ವಿಶ್ವ ಶಾಂತಿಗೆ ಸೈಕಲ್ ನಲ್ಲಿ ಹಾಸನದ ನಾಗರಾಜ ಗೌಡ ಭಾರತ ಯಾತ್ರೆ
ಮೈಸೂರು, ಮಾರ್ಚ್ 10: ವಿಶ್ವದಲ್ಲಿನ ಅಶಾಂತಿ ದೂರವಾಗಿ, ಶಾಂತಿ ಭಾವನೆ ಮೂಡಲೆಂದು ವ್ಯಕ್ತಿಯೊಬ್ಬರು ಸೈಕಲ್ನಲ್ಲಿ ಭಾರತ ಯಾತ್ರೆ ಕೈಗೊಂಡಿದ್ದಾರೆ.
ಹಾಸನ ಮೂಲದ ನಾಗರಾಜ ಗೌಡರು ಸೈಕಲ್ನಲ್ಲಿ ಭಾರತ ಯಾತ್ರೆ ಕೈಗೊಂಡಿದ್ದು, ಈಗಾಗಲೇ 20 ಸಾವಿರ ಕಿಲೋ ಮೀಟರ್ ಪರ್ಯಟನೆ ಮಾಡಿದ್ದಾರೆ. ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಹರಿಯಾಣ, ಪಂಜಾಬ್ ಸೇರಿ ಹದಿಮೂರು ರಾಜ್ಯಗಳನ್ನು ಸುತ್ತಿರುವ ನಾಗರಾಜ ಗೌಡ, ಇದೀಗ ಮೈಸೂರಿಗೆ ಬಂದಿದ್ದಾರೆ.
ಇಳಿವಯಸ್ಸಿನಲ್ಲಿ ಪ್ರಸಿದ್ಧ ಪುಣ್ಯ ಕ್ಷೇತ್ರ ದರ್ಶನಕ್ಕೆ ಸರ್ಕಾರದಿಂದ ಹಣ!
ದೇಶದೆಲ್ಲೆಡೆ ಸೈಕಲ್ ತುಳಿದು ಶಾಂತಿ ಸಂದೇಶ ಸಾರುತ್ತಿರುವ ನಾಗರಾಜಗೌಡ, ಇನ್ನೂ ಹಲವು ರಾಜ್ಯಗಳನ್ನು ಸುತ್ತಿ ವಿಶ್ವಶಾಂತಿಗಾಗಿ ಸಂದೇಶ ಸಾರಲಿದ್ದಾರೆ. ಸರ್ವಧರ್ಮ ಸಮನ್ವಯ ಹಾಗೂ ದೇಶಾಭಿಮಾನದ ಕುರಿತು ಜಾಗೃತಿ ಮೂಡಿಸುವುದು ಅವರ ಉದ್ದೇಶವಾಗಿದೆ.
Comments
English summary
A Hassan man Nagaraj Gowda is traveling by bicycle all over the country to bring peace in the world
Story first published: Tuesday, March 10, 2020, 15:13 [IST]