ಪ್ರಮೋದಾದೇವಿ ಒಡೆಯರ್ ಅವರ ತಾಯಿ ವಿಧಿವಶ
ಬೆಂಗಳೂರು, ಅಕ್ಟೋಬರ್ 19:ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ತಾಯಿ ಪುಟ್ಟ ಚಿನ್ನಮ್ಮಣ್ಣಿ (98) ಅವರು ವಿಜಯದಶಮಿದಿನವಾದ ಇಂದು ನಿಧನರಾಗಿದ್ದಾರೆ.
ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಚಿನ್ನಮ್ಮಣ್ಣಿ ಅವರ ನಿಧನದಿಂದಾಗಿ ಖಾಸಗಿ ದರ್ಬಾರ್ ಸಂಭ್ರಮದ ಮೇಲೆ ಸೂತಕದ ನೆರಳು ಬಿದ್ದಿದೆ.
ಜಯಚಾಮರಾಜೇಂದ್ರ ಒಡೆಯರ್ ಅವರ ಕೊನೆಯ ಪುತ್ರಿ ಅನಾರೋಗ್ಯ ಪೀಡಿತರಾಗಿದ್ದಾರೆ, ಬೆಂಗಳೂರಿನಲ್ಲಿ ವಿಜಯಲಕ್ಷ್ಮಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯಲಕ್ಷ್ಮಿ ಅವರ ಆರೋಗ್ಯ ವಿಚಾರಿಸಲು ಪ್ರಮೋದಾ ದೇವಿ ಅವರು ಗುರುವಾರದಂದು ಬೆಂಗಳೂರಿಗೆ ಬಂದಿದ್ದರು. ಹೀಗಾಗಿ, ಅಯುಧ ಪೂಜೆ ಕೈಂಕರ್ಯಗಳಲ್ಲಿ ಪಾಲ್ಗೊಂಡಿರಲಿಲ್ಲ.
ಜಂಬೂಸವಾರಿಗೆ ಮುನ್ನ ನಡೆಯುತ್ತೆ ವಜ್ರಮುಷ್ಠಿ ಕಾಳಗ...!
ಆದರೆ, ಯದುವೀರ್ ಶ್ರೀಕಂಠದತ್ತ ಒಡೆಯರ್ ಅವರು ತಮ್ಮ ಖಾಸಗಿ ದರ್ಬಾರ್, ಪೂಜೆ ಪುನಸ್ಕಾರ ಮುಂದುವರೆಸಿದ್ದರು. ಆದರೆ, ಈಗ ಅಜ್ಜಿಯನ್ನು ಕಳೆದುಕೊಂಡಿರುವ ಯದುವೀರ್ ಅವರು ತಮ್ಮ ಕಂಕಣ ಕಳಚಿ, ಬೇರೊಂದು ದಿನ ದಶಮಿ ಪೂಜೆ ಮಾಡುವರೇ ಅಥವಾ ಇಂದೇ ತಡವಾಗಿ ಪೂಜೆ ಪೂರೈಸುವರೇ ಕಾದು ನೋಡಬೇಕಿದೆ.
ಅರಮನೆಯಲ್ಲಿ ಆಯುಧ ಪೂಜೆ ನೆರವೇರಿಸಿದ ಯದುವೀರ್ ಒಡೆಯರ್
ಮೈಸೂರಿನ ಜಂಬೂಸವಾರಿಗೆ ಅಡ್ಡಿಯಿಲ್ಲ: ಮೈಸೂರಿನ ಇತಿಹಾಸ ಪ್ರಸಿದ್ಧ ಜಂಬೂ ಸವಾರಿ ಉತ್ಸವ ಇಂದು ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದ್ದು, ಬೆಳಗ್ಗೆ ಮುಖ್ಯಮಂತ್ರಿಗಳು ನಂದಿಧ್ವಜ ಪೂಜೆ ಸಲ್ಲಿಸಲಿದ್ದಾರೆ. ಇದು ಸರ್ಕಾರದ ಆಯೋಜನೆಯ ಉತ್ಸವವಾಗಿದ್ದು, ಈ ಆಚರಣೆಗೆ ಯಾವುದೇ ಅಡ್ಡಿ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.