ಮೈಸೂರು; ಓಪಿಡಿ ಬಂದ್; ಖಾಸಗಿ ಆಸ್ಪತ್ರೆ ವೈದ್ಯರ ಪ್ರತಿಭಟನೆ
ಮೈಸೂರು, ಡಿಸೆಂಬರ್ 11 : ದೇಶಾದ್ಯಂತ ನಡೆಯುತ್ತಿರುವ ಮುಷ್ಕರಕ್ಕೆ ಮೈಸೂರು ನಗರದಲ್ಲಿಯೂ ವೈದ್ಯರು ಬೆಂಬಲ ನೀಡಿದ್ದಾರೆ. ಹೊರರೋಗಿಗಳ ವಿಭಾಗವನ್ನು ಬಂದ್ ಮಾಡಿ ಭಾರತೀಯ ವೈದ್ಯಕೀಯ ಸಂಘದ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕೇಂದ್ರ ಸರ್ಕಾರ ಅಲೋಪತಿ ಮತ್ತು ಆಯುರ್ವೇದ ವೈದ್ಯ ಪದ್ಧತಿಯನ್ನು ವಿಲೀನಗೊಳಿಸಿದೆ. ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆಯನ್ನು ಮಾಡಲು ಅನುಮತಿ ನೀಡಿದೆ. ಇದಕ್ಕೆ ವೈದ್ಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಬಳ್ಳಾರಿಯ ಖ್ಯಾತ ವೈದ್ಯ ಬಿ.ಕೆ.ಶ್ರೀನಿವಾಸ್ ಮೂರ್ತಿ ನಿಧನ
ಮೈಸೂರು ನಗರದಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ ಓಪಿಡಿ ಸೇವೆ ಸಂಪೂರ್ಣ ಬಂದ್ ಆಗಿದೆ. ಆದರೆ, ಎಲ್ಲ ಆಸ್ಪತ್ರೆಗಳಲ್ಲಿಯೂ ತುರ್ತು ಚಿಕಿತ್ಸೆ, ಔಷಧ ಅಂಗಡಿ, ಆಂಬ್ಯುಲೆನ್ಸ್, ಒಳರೋಗಿ ವಿಭಾಗ ಎಂದಿನಂತೆ ಕಾರ್ಯ ನಿರ್ವಹಣೆ ಮಾಡುತ್ತಿದೆ.
ಕರ್ನಾಟಕ; ಖಾಸಗಿ ಆಸ್ಪತ್ರೆ ಓಪಿಡಿ ಬಂದ್
ಕೋವಿಡ್ ರೋಗಿಗಳಿಗೆ ಕೂಡ ಚಿಕಿತ್ಸೆ ಲಭ್ಯವಾಗುತ್ತಿದೆ. ದೂರವಾಣಿ ಸಮಾಲೋಚನೆಗೆ ಕೂಡ ವೈದ್ಯರು ಲಭ್ಯವಿದ್ದು,ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಸೇವೆಗಳೂ ಲಭ್ಯವಿದೆ.
ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ಅನುಮತಿ,ಕಾರ್ ಡ್ರೈವರ್ ವಿಮಾನ ಹಾರಿಸಿದಂತೆ ಎಂದ ವೈದ್ಯರು
ಐಎಂಎ
ಮೈಸೂರು
ಜಿಲ್ಲಾ
ಘಟಕದ
ಅಧ್ಯಕ್ಷ
ಡಾ.
ಬಿ.
ಎನ್.
ಆನಂದರವಿ
ಮಾತನಾಡಿ,
"ಆಯುರ್ವೇದ
ವೈದ್ಯರಿಗೆ
ಶಸ್ತ್ರ
ಚಿಕಿತ್ಸೆ
ನಡೆಸಲು
ಅವಕಾಶ
ಮಾಡಿಕೊಟ್ಟಿರುವ
ಸರ್ಕಾರದ
ಕ್ರಮವನ್ನು
ನಾವು
ಖಂಡಿಸುತ್ತೇವೆ"
ಎಂದರು.
"ಕೇಂದ್ರ
ಸರ್ಕಾರ
ತನ್ನ
ನಿರ್ಧಾರವನ್ನು
ಮರುಪರಿಶೀಲಿಸಬೇಕು
ಅಪೆಂಡಿಕ್ಸ್,
ಪಿತ್ತಕೋಶ,
ಹಾನಿಕಾರಕವಲ್ಲದ
ಗಡ್ಡೆ
ತೆಗೆಯುವುದು,
ಗ್ಯಾಂಗ್ರಿನ್,
ಹಲ್ಲಿನ
ರೂಟ್
ಕ್ಯಾನಲ್
ಮುಂತಾದ
ಸಾಮಾನ್ಯ
ಶಸ್ತ್ರ
ಚಿಕಿತ್ಸೆಗಳನ್ನು
ನಡೆಸಲು
ಸ್ನಾತಕೋತ್ತರ
ಆಯುರ್ವೇದ
ವೈದ್ಯರಿಗೆ
ಕೇಂದ್ರ
ಸರ್ಕಾರವು
ಅನುಮತಿ
ನೀಡಿದೆ"
ಎಂದು
ಹೇಳಿದರು.
"ಇದು ಕೇಂದ್ರ ಸರ್ಕಾರದ ತಪ್ಪು ನಿರ್ಧಾರವಾಗಿದೆ. ಕೇಂದ್ರ ಸರ್ಕಾರ ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ಮಾಡಲು ನೀಡಿರುವ ಅನುಮತಿ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಜನಸಾಮಾನ್ಯರು ಮುಂದಿನ ದಿನಗಳಲ್ಲಿ ಗೊಂದಲದಲ್ಲಿ ಸಿಲುಕಿ ಸಮಸ್ಯೆ ಎದುರಿಸಬೇಕಿದೆ" ಎಂದು ತಿಳಿಸಿದರು.
"ಅಲೋಪತಿ ಅನುಭವಿ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸುವಾಗಲೇ ಕೆಲವು ವೇಳೆ ಎಡವಟ್ಟು ಆಗುವ ಸಾಧ್ಯತೆ ಇರುತ್ತದೆ. ಹೀಗಿರುವಾಗ ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ನಡೆಸಲು ಅವಕಾಶ ನೀಡಿರುವುದು ರೋಗಿಗಳ ಪ್ರಾಣದ ಜೊತೆ ಆಡುವ ಚೆಲ್ಲಾಟ ಆಗಲಿದೆ" ಎಂದು ಆತಂಕ ವ್ಯಕ್ತಪಡಿಸಿದರು.
ಸ್ಕೈ ವಿಲ್ಲಾ ಮಾದರಿ ನಿಮ್ಮ ಕನಸಿನ ಅಪಾರ್ಟ್ಮೆಂಟ್ ಇಲ್ಲಿದೆ. ಹೆಚ್ಚಿನ ವಿವರಗಳಿಗಾಗಿ ಕ್ಲಿಕ್ ಮಾಡಿ