ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜವಂಶದ ವಿಶಾಲಾಕ್ಷಿದೇವಿ ಸ್ಥಿತಿ ಚಿಂತಾಜನಕ: ಬೆಂಗಳೂರಿಗೆ ಹೊರಟ ರಾಜಮಾತೆ ಪ್ರಮೋದಾದೇವಿ

|
Google Oneindia Kannada News

Recommended Video

ಪ್ರಮೋದಾ ದೇವಿ ಒಡೆಯರ್ ಆಯುಧ ಪೂಜೆ ಬಿಟ್ಟು ಬೆಂಗಳೂರಿಗೆ ಬರಲು ಕಾರಣ | Oneindia Kannada

ಮೈಸೂರು, ಅಕ್ಟೋಬರ್.18: ಜಯಚಾಮರಾಜೇಂದ್ರ ಒಡೆಯರ್ ಅವರ ಕೊನೆಯ ಪುತ್ರಿ ಅನಾರೋಗ್ಯ ಹಿನ್ನೆಲೆಯಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ದಿಢೀರ್ ಬೆಂಗಳೂರಿಗೆ ಹೊರಟಿದ್ದಾರೆ.

ಮೈಸೂರು ದಸರಾ - ವಿಶೇಷ ಪುರವಣಿ

ವಿಶಾಲಾಕ್ಷಿ ದೇವಿಯವರ ಸ್ಥಿತಿ ಚಿಂತಾಜನಕವಾಗಿದ್ದು, ಸಾಂಪ್ರದಾಯಿಕ ಆಯುಧ ಪೂಜೆ ಕೈ ಬಿಟ್ಟು ರಾಜಮಾತೆ ಪ್ರಮೋದಾದೇವಿ ಬೆಂಗಳೂರಿಗೆ ಹೊರಟಿದ್ದಾರೆ. ಸದ್ಯ ಆಯುಧ ಪೂಜೆಗೆ ರಾಜಮಾತೆ ಗೈರಾಗಿದ್ದು, ರಾಜವಂಶಸ್ಥರ ಗೈರಿನಲ್ಲಿಯೇ ಯದುವೀರ್ ಒಡೆಯರ್ ಪೂಜೆ ಸಲ್ಲಿಸುತ್ತಿದ್ದಾರೆ.

Pramoda Devi Wadiyar is coming to Bangalore

ಮೈಸೂರು ಅರಮನೆ ಇಬ್ಬರು ಸದಸ್ಯರ ಆರೋಗ್ಯದಲ್ಲಿ ವ್ಯತ್ಯಯಮೈಸೂರು ಅರಮನೆ ಇಬ್ಬರು ಸದಸ್ಯರ ಆರೋಗ್ಯದಲ್ಲಿ ವ್ಯತ್ಯಯ

ವಿಶಾಲಾಕ್ಷಿದೇವಿ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈಗ ಅವರ ಪರಿಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Pramoda Devi Wadiyar is coming to Bangalore

ಮೈಸೂರಿನಲ್ಲಿ ಶುರುವಾಯ್ತು ಮಳೆ: ಏನೆಲ್ಲಾ ಅವಾಂತರ ಸೃಷ್ಟಿಸಿದೆ ಗೊತ್ತಾ?ಮೈಸೂರಿನಲ್ಲಿ ಶುರುವಾಯ್ತು ಮಳೆ: ಏನೆಲ್ಲಾ ಅವಾಂತರ ಸೃಷ್ಟಿಸಿದೆ ಗೊತ್ತಾ?

ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ತಾಯಿ ಪುಟ್ಟ ಚಿನ್ನಮ್ಮಣ್ಣಿ (86) ಅವರ ಆರೋಗ್ಯದಲ್ಲೂ ಏರುಪೇರಾಗಿದ್ದು, ಅವರನ್ನು ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಗೆ ದಾಖಲಿಸಲಾಗಿದೆ.

English summary
Jayachamarajendra Wodeyar's last daughter Vishalakshidevi Suffering from illness. So Pramoda Devi Wadiyar is coming to Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X