ಅಪಘಾತದಲ್ಲಿ ಸಾವಿಗೀಡಾದ ಯುವಕನ ಅಂಗಾಂಗ ರವಾನೆ
ಮೈಸೂರು, ಆಗಸ್ಟ್ 16 : ಅಪಘಾತದಲ್ಲಿ ಸಾವಿಗೀಡಾದ ಯುವಕನ ಅಂಗಾಗ ದಾನ ಮಾಡುವ ಮೂಲಕ ಮಾನವೀಯತೆ ಮೆರೆದ ಘಟನೆ ಮೈಸೂರಿನಲ್ಲಿ ನಡೆದಿದೆ.
ಅಂಗಾಂಗ
ದಾನ
ಮಾಡಿ
6
ಜೀವ
ಉಳಿಸಿದ
ಮಂಡ್ಯದ
ರೈತ
ಧರ್ಮ
ಎಸ್.ಎ
(28)
ಪಿರಿಯಾಪಟ್ಟಣ
ತಾಲೂಕು
ಸೂಳೇಕೋಟೆ
ಗ್ರಾಮದ
ನಿವಾಸಿಯಾಗಿದ್ದು,
ರಸ್ತೆ
ಅಪಘಾತದಿಂದ
ಗಾಯಗೊಂಡು
ಮೈಸೂರಿನ
ಅಪೋಲೋ
ಆಸ್ಪತ್ರೆಗೆ
ದಾಖಲಾಗಿದ್ದರು.
ಘಟನೆಯಲ್ಲಿ
ಧರ್ಮ
ಅವರ
ತಲೆಗೆ
ಪೆಟ್ಟು
ಬಿದ್ದು
ಕೋಮಾಗೆ
ಜಾರಿದ್ದರು.
ಅವರು
ಬದುಕುಳಿಯುವ
ಸಾಧ್ಯತೆ
ಕಡಿಮೆ
ಎಂದು
ವೈದ್ಯರು
ತಿಳಿಸಿದ
ಹಿನ್ನೆಲೆಯಲ್ಲಿ
ಕುಟುಂಬಸ್ಥರು
ಅಂಗಾಂಗ
ದಾನ
ಮಾಡಿದ್ದಾರೆ.
ಮೈಸೂರಿನ ನಾರಾಯಣ ಹೃದಯಾಲಯದ ವೈದ್ಯರು ಅಪೋಲೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಅಂಗಾಂಗವನ್ನು ತೆಗೆದಿರಿಸಿದ್ದಾರೆ. ಸದ್ಯ ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ಬೆಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ಧರ್ಮ ಅವರ ಅಂಗಾಂಗಗಳನ್ನು ರವಾನಿಸಲಾಗಿದೆ. ಈಗಾಗಲೇ ಮೈಸೂರಿನಿಂದ ಬೆಂಗಳೂರಿಗೆ ರಸ್ತೆ ಮಾರ್ಗವಾಗಿ ಮೂರು ಹಂತದಲ್ಲಿ ಅಂಗಾಂಗ ರವಾನೆ ಆಗಿದೆ. ಧರ್ಮ ಅವರ ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ, ಶ್ವಾಸಕೋಶವನ್ನು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ, ಕಿಡ್ನಿಯನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ನೀಡಿ ಕುಟುಂಬಸ್ಥರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.