ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಆದಾಯದಲ್ಲಿ ಭಾರೀ ಇಳಿಕೆ
ಮೈಸೂರು, ಆಗಸ್ಟ್ 31; ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಪ್ರಭಾವ ಬೀರಿರುವ ಕೊರೊನಾ, ದೇವಾಲಯಗಳ ಆದಾಯದ ಮೇಲೂ ಪರಿಣಾಮ ಬೀರಿದೆ. ಕೋವಿಡ್-19 ಆತಂಕದಿಂದಾಗಿ ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಆದಾಯದಲ್ಲಿ ಭಾರೀ ಇಳಿಕೆಯಾಗಿದೆ.
ಕಳೆದ ಬಾರಿ ಸಂಗ್ರಹಕ್ಕೆ ಹೋಲಿಸಿದರೆ 41,57,204 ರೂ. ಕಡಿಮೆ ಸಂಗ್ರಹವಾಗಿದೆ. ಈ ಬಾರಿಯ ಎಣಿಕೆಯಲ್ಲಿ ಸಂಗ್ರಹವಾದ ಕಾಣಿಕೆ 69,24,900 ರೂ. ಆಗಿದೆ. 2020ರ ಜನವರಿಯಲ್ಲಿ 1,10,82,900 ರೂ. ಸಂಗ್ರಹವಾಗಿದೆ. ಆದರೆ ನಂತರದಲ್ಲಿ ಉಂಟಾದ ಕೊರೊನಾ ಲಾಕ್ ಡೌನ್ ಕಾರಣದಿಂದ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಕೂಡ ಇಳಿಕೆಯಾಗಿದೆ. ಹೀಗಾಗಿ ದೇವಸ್ಥಾನದ ಹುಂಡಿಗಳಲ್ಲಿ ಸಂಗ್ರಹವಾಗುತ್ತಿದ್ದ ಆದಾಯದ ಮೇಲೆ ಪರಿಣಾಮ ಬೀರಿದೆ.
ಕರ್ನಾಟಕದ
ದೇವಾಲಯಗಳ
ಆದಾಯ
ಶೇ
72ರಷ್ಟು
ಕುಸಿತ
ದೇವಸ್ಥಾನದ
ಹುಂಡಿಯಲ್ಲಿ
ಈ
ಬಾರಿಯೂ
ನಿಷೇಧಿತ
ನೋಟುಗಳು
ಲಭಿಸಿವೆ.
ಈ
ಬಾರಿಯ
ಹುಂಡಿ
ಎಣಿಕೆಯ
ಸಂದರ್ಭದಲ್ಲಿ
11,500
ರೂ.
ನಷ್ಟು
ನಿಷೇಧಿತ
ನೋಟುಗಳು
ಸಿಕ್ಕಿವೆ.
ಕಳೆದ
ಬಾರಿಯ
ಎಣಿಕೆಯಲ್ಲಿ
80,500
ರೂ.
ಮೌಲ್ಯದ
ನಿಷೇಧಿತ
ನೋಟುಗಳು
ದೊರೆತಿದ್ದವು.
ಲಾಕ್
ಡೌನ್
ವೇಳೆಯಲ್ಲಿ
ದೇವಸ್ಥಾನದ
ಹುಂಡಿಯಲ್ಲಿ
ವಿದೇಶಿ
ಕರೆನ್ಸಿ
ಸಂಗ್ರಹವಾಗಿದ್ದು,
7
ವಿದೇಶಿ
ಕರೆನ್ಸಿ
ನೋಟುಗಳು
ಹುಂಡಿ
ಎಣಿಕೆ
ವೇಳೆಯಲ್ಲಿ
ದೊರೆತಿವೆ.