ಮೈಸೂರು ದಸರಾ 2022; ಇದೇ ಮೊದಲ ಬಾರಿಗೆ ಕೈಗಾರಿಕಾ ದಸರಾ ಉತ್ಸವ
ಮೈಸೂರು, ಸೆಪ್ಟೆಂಬರ್, 22: ನಾಡಹಬ್ಬ ಮೈಸೂರು ದಸರಾದಲ್ಲಿ ಇದೇ ಮೊದಲ ಬಾರಿಗೆ ಕೈಗಾರಿಕಾ ದಸರಾ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸೆಪ್ಟೆಂಬರ್ 26ರಿಂದ ಸೆಪ್ಟೆಂಬರ್ 30ರವರೆಗೆ ಕೈಗಾರಿಕಾ ದಸರಾ ಆಯೋಜಿಸಲಾಗಿದೆ ಎಂದು ಮೈಸೂರು ಜಿಲ್ಲಾ ಪರಿಶಿಷ್ಟ ಪಂಗಡದ ಉದ್ಯಮಿದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸೆಪ್ಟೆಂಬರ್ 26 ಹಾಗೂ 27ರಂದು ಕೈಗಾರಿಕಾ ವಿಚಾರ ಸಂಕಿರಣವನ್ನು ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಸ್ವಯಂ ಉದ್ಯೋಗ ನಿರ್ವಹಿಸುತ್ತಿರುವ ಉದ್ದಿಮೆದಾರರಿಗೆ ಅನುಕೂಲ ಆಗುವಂತೆ ಕೈಗಾರಿಕಾಭಿವೃದ್ಧಿಗೆ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆ, ಬ್ಯಾಂಕ್ ಅಧಿಕಾರಿಗಳು ಸ್ವಯಂ ಉದ್ಯೋಗ ಕೈಗೊಳ್ಳಲು, ಸರ್ಕಾರದ ವತಿಯಿಂದ ಲಭ್ಯವಿರುವ ಸವಲತ್ತುಗಳ ಬಗ್ಗೆ ಎರಡು ದಿನಗಳ ಅವದಿಯಲ್ಲಿ ಮಾಹಿತಿ ನೀಡಲಿದ್ದಾರೆ," ಎಂದು ತಿಳಿಸಿದರು.
ಮೈಸೂರು ದಸರಾ ಮಹೋತ್ಸವ 2022: ಅಂತಾರಾಜ್ಯ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಿದ ಸರಕಾರ
ಇದೇ
ಮೊದಲ
ಬಾರಿಗೆ
ಕೈಗಾರಿಕಾ
ದಸರಾ
ಸೆಪ್ಟೆಂಬರ್
28ರಂದು
ವೆಂಡರ್
ಡೆವಲಪ್ಮೆಂಟ್
ಕಾರ್ಯಕ್ರಮವನ್ನು
ಮೈಸೂರು
ಚೇಂಬರ್ಸ್
ಆಫ್
ಕಾಮರ್ಸ್
ಇಂಡಸ್ಟ್ರೀಸ್
ಕಟ್ಟಡ
ಹೆಬ್ಬಾಳು
ಕೈಗಾರಿಕಾ
ಪ್ರದೇಶದಲ್ಲಿ
ಏರ್ಪಡಿಸಲಾಗಿದೆ.
ಕೇಂದ್ರ,
ರಾಜ್ಯ
ಖಾಸಗಿ
ಬೃಹತ್
ಮತ್ತು
ಮಧ್ಯಮ
ಕೈಗಾರಿಕೆಗಳು
ಇದರಲ್ಲಿ
ಭಾಗವಹಿಸಲಿವೆ.
ಈ
ಕಂಪನಿಗಳು
ಸಣ್ಣ
ಕೈಗಾರಿಕಾ
ಘಟಕಗಳಿಂದ
ಖರೀದಿಸುವ
ವಸ್ತುಗಳ
ಪ್ರದರ್ಶನ
ಹಾಗೂ
ಮಾರಾಟಗಾರರ,
ಕೊಳ್ಳುವವರ
ಸಭೆಯನ್ನು
ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಸುಮಾರು 25 ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಭಾಗವಹಿಸಲಿವೆ ಎಂದು ತಿಳಿಸಿದರು. ಸೆಪ್ಟೆಂಬರ್ 29ರಿಂದ ಹಾಗೂ 30ರಂದು ಕೈಗಾರಿಕಾ ಪ್ರವಾಸ ಕಾರ್ಯಕ್ರಮವನ್ನು ಉದ್ದಿಮೆದಾರರಿಗೆ, ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದೆ. ವಿಶೇಷವಾಗಿ ಮಹಿಳಾ ನಿರುದ್ಯೋಗಿಗಳಿಗೆ ಇದು ಅನುಕೂಲಕಾರಿ ಆಗಿದೆ. ಹೀಗಾಗಿ ಸ್ವಯಂ ಉದ್ಯೋಗ ಪ್ರಾರಂಭಿಸಲು ಇಚ್ಛಿಸುವವರು ನೋಂದಣಿ ಮಾಡಿಸಿಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ: 99162 50557 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಮೈಸೂರು ದಸಾರಾ 2022; ಮೈಸೂರು ಅರಮನೆಯಲ್ಲಿ ಸಿಂಹಾಸನದ ಜೋಡಣೆ
ರಾಜವಂಶಸ್ಥ
ಯದುವೀರ್
ಹೇಳಿದ್ದೇನು?
ದಸರಾಗೆ
ದಿನಗಣನೆ
ಆರಂಭ
ಆಗಿದೆ.
ಸೆಪ್ಟೆಂಬರ್
26ಕ್ಕೆ
ಅರಮನೆಯಲ್ಲಿ
ಖಾಸಗಿ
ದರ್ಬಾರ್
ಆರಂಭ
ಆಗಲಿದ್ದು,
ಸಕಲ
ಸಿದ್ಧತೆ
ನಡೆಸಲಾಗುತ್ತಿದೆ.
ಇದರ
ನಡುವೆಯೇ
ರಾಜವಂಶಸ್ಥ
ಯದುವೀರ್
ಒಡೆಯರ್,
ಮೈಸೂರಿಗೆ
ಬರುವ
ಪ್ರವಾಸಿಗಾರಿಗೆ
ಸ್ವಾಗತ
ಮಾಡಿದ್ದಾರೆ.
ಮೈಸೂರಿನಲ್ಲಿ
ಮಾತಾಡಿದ
ಅವರು,
ಇದು
ಮನೆಯಿಂದ
ಹೊರಬರುವ
ಸಮಯ.
ಎಲ್ಲರೂ
ಮೈಸೂರು
ದಸರಾಗೆ
ಆಗಮಿಸಿ
ಸಂಭ್ರಮಿಸಿ
ಎಂದು
ಹೇಳಿದರು.
ನಾಡಹಬ್ಬಹಬ್ಬ ದಸರಾವನ್ನು ರಾಷ್ಟ್ರಪತಿಗಳು ಉದ್ಘಾಟನೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಎರಡು ವರ್ಷದ ಬಳಿಕ ಈ ಬಾರಿ ಅದ್ದೂರಿ ದಸರಾ ಆಚರಣೆ ಮಾಡಲಾಗುತ್ತಿದೆ. ಅರಮನೆಯಲ್ಲಿ ಎಂದಿನಂತೆ ಸಂಪ್ರದಾಯಿಕವಾಗಿ ದಸರಾ ಆಚರಿಸಲಾಗುವುದು. ಚಾಮುಂಡಿ ಬೆಟ್ಟದಿಂದ ಅರಮನೆಗೆ ರಾಷ್ಟ್ರಪತಿ ಆಹ್ವಾನದ ಬಗ್ಗೆ ರಾಜಮಾತೆ ಅವರು ತೀರ್ಮಾನ ಮಾಡುತ್ತಾರೆ. ಎರಡು ವರ್ಷಗಳ ಬಳಿಕ ಜಂಬುಸವಾರಿ ಅರಮನೆಯಿಂದ ಹೊರಗಡೆ ತೆರಳುತ್ತಿದೆ. ಸಾರ್ವಜನಿಕರು, ಪ್ರವಾಸಿಗರು ಸಂಭ್ರಮದಿಂದ ಹಬ್ಬವನ್ನು ಆಚರಿಸಬೇಕು. ಕಳೆದ 2 ವರ್ಷದಿಂದ ಕೋವಿಡ್ ಭಯ ಇತ್ತು. ಈ ಬಾರಿ ಕೋವಿಡ್ ಭಯ ದೂರ ಆಗಿದ್ದು, ನಾಡಹಬ್ಬ ಮತ್ತೆ ಕಳೆಗಟ್ಟಿದೆ. ಎಲ್ಲರೂ ಸಂಭ್ರಮದಿಂದ ನವರಾತ್ರಿ ಆಚರಿಸೋಣ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.