ಹಣವಿದ್ದ ಪರ್ಸ್ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಮೈಸೂರಿನ ಕಾನ್ಸ್ಟೆಬಲ್
ಮೈಸೂರು, ಜುಲೈ 8: ಈ ಜಗತ್ತಿನಲ್ಲಿ ಹಣವನ್ನು ಸುಲಭ ಮಾರ್ಗದಲ್ಲಿ ಪಡೆಯುವುದಕ್ಕೆ ಹಾತೊರೆಯುವವರೇ ಸುಮಾರು ಮಂದಿ. ಆದರೆ ತಮಗೆ ರಸ್ತೆಯಲ್ಲಿ ಸಿಕ್ಕ ಪರ್ಸ್ ಅನ್ನು ಪೊಲೀಸ್ ಠಾಣೆಗೆ ನೀಡುವ ಮೂಲಕ ಇಲ್ಲಿನ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
Recommended Video
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿದ್ದ ವಿ. ಶ್ರೀನಿವಾಸ್ ಎಂಬುವವರೇ ಪ್ರಾಮಾಣಿಕತೆ ಮೆರೆದ ಕಾನ್ಸ್ಟೆಬಲ್. ಇವರು ಮಂಗಳವಾರ ಮಧ್ಯಾಹ್ನ ಜಿಲ್ಲಾ ನ್ಯಾಯಾಲಯದ ಕಡೆಯಿಂದ ಆರ್ಟಿಒ ಕಚೇರಿ ಕಡೆ ಬರುತ್ತಿರುವಾಗ ರಸ್ತೆಯಲ್ಲಿ ಹಸಿರು ಬಣ್ಣದ ಪರ್ಸ್ ಬಿದ್ದಿರುವುದು ಕಂಡುಬಂತು. ಅದನ್ನು ನೋಡಿ ಪರ್ಸ್ ತೆಗೆದುಕೊಳ್ಳಲು ಹೋದಾಗ ವಾಹನವೊಂದು ಪರ್ಸ್ ಮೇಲೆ ಹರಿದ ಪರಿಣಾಮ ನೋಟುಗಳು ಚೆಲ್ಲಾಪಿಲ್ಲಿಯಾದವು.
ಮೈಸೂರು; ಪೊಲೀಸ್ ಸಿಬ್ಬಂದಿ ಪ್ರಾಮಾಣಿಕತೆಗೆ ಸೆಲ್ಯೂಟ್
ನೋಟುಗಳನ್ನು ಆಯ್ದುಕೊಂಡು ಪರ್ಸ್ ನೋಡಿದಾಗ ಅದರಲ್ಲಿ 3 ವಿದೇಶಿ ನೋಟುಗಳು ಇರುವುದು ಕಂಡುಬಂದಿವೆ. ತಕ್ಷಣ ಆ ಪರ್ಸ್ ಮತ್ತು ಹಣವನ್ನು ಲಕ್ಷ್ಮಿಪುರಂ ಠಾಣೆಗೆ ಕೊಟ್ಟು ಕಾನ್ಸ್ಟೆಬಲ್ ಕರ್ತವ್ಯಕ್ಕೆ ಮರಳಿದ್ದಾರೆ. ಇವರ ಪ್ರಾಮಾಣಿಕತೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಈ ಪರ್ಸ್ ಕಳೆದುಕೊಂಡವರು ಬಂದು ಪರ್ಸ್ ಪಡೆಯಬಹುದೆಂದು ಲಕ್ಷ್ಮೀಪುರಂ ಪೊಲೀಸರು ತಿಳಿಸಿದ್ದಾರೆ.