ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಇಲ್ಲ: ಅರುಣ್ ಸಿಂಗ್
ಮೈಸೂರು, ಆಗಸ್ಟ್ 31: "ಯಾವುದೇ ಕಾರಣಕ್ಕೂ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಅಧಿಕೃತವಾಗಿ, ಅನಧಿಕೃತವಾಗಿ ಯಾವುದೇ ಪಕ್ಷದೊಂದಿಗೆ ಬಿಜೆಪಿ ಹೊಂದಾಣಿಕೆ ಇಲ್ಲ," ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಮಾತಾಡಿದ ಅವರು, "ಕಾಂಗ್ರೆಸ್ ಹಾಗೂ ಜೆಡಿಎಸ್ನ ಎರಡೂ ಸರ್ಕಾರಗಳನ್ನು ಜನ ನೋಡಿದ್ದಾರೆ. ನಾವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯುವುದು ನಮ್ಮ ಸಂಕಲ್ಪ. ನಮ್ಮದು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿದೆ," ಎಂದರು.
ಮೈಸೂರು ಅತ್ಯಾಚಾರ ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ
"ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನಾಯಕತ್ವದಲ್ಲಿ ಒಳ್ಳೆಯ ಆಡಳಿತ ನೀಡುತ್ತಿದ್ದೇವೆ. ಸರ್ವರ ಅಭಿವೃದ್ದಿಯೇ ಬಿಜೆಪಿ ಸರ್ಕಾರದ ಗುರಿಯಾಗಿದೆ. ರಾಜಕೀಯ ಪಕ್ಷವಾಗಿ ಬಿಜೆಪಿ ಶಕ್ತಿಯುತವಾಗಿದ್ದು, ಮುಂಬರುವ ಎಲ್ಲಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲ್ಲಿದೆ. ಪ್ರಮುಖವಾಗಿ ಹಳೇ ಮೈಸೂರು ಭಾಗದಲ್ಲಿ ಪಕ್ಷ ಇನ್ನಷ್ಟು ಉತ್ತಮ ಸಾಧನೆ ಮಾಡಲಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಡಿಯೂರಪ್ಪ ದೊಡ್ಡ ನಾಯಕ
"ಮೈಸೂರಿನಲ್ಲಿ ಚಾಮುಂಡೇಶ್ವರಿ ದರ್ಶನ ಪಡೆದಿರುವುದು ಸಂತಸವಾಗಿದೆ. ದೇಶ ಸುಭೀಕ್ಷತೆಯಿಂದ ಕುಡಿರಲಿ ಅಂತ ಪ್ರಾರ್ಥನೆ ಮಾಡಿರುವುದಾಗಿ," ಅರುಣ್ ಸಿಂಗ್ ತಿಳಿಸಿದ್ದಾರೆ.
"ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಬ್ಬ ದೊಡ್ಡ ನಾಯಕ. ಅವರಿಗೆ ಸಂಘಟನೆ ಬಗ್ಗೆ ಅನುಭವ ಇದೆ. ಅವರ ಅನುಭವವನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳುತ್ತೇವೆ," ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು."ಸದ್ಯ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ರಾಜ್ಯದ ಹಿತದೃಷ್ಟಿಯಿಂದ ಪರಿಪೂರ್ಣ ಕೆಲಸ ಮಾಡುತ್ತಿದೆ. ಹಳೇ ಮೈಸೂರು ಭಾಗದಲ್ಲಿ ದಿನ ದಿನಕ್ಕೂ ಪಕ್ಷ ಸಂಘಟನೆ ಹೆಚ್ಚಾಗುತ್ತಿದೆ. ಈ ಭಾಗದಲ್ಲೂ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ," ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.ಸೆ.3ರಂದು ಉನ್ನತ ಮಟ್ಟದ ದಸರಾ ಸಮಿತಿ ಸಭೆ
ಮಹಾಮಾರಿ
ಕೊರೊನಾ
ಆರ್ಭಟ
ಕಡಿಮೆಯಾಗಿರುವ
ಬೆನ್ನಲ್ಲೇ
ಸಾಂಸ್ಕೃತಿಕ
ನಗರಿ
ಮೈಸೂರಿನಲ್ಲಿ
ವಿಶ್ವವಿಖ್ಯಾತ
ದಸರಾ
ಹಬ್ಬದ
ಆಚರಣೆಗೆ
ಸಿದ್ಧತೆ
ನಡೆಯುತ್ತಿದ್ದು,
"ಈ
ಸಂಬಂಧ
ಸೆಪ್ಟೆಂಬರ್
3ರಂದು
ಉನ್ನತ
ಮಟ್ಟದ
ಸಮಿತಿ
ಸಭೆ
ನಡೆಯಲಿದೆ,"
ಎಂದು
ಜಿಲ್ಲಾ
ಉಸ್ತುವಾರಿ
ಸಚಿವ
ಎಸ್.ಟಿ.
ಸೋಮಶೇಖರ್
ತಿಳಿಸಿದರು.
ವಿವಿಧ
ಕಾರ್ಯಕ್ರಮಗಳಲ್ಲಿ
ಪಾಲ್ಗೊಳ್ಳುವ
ನಿಮಿತ್ತ
ಮೈಸೂರಿಗೆ
ಆಗಮಿಸಿದ
ಹಿನ್ನೆಲೆಯಲ್ಲಿ
ಮಂಗಳವಾರ
ಸುದ್ದಿಗಾರರೊಂದಿಗೆ
ಮಾತನಾಡಿದ
ಅವರು,
"2021ರ
ಮೈಸೂರು
ದಸರಾ
ಹಿನ್ನಲೆ
ಸೆಪ್ಟೆಂಬರ್
3ರಂದು
ಬೆಂಗಳೂರಿನಲ್ಲಿ
ಹೈಪವರ್
ಕಮಿಟಿಯ
ಮೊದಲ
ಸಭೆ
ನಡೆಯಲಿದೆ.
ಇದಾದ
ಬಳಿಕ
ಸೆಪ್ಟೆಂಬರ್
8ರಂದು
ಮೈಸೂರಿನಲ್ಲಿ
ಅದರ
ಮುಂದುವರಿದ
ಸಭೆ
ನಡೆಸಲಿದ್ದು,
ಈ
ಸಭೆಯಲ್ಲಿ
ದಸರಾದ
ಪ್ರಮುಖ
ರೂಪುರೇಷಗಳನ್ನು
ಸಿದ್ಧ
ಮಾಡುತ್ತೇವೆ,"
ಎಂದು
ಸಚಿವ
ಸೋಮಶೇಖರ್
ಹೇಳಿದರು.
ಕಠಿಣ ಕ್ರಮಗಳು ಅನಿವಾರ್ಯ
ಇದೇ ವೇಳೆ ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, "ತಮಿಳುನಾಡು ಮೂಲದ ಆರೋಪಿಗಳಿಗೆ ಗ್ಯಾಂಗ್ರೇಪ್ನಂತಹ ಕೃತ್ಯವೆಸಗಲು ಮೈಸೂರು ಕೇಂದ್ರ ಸ್ಥಾನ ಎಂಬ ಮಾಹಿತಿ ಲಭಿಸಿರುವುದು ನಿಜಕ್ಕೂ ಆತಂಕದ ಸಂಗತಿ. ಹೀಗಾಗಿ ಇದನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ತಮಿಳುನಾಡಿನ ಪುಂಡ ಪೋಕರಿಗಳು ಇಷ್ಟು ಸುಲಭವಾಗಿ ಮೈಸೂರಿಗೆ ಬಂದು ಕ್ರೈಂ ಮಾಡಿ ಹೋಗ್ತಾರೆ ಅಂದರೆ ಏನರ್ಥ? ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಕಠಿಣ ಕ್ರಮಗಳು ಅನಿವಾರ್ಯವಾಗಿದ್ದು, ಇವೆಲ್ಲದರ ಬಗ್ಗೆ ಇಂದಿನ ಪೊಲೀಸರ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿ, ಅಪರಾಧ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ," ಎಂದರು.
ತಲೆದಂಡದಿಂದ ಪೊಲೀಸರು ಬಚಾವ್?
ಇನ್ನೂ ಗ್ಯಾಂಗ್ ರೇಪ್ ಸೇರಿದಂತೆ ಮೈಸೂರಿನಲ್ಲಿ ಇನ್ನಿತರ ಅಪರಾಧ ಪ್ರಕರಣಗಳು ಹೆಚ್ಚಾಗಿ ನಡೆದ ಹಿನ್ನೆಲೆಯಲ್ಲಿ ಮೈಸೂರಿನ ಹಿರಿಯ ಪೊಲೀಸ್ ಅಧಿಕಾರಿಗಳ ತಲೆದಂಡವಾಗಲಿದೆಯೇ? ಎಂಬ ಪ್ರಶ್ನೆ ಮೂಡಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸೋಮಶೇಖರ್, "ಸದ್ಯಕ್ಕೆ ಯಾರ ತಲೆದಂಡವೂ ಇಲ್ಲ, ಮೈಸೂರು ಪೊಲೀಸರು ಗ್ಯಾಂಗ್ ರೇಪ್ ಪ್ರಕರಣವನ್ನು ಬಹುಬೇಗ ಭೇದಿಸಿದ್ದು, ಹೀಗಾಗಿ ತಲೆದಂಡದ ಅವಶ್ಯಕತೆ ಇಲ್ಲ. ಆದರೆ ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ಕಠಿಣ ಕ್ರಮ ವಹಿಸಲು ಸೂಚಿಸುತ್ತೇನೆ ಎಂದ ಅವರು, ಮುಂದಿನ ದಿನಗಳಲ್ಲೂ ಇಂತಹ ಪ್ರಕರಣ ನಡೆದರೆ ಕ್ರಮ ನಿಶ್ಚಿತ," ಎಂದು ಎಚ್ಚರಿಸಿದರು.