ಅರಮನೆ ಎದುರು ಸಾಂಸ್ಕೃತಿಕ ಕಾರ್ಯಕ್ರಮ ಬೇಡ
ಮೈಸೂರು, 12 : ವಿಶ್ವ ವಿಖ್ಯಾತ ದಸರಾ ಈ ಬಾರಿ ವಿವಾದಗಳಿಂದಲೇ ಆರಂಭವಾಗಿದ್ದು ಹಾಗೇ ಮುಂದುವರಿದುಕೊಂಡು ಹೋಗುತ್ತಿದೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಣಿ ಪ್ರಮೋದಾದೇವಿ ಈ ಬಾರಿ ಅರಮನೆ ಎದುರು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಬಾರದು ಎಂದು ಹೇಳಿದ್ದಾರೆ.(ಅರಮನೆ ಸಂಕಷ್ಟ ನೆನೆದು ಕಣ್ಣೀರಿಟ್ಟ ಮೈಸೂರು ರಾಣಿ)
ಶ್ರೀಕಂಠದತ್ತ ನರಸಿಂಹರಾಜ್ ಒಡೆಯರ್ ನಿಧನರಾಗಿ ಇನ್ನು ಒಂದು ವರ್ಷ ಕಳೆದಿಲ್ಲ. ಹಾಗಾಗಿ ಈ ಬಾರಿ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಬಾರದು. ಇದು ಅಶುಭದ ಸಂಕೇತವಾಗುತ್ತದೆ ಎಂದು ಹೇಳಿದ್ದಾರೆ.(ಖಡ್ಗವಿಟ್ಟು ದಸರಾ ಖಾಸಗಿ ದರ್ಬಾರ್ ಆಚರಣೆ)
ಈ ಮೊದಲು ಕೂಡ ಪ್ರಮೋದಾದೇವಿ ಅರಮನೆ ಎದುರು ಆನೆಗಳ ಪೂಜೆ ಮಾಡದಂತೆ ತಡೆಯೊಡ್ಡಿದ್ದರು. ಇದಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ ಅರಣ್ಯ ಇಲಾಖೆ ಕಚೇರಿ ಆವರಣದಲ್ಲೇ ಆನೆಗಳಿಗೆ ಪೂಜೆ ಮಾಡಿತ್ತು.
Comments
mysore dasara srikantadatta wodeyar district news bangalore death karnataka government ಶ್ರೀಕಂಠದತ್ತ ಒಡೆಯರ್ ಮೈಸೂರು ದಸರಾ ಬೆಂಗಳೂರು ಕಾನೂನು ಆಸ್ತಿ ಕರ್ನಾಟಕ ಸರ್ಕಾರ
English summary
Rani Pramoda Devi oppose to conduct cultural programme in frount of Maisore palace. She said that it is unnatural to do cultural programme.
Story first published: Friday, September 12, 2014, 19:07 [IST]