ಮೈಸೂರು : ಶಂಕರಲಿಂಗೇ ಗೌಡ ಪುತ್ರ ಆತ್ಮಹತ್ಯೆ ಯತ್ನ
ಮೈಸೂರು, ನವೆಂಬರ್ 21 : ಮಾಜಿ ಶಾಸಕ ಶಂಕರಲಿಂಗೇ ಗೌಡ ಪುತ್ರ ನಾಗೇಶ್ ಪ್ರೀತಂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪ್ರಾಣಾಪಾಯದಿಂದ ಅವರು ಪಾರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶನಿವಾರ
ಮುಂಜಾನೆ
ವಾಯು
ವಿಹಾರಕ್ಕೆ
ಹೋಗಿದ್ದ
ವೇಳೆ
ನಾಗೇಶ್
ಪ್ರೀತಂ
ಅವರು
ವಿಷ
ಸೇವಿಸಿ
ಆತ್ಮಹತ್ಯೆಗೆ
ಯತ್ನಿಸಿದ್ದು,
ಸ್ಥಳೀಯರು
ಅವರನ್ನು
ರಕ್ಷಿಸಿ
ಆಸ್ಪತ್ರೆಗೆ
ದಾಖಲು
ಮಾಡಿದ್ದಾರೆ.
ಕುವೆಂಪು
ನಗರ
ಠಾಣೆಯಲ್ಲಿ
ಪ್ರಕರಣ
ದಾಖಲಾಗಿದೆ.
[ಶಂಕರಲಿಂಗೇಗೌಡ
ವಿಧಿವಶ]
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಯತ್ನಿಸಿರಬಹುದು ಎಂದು ಶಂಕಿಸಲಾಗಿದೆ. ನಾಗೇಶ್ ಪ್ರೀತಂ ಮೈಸೂರಿನ ಚಾಮರಾಜ ಕ್ಷೇತ್ರದ ಮಾಜಿ ಶಾಸಕ ಎಚ್.ಎಸ್. ಶಂಕರಲಿಂಗೇಗೌಡ ಅವರ ಪುತ್ರ. ಶಂಕರಲಿಂಗೇಗೌಡ ಅವರು ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ 2014ರ ಏಪ್ರಿಲ್ನಲ್ಲಿ ನಿಧನರಾಗಿದ್ದರು.
ರಾಜಕೀಯ ಕ್ಷೇತ್ರದಿಂದ ದೂರವಿದ್ದ ನಾಗೇಶ್ ಪ್ರೀತಂ ಉದ್ಯಮ ನಡೆಸುತ್ತಿದ್ದರು. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
Comments
English summary
Nageesh Preetam attempted suicide at Mysuru on Saturday morning and admitted to the hospital. Nageesh Preetam son of former MLA Shankarlinge Gowda of Chamaraja constituency.