ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಗಮನಕ್ಕೆ

|
Google Oneindia Kannada News

ಮೈಸೂರು, ಜುಲೈ 01 : ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಯಲು ಕರ್ನಾಟಕ ಸರ್ಕಾರ ಭಾನುವಾರ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದೆ. ಜುಲೈ 5ರ ಭಾನವಾರದಿಂದ ಇದು ಜಾರಿಗೆ ಬರಲಿದೆ.

ಭಾನುವಾರ ಸಂಪೂರ್ಣ ಲಾಕ್ ಡೌನ್ ಇರುವ ಕಾರಣ ಅಂದು ವಾಹನ ಸಂಚಾರ ರದ್ದುಗೊಳ್ಳಲಿದೆ. ಯಾವುದೇ ಪ್ರವಾಸಿತಾಣಗಳಿಗೂ ಭೇಟಿ ನೀಡಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಮೈಸೂರು ಮೃಗಾಲಯ ಕೆಲವು ಬದಲಾವಣೆ ಮಾಡಿದೆ.

ಮೈಸೂರು: ದೃಶ್ಯಂ ಸಿನಿಮಾ ಮಾದರಿಯಲ್ಲಿ ಕೊಲೆ ಮಾಡಿ ಸಿಕ್ಕಿಬಿದ್ದ ಆರೋಪಿಗಳು!ಮೈಸೂರು: ದೃಶ್ಯಂ ಸಿನಿಮಾ ಮಾದರಿಯಲ್ಲಿ ಕೊಲೆ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಶ್ರೀ ಚಾಮರಾಜೇಂದ್ರ ಮೃಗಾಲಯ, ಕಾರಂಜಿ ಕೆರೆ ಪರಿಸರ ಉದ್ಯಾನಕ್ಕೆ ಇಷ್ಟು ದಿನ ಮಂಗಳವಾರ ರಜೆ ಇತ್ತು. ಭಾನುವಾರ ಮೈಸೂರಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡುವುದರಿಂದ ಭಾನುವಾರ ಅವುಗಳು ತೆರೆದಿರುತ್ತಿತ್ತು.

ಮೈಸೂರು: ಜನಮನ ಸೆಳೆಯುತ್ತಿದೆ ರೈಲ್ವೆ ವಸ್ತು ಸಂಗ್ರಹಾಲಯದ ಕೆಫೆಟೇರಿಯ ಮೈಸೂರು: ಜನಮನ ಸೆಳೆಯುತ್ತಿದೆ ರೈಲ್ವೆ ವಸ್ತು ಸಂಗ್ರಹಾಲಯದ ಕೆಫೆಟೇರಿಯ

Mysuru Zoo To Open For People Tuesday Closed On Sunday

ಈಗ ಸಂಪೂರ್ಣ ಲಾಕ್ ಡೌನ್ ನಿಯಮ ಪಾಲನೆ ಮಾಡಬೇಕಾಗಿದೆ. ಆದ್ದರಿಂದ ವಾರದ ರಜೆ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಮಂಗಳವಾರ ಪ್ರವಾಸಿಗರು ಮೃಗಾಲಯ ಮತ್ತು ಉದ್ಯಾನಕ್ಕೆ ಭೇಟಿ ನೀಡಬಹುದಾಗಿದೆ. ಭಾನುವಾರ ರಜೆ ಇರುತ್ತದೆ.

ಚೀನಾದ ರಾಜಧಾನಿ ಬೀಜಿಂಗ್ ಮೃಗಾಲಯ ಮತ್ತೆ ಆರಂಭಚೀನಾದ ರಾಜಧಾನಿ ಬೀಜಿಂಗ್ ಮೃಗಾಲಯ ಮತ್ತೆ ಆರಂಭ

ಮುಂದಿನ ಆದೇಶದ ತನಕ ಶ್ರೀ ಚಾಮರಾಜೇಂದ್ರ ಮೃಗಾಲಯ, ಕಾರಂಜಿ ಕೆರೆ ಪರಿಸರ ಉದ್ಯಾನಕ್ಕೆ ಭಾನುವಾರ ಪ್ರವಾಸಿಗರ ಭೇಟಿ ನಿರ್ಬಂಧಿಸಲಾಗಿದೆ. ಮಂಗಳವಾರ ಜನರು ಭೇಟಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರವಾಸಿಗರ ಆರೋಗ್ಯದ ಹಿತದೃಷ್ಟಿಯಿಂದ ಸಹಕಾರ ನೀಡಬೇಕು ಎಂದು ಜನರಿಗೆ ಮನವಿ ಮಾಡಲಾಗಿದೆ. ಭಾನುವಾರ ಸಂಪೂರ್ಣ ಲಾಕ್ ಡೌನ್ ಇರುವ ಕಾರಣ ಮೈಸೂರಿಗೆ ಯಾವುದೇ ಪ್ರವಾಸಿಗರು ಭೇಟಿ ನೀಡುವಂತಿಲ್ಲ. ಸಂಪೂರ್ಣ ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ ಎಂದು ಸರ್ಕಾರ ಈಗಾಗಲೇ ಹೇಳಿದೆ.

English summary
Due to Sunday complete lock down in Karnataka Mysuru zoo and Karanji Lake Nature Park will be closed for public viewing. Both will open for tourists on Tuesday till further order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X