, 18 ಮತ್ತು 19ರಂದು ಕುಂಭಮೇಳ ನಡೆಯಲಿದೆ.
ಕಾವೇರಿ, ಕಪಿಲಾ ಹಾಗೂ ಗುಪ್ತಗಾಮಿನಿ ಸ್ಪಟಿಕ ಸರೋವರ ಕೂಡುವ ಸ್ಥಳ ಹಾಗೂ ಸುತ್ತಮುತ್ತಲಿನ ಆಳವಾದ ಮರಳಿಲ್ಲದ ಸ್ಥಳಗಳಲ್ಲಿ ಸಾವಿರಾರು ಮರಳು ಮೂಟೆಗಳನ್ನು ಹಾಕಿ ಪುಣ್ಯ ಸ್ನಾನಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.
ಘನತೆ ಹೆಚ್ಚಿಸುವಂತೆ ಕುಂಭಮೇಳ ಆಯೋಜನೆ: ಕುಮಾರಸ್ವಾಮಿ
ಹಳೇ ತಿರಮಕೂಡಲಿನ ವ್ಯಾಸರಾಜ ಮಠದ ಮುಂದೆ 12 ಅಡಿ ಅಗಲ, 120 ಮೀಟರ್ ಉದ್ದದ ಸಾವಿರಾರು ಮರಳು ಚೀಲಹಾಕಿ ಸಭಾ ಮಂಟಪಕ್ಕೆ ಸಾರ್ವಜನಿಕರು ಓಡಾಡಲು ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿದೆ.
ಹಿಂದು ಧರ್ಮಕ್ಕೆ ಮತಾಂತರವಾದ ಈ ವ್ಯಕ್ತಿ ಕುಂಭಮೇಳದ ಕೇಂದ್ರಬಿಂದು!
ಭಕ್ತರಿಗಾಗಿ 15 ಕಡೆ ನಲ್ಲಿಗಳಿರುವ ಫ್ಲಾಟ್ ಫಾರಂ ನಿರ್ಮಾಣ ಮಾಡಲಾಗುತ್ತಿದೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಅಗಸ್ತ್ಯೇಶ್ವರ ದೇವಾಸ್ಥಾನಕ್ಕೆ 10 ಮಿನಿ ಬಸ್ ವ್ಯವಸ್ಥೆ ಮಾಡಲಾಗಿದೆ. ನದಿ ಮತ್ತು ಎರಡೂ ದೇವಸ್ಥಾನಗಳ ಬಳಿ ಬಟ್ಟೆ ಬದಲಿಸುವ ತಾತ್ಕಾಲಿಕ ಕೊಠಡಿ ನಿರ್ಮಾಣ ಮಾಡಲಾಗಿದೆ.
ಕುಂಭಮೇಳದಲ್ಲಿ ಇತಿಹಾಸ ಸೃಷ್ಟಿ, ಸಂಗಮದಲ್ಲಿ ಮಿಂದೆದ್ದ ತೃತೀಯ ಲಿಂಗಿಗಳು
ಶ್ರೀ ಗುಂಜಾನರಸಿಂಹಸ್ವಾಮಿ ನದಿ ದಂಡೆಯಿಂದ ಶ್ರೀ ಅನಾದಿ ಮೂಲಸ್ಥಾನೇಶ್ವರವರೆಗೆ ಹಾಗೂ ವ್ಯಾಸರಾಜಮಠ ಮುಂಭಾಗದ ನದಿ ದಂಡೆಯಲ್ಲಿ ಬೆಳೆದಿದ್ದ ಗಿಡಗಂಟಿ ತೆರವು ಮಾಡಿ ಸ್ವಚ್ಛಗೊಳಿಸಲಾಗಿದೆ. ಸುತ್ತಮುತ್ತಲಿನ ಪ್ರದೇಶಗಳ ಸ್ವಚ್ಛತಾ ಕೆಲಸವೂ ಪ್ರಗತಿಯಲ್ಲಿದೆ.