ಈಗ ಮಾತ್ರವಲ್ಲ, ಮುಂದೆಯೂ ನಾನೇ ಮೈಸೂರಿನ ಎಂಪಿ: ಪ್ರತಾಪ್ ಸಿಂಹ
ಮೈಸೂರು, ಆಗಸ್ಟ್.13: ಮನಸ್ಸಲಿರುವ ಕಸವನ್ನು ಮಾಧ್ಯಮಗಳಲ್ಲಿ ಬರೆಯುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.
ಈ ಬಾರಿ ಲೋಕಸಭೆಗೆ ಟಿಕೇಟ್ ನೀಡುವುದಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮೈಸೂರು ಅಭಿವೃದ್ಧಿಗೆ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. 28 ಲೋಕಸಭಾ ಕ್ಷೇತ್ರದಲ್ಲಿ ಆಗದ ಚರ್ಚೆ ಇಲ್ಲಿ ಯಾಕೆ ನಡೆಯುತ್ತಿದೆ ಎಂದು ತಿಳಿಯುತ್ತಿಲ್ಲ.
ಲೋಕಸಭೆ ಚುನಾವಣೆ 2019: ಪ್ರತಾಪ್ ಸಿಂಹ ಎದುರು ಸಿದ್ದರಾಮಯ್ಯ ಸ್ಪರ್ಧೆ?
ಮಹಾರಾಜ ಯದುವೀರ್ ನಿಲ್ಲುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ. ಅವರು ಚುನಾವಣೆಗೆ ನಿಲ್ಲುತ್ತಾರಾ? ಇಲ್ಲವಾ ಎಂದು ನೀವೆ ಕೇಳಿ ಎಂದು ಮಾಧ್ಯಮಗಳಿಗೆ ಹೇಳಿದರು.
ಮೈಸೂರಿಗೆ ಏನೇನು ತಂದಿದ್ದೀನಿ ನೋಡಿ: ಪ್ರತಾಪ್ ಸಿಂಹ ರಿಪೋರ್ಟ್ ಕಾರ್ಡ್
ಮೈಸೂರು
ಕ್ಷೇತ್ರದ
ಎಂಪಿ
ಆಗಿದ್ದೇನೆ.
ಮುಂದೆಯೂ
ನಾನೇ
ಎಂಪಿಯಾಗುತ್ತೇನೆ.
ಮೈಸೂರು,
ಕೊಡಗಿನ
ಜನ
ನನ್ನ
ಜೊತೆ
ಇರುವವರೆಗೆ
ನನ್ನ
ಟಿಕೆಟ್
ತಪ್ಪಿಸಲು
ಯಾರಿಂದಲೂ
ಸಾಧ್ಯವಿಲ್ಲ.
ಪ್ರಧಾನಿ
ಮೋದಿ,
ಅಮಿತ್
ಶಾ,
ಯಡಿಯೂರಪ್ಪ
ಅವರು
ನನ್ನ
ಜೊತೆ
ಇದ್ದಾರೆ
ಎಂದು
ಪ್ರತಾಪ್
ಸಿಂಹ
ಭರವಸೆ
ವ್ಯಕ್ತಪಡಿಸಿದರು.