ಸೆ.3ರಂದು ನಡೆಯಬೇಕಿದ್ದ ಮೈಸೂರು ವಿವಿ ಪದವಿ ಪರೀಕ್ಷೆಗಳು ಮುಂದೂಡಿಕೆ
ಮೈಸೂರು, ಸೆಪ್ಟೆಂಬರ್ 2: ಶುಕ್ರವಾರದಿಂದ (ಸೆ.3) ಆರಂಭವಾಗಬೇಕಿದ್ದ ಮೈಸೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳು ಮುಂದೂಡಿಕೆಯಾಗಿವೆ. ಒಂದೇ ದಿನ ಎರಡು ವಿಷಯದ ಪರೀಕ್ಷೆ ನಿಗದಿಯಾಗಿತ್ತು. ಹೀಗಾಗಿ ಪರೀಕ್ಷಾ ದಿನಾಂಕ ಬದಲಿಸುವಂತೆ ವಿದ್ಯಾರ್ಥಿಗಳ ಮನವಿ ಸಲ್ಲಿಸಿದ್ದರು.
ಹೀಗಾಗಿ ಶುಕ್ರವಾರದ ಬದಲು ಸೆಪ್ಟೆಂಬರ್ 13ರಿಂದ ಪದವಿ ಪರೀಕ್ಷೆಗಳು ಆರಂಭವಾಗಲಿದ್ದು, ಪರೀಕ್ಷೆ ಮುಂದೂಡಿಕೆ ಬಗ್ಗೆ ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಜ್ಞಾನಪ್ರಕಾಶ್ ಅಧಿಕೃತ ಮಾಹಿತಿ ನೀಡಿದ್ದಾರೆ.
"ಪದವಿ ವಿದ್ಯಾರ್ಥಿಗಳ ಹಿತದೃಷ್ಟಿ ನಮಗೆ ಮುಖ್ಯ. ಆದ್ದರಿಂದ ಪರೀಕ್ಷಾ ದಿನಾಂಕವನ್ನು ಮುಂದೂಡಲಾಗಿದೆ. ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು ಆದಷ್ಟು ಬೇಗ ನೀಡಲಾಗುವುದು," ಎಂದು ಸಹ ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಜ್ಞಾನಪ್ರಕಾಶ್ ಹೇಳಿದ್ದಾರೆ.
ಮೈಸೂರು
ದಸರಾಗೆ
ಆನೆಗಳ
ಆಯ್ಕೆ
ವಿಶ್ವವಿಖ್ಯಾತ
ಮೈಸೂರು
ದಸರಾ
ಮಹೋತ್ಸವ-2021ದಲ್ಲಿ
ಜಂಬೂ
ಸವಾರಿಗೆ
ಆನೆಗಳ
ಆಯ್ಕೆ
ಪ್ರಕ್ರಿಯೆ
ಆರಂಭವಾಗಿದ್ದು,
ಪ್ರಾಥಮಿಕ
ಆಯ್ಕೆ
ಪ್ರಕ್ರಿಯೆಯಲ್ಲಿ
3
ಆನೆಗಳನ್ನು
ಆಯ್ಕೆ
ಮಾಡಲಾಗಿದೆ.
ಚೈತ್ರಾ, ಲಕ್ಷ್ಮೀ, ಪಾರ್ಥಸಾರಥಿ ಎಂಬ ಮೂರು ಆನೆಗಳು ಗುರುತು ಮಾಡಲಾಗಿದ್ದು, ಅಂತಿಮವಾಗಿ ಆಯ್ಕೆಯಾದಲ್ಲಿ ಮೊದಲ ಹಂತದಲ್ಲಿ ಪಾಲ್ಗೊಳ್ಳಲು ಈ 3 ಆನೆಗಳು ಮೈಸೂರಿಗೆ ಆಗಮಿಸಲಿವೆ. ಆನೆ ಶಿಬಿರಕ್ಕೆ ಡಿಸಿಎಫ್ ಕರಿಕಾಳನ್, ಪಶುವೈದ್ಯಾಧಿಕಾರಿ ಡಾ. ವಾಸೀಂ ಮಿರ್ಜಾ ವಲಯ ಅರಣ್ಯಾಧಿಕಾರಿ, ಎ.ಎಂ. ಗುಡಿ ನೇತೃತ್ವದ ತಂಡ ಭೇಟಿ ನೀಡಿ 3 ಆನೆಗಳನ್ನು ಆಯ್ಕೆ ಮಾಡಿದೆ.
ಕೊರೊನಾ ಕಾರಣದಿಂದ ಈ ಬಾರಿ ಸರಳ ದಸರಾವಾದರೆ 14 ಆನೆಗಳಲ್ಲಿ 7 ಆನೆಗಳು ಮೈಸೂರಿಗೆ ಕರೆಸಿಕೊಳ್ಳಲು ಚಿಂತನೆ ಇದೆ. ಕಳೆದ ವರ್ಷ 5 ಆನೆ ಕರೆಸಿಕೊಳ್ಳಲಾಗಿತ್ತು. ಈ ಬಾರಿ ಆನೆಗಳ ಆರೋಗ್ಯದ ಹಾಗೂ ಮುಂಜಾಗ್ರತ ದೃಷ್ಟಿಯಿಂದ ಎರಡು ಹೆಚ್ಚುವರಿ ಆನೆಗಳನ್ನು ಕರೆಸಿಕೊಳ್ಳಲು ನಿರ್ಧಾರ ಮಾಡಲಾಗಿದೆ.
"ಈ ವರ್ಷ ಮೈಸೂರು ದಸರಾ ಆಚರಿಸುವುದು ನಿಶ್ಚಿತವಾಗಿದ್ದು, ಕಳೆದ ಬಾರಿಯಂತೆ ಸರಳವಾಗಿ ಮಾಡಬೇಕೋ ಅಥವಾ ಇನ್ನೂ ಬೇರೆ ಮಾರ್ಪಾಡು ಮಾಡಿಕೊಳ್ಳಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಚರ್ಚೆ ನಡೆಸುತ್ತೇನೆ," ಎಂದು ಮೈಸೂರು ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ತಿಳಿಸಿದ್ದರು.
"ಕೋವಿಡ್ ಹೆಚ್ಚಾಗಲಿದೆಯೇ ಅಥವಾ ಕಡಿಮೆ ಆಗಲಿದೆಯೇ ನೋಡುತ್ತೇವೆ. ಹೈಪವರ್ ಕಮಿಟಿಯಲ್ಲಿ ಮೈಸೂರು ದಸರಾ ಬಗ್ಗೆ ಚರ್ಚೆ ಮಾಡುತ್ತೇವೆ. ಕೊರೊನಾ ಸ್ಥಿತಿಗತಿ ಬಗ್ಗೆ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ. ಆನಂತರ ಒಂದು ಸ್ಪಷ್ಟ ಚಿತ್ರಣ ದೊರೆಯಲಿದೆ," ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು.
1ನೇ
ತರಗತಿಯಿಂದ
ಶಾಲೆ
ಆರಂಭಕ್ಕೆ
ಒತ್ತಡ
"ರಾಜ್ಯದಲ್ಲಿ
ಶಾಲಾ-
ಕಾಲೇಜು
ಆರಂಭಕ್ಕೆ
ಪೋಷಕರು,
ವಿದ್ಯಾರ್ಥಿಗಳು
ಮತ್ತು
ಶಿಕ್ಷಕರಿಂದ
ಉತ್ತಮ
ಸ್ಪಂದನೆ
ಸಿಗುತ್ತಿದೆ.
ಒಂದನೇ
ತರಗತಿಗಳಿಂದಲೇ
ಶಾಲೆ
ಆರಂಭ
ಮಾಡುವಂತೆ
ಪೋಷಕರು
ಹೇಳುತ್ತಿದ್ದಾರೆ,"
ಎಂದು
ಪ್ರಾಥಮಿಕ
ಮತ್ತು
ಪ್ರೌಢ
ಶಿಕ್ಷಣ
ಸಚಿವ
ಬಿ.ಸಿ.
ನಾಗೇಶ್
ಹೇಳಿದ್ದಾರೆ.
"ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭಿಸುವಂತೆ ಹೇಳುತ್ತಿದ್ದಾರೆ. ಆನ್ಲೈನ್ ಕ್ಲಾಸ್ಗಳಲ್ಲಿ ಸರಿಯಾದ ಸಂವಹನ ಆಗುವುದಿಲ್ಲ ಎಂದು ವಿದ್ಯಾರ್ಥಿಗಳು ಶಾಲೆಗಳಿಗೆ ಭೇಟಿಯ ವೇಳೆ ತಿಳಿಸಿದ್ದಾರೆ," ಎಂದು ಸಚಿವರು ಮಾಹಿತಿ ಹಂಚಿಕೊಂಡರು.
ಹಾವೇರಿಯಲ್ಲಿ ಮಾತನಾಡಿದ ಬಿ.ಸಿ. ನಾಗೇಶ್, "9, 10, 11 ಮತ್ತು 12 ತರಗತಿಗಳನ್ನು ತಜ್ಞರ ಸಲಹೆಯಂತೆ ಪ್ರಾರಂಭ ಮಾಡಿದ್ದೇವೆ. ಆಗಸ್ಟ್ 23ರಿಂದ ಶಾಲೆಗಳನ್ನು ಆರಂಭ ಮಾಡಿದ್ದೇವೆ. ಇನ್ನೊಂದಿಷ್ಟು ದಿನಗಳ ಕಾಲ ನೋಡುತ್ತೇವೆ. ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದಷ್ಟು, ಅವರ ಆರೋಗ್ಯಕ್ಕೂ ಒತ್ತು ನೀಡುತ್ತೇವೆ. ಸರ್ಕಾರದ ವ್ಯವಸ್ಥೆ ಮೀರಿ ಕೆಲಸ ಮಾಡಿದ ಶಿಕ್ಷಕರು ನಮ್ಮಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಮಕ್ಕಳ ಇಚ್ಛೆಯಂತೆ ಒಂದರಿಂದ ಐದನೇ ತರಗತಿವರೆಗೆ ಶಾಲೆ ಆರಂಭ ಮಾಡುವ ಬಗ್ಗೆ ಚಿಂತನೆ ಇದೆ," ಎಂದರು.
"ಶಾಲಾ ಕೊಠಡಿಗಳ ವಿಷಯದಲ್ಲಿ ಹಣಕಾಸಿನ ಕೊರತೆ ಇದೆ. ಶಾಲೆಗಳಲ್ಲಿ ಬಹುತೇಕ ಕಡೆಗಳಲ್ಲಿ ಶೌಚಾಲಯಗಳ ಸಮಸ್ಯೆ ನಿವಾರಣೆ ಆಗಿದೆ. ಶೌಚಾಲಯಗಳು ಇಲ್ಲದ ಕಡೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ,' ಎಂದು ತಿಳಿಸಿದರು.