ಮೈಸೂರು ದಸಾರಾ 2022; ಮೈಸೂರು ಅರಮನೆಯಲ್ಲಿ ಸಿಂಹಾಸನದ ಜೋಡಣೆ
ಮೈಸೂರು, ಸೆಪ್ಟೆಂಬರ್, 21: ಮೈಸೂರು ಅರಮನೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿರಾಜಮಾನರಾಗಿ ಖಾಸಗಿ ದರ್ಬಾರ್ ನಡೆಸುವ ರತ್ನ ಖಚಿತ ಸಿಂಹಾಸನವನ್ನು ಜೋಡಣೆ ಮಾಡಲಾಯಿತು.
ನಾಡಹಬ್ಬ ದಸರಾ ಮಹೋತ್ಸವದ ವೇಳೆ ಮೈಸೂರು ಅರಮನೆಯಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಗಳಲ್ಲಿ ಪ್ರಮುಖವಾಗಿರುವುದೇ ಈ ಖಾಸಗಿ ದರ್ಬಾರ್ ಆಗಿದೆ. ಖಾಸಗಿ ದರ್ಬಾರ್ಗೆ ಬಳಸುವ ರತ್ನ ಖಚಿತ ಸಿಂಹಾಸನ ಹಾಗೂ ಬೆಳ್ಳಿಯ ಭದ್ರಾಸನವನ್ನು ಬಿಗಿ ಭದ್ರತೆಯಲ್ಲಿ ಜೋಡಿಸಲಾಯಿತು.
ಮಂಗಳೂರು ದಸರಾ; 300ರೂಪಾಯಿನಲ್ಲಿ ಮಂಗಳೂರಿನ ಒಂಭತ್ತು ದೇವಸ್ಥಾನಗಳ ದರ್ಶನ
ಸೆಪ್ಟೆಂಬರ್ 26ರಿಂದ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಯದುವಂಶದ ಪರಂಪರೆಯಂತೆ ನವರಾತ್ರಿ ವೇಳೆ ಹಲವು ಖಾಸಗಿ ದರ್ಬಾರ್ ನಡೆಯಲಿದೆ. ಅಪ್ಪಟ ಚಿನ್ನದಿಂದ ತಯಾರಿಸಿರುವ ಶತಮಾನಗಳ ಇತಿಹಾಸವಿರುವ ರತ್ನ ಖಚಿತ ಸಿಂಹಾಸನದ ಮೇಲೆ ರಾಜರು ಆಸೀನರಾಗಿ ವಿಧಿ ವಿಧಾನಗಳನ್ನು ಪೂರೈಸಲಿದ್ದಾರೆ.
ಅರಮನೆಯಲ್ಲಿ
ಪೂಜಾ
ಕೈಂಕರ್ಯಗಳು
ನವರಾತ್ರಿ
ಆರಂಭಕ್ಕೆ
ದಿನಗಣನೆ
ಶುರುವಾಗಿದೆ.
ಮಂಗಳವಾರ
ಬೆಳಗ್ಗೆ
7ರಿಂದ
10:58ರೊಳಗೆ
ಸಲ್ಲುವ
ಶುಭ
ಲಗ್ನದಲ್ಲಿ
ನಾನಾ
ಪೂಜಾ
ಕೈಂಕರ್ಯ
ಜರುಗಿದ
ಬಳಿಕ
ಸಿಂಹಾಸನ
ಜೋಡಣಾ
ಪ್ರಕ್ರಿಯೆ
ನಡೆಯಿತು.
ಮಧ್ಯಾಹ್ನ
1:15ರ
ವೇಳೆಗೆ
ಜೋಡಣೆ
ಕಾರ್ಯ
ಪೂರ್ಣಗೊಂಡಿತು.
ಧಾರ್ಮಿಕ
ಕಾರ್ಯಕ್ರಮದ
ದರ್ಬಾರ್
ಹಾಲ್ನಲ್ಲಿ
ಸಿಂಹಾಸನ
ಜೋಡಣೆ
ನಡೆದ
ಹಿನ್ನೆಲೆಯಲ್ಲಿ
ಬೆಳಗ್ಗೆಯಿಂದಲೇ
ಪೂಜಾ
ಕೈಂಕರ್ಯಗಳು
ಜರುಗಿದವು.
ಅರಮನೆಯ
ಪುರೋಹಿತರಾದ
ಶಹರಿ,
ಕುಮಾರ್
ಹಾಗೂ
ಶ್ಯಾಮ್
ದೀಕ್ಷಿತ್
ನೇತೃತ್ವದಲ್ಲಿ
ಗಣಪತಿ
ಹೋಮ,
ಚಾಮುಂಡಿ
ಪೂಜೆ,
ಶಾಂತಿ
ಹೋಮ,
ನವಗ್ರಹ
ಪೂಜೆ
ಸೇರಿದಂತೆ
ವಿವಿಧ
ಪೂಜಾ
ಕೈಂಕರ್ಯಗಳು
ಜರುಗಿದವು.
ಪೂರ್ಣಾಹುತಿ
ವೇಳೆ
ರಾಜವಂಶಸ್ಥೆ
ಪ್ರಮೋದಾದೇವಿ
ಒಡೆಯರ್
ಪಾಲ್ಗೊಂಡರು.
ಕಾರ್ಯದರ್ಶಿ
ಲಕ್ಷ್ಮೀನಾರಾಯಣ್,
ಮಹೇಂದ್ರ,
ಅರಮನೆಯ
ಆಡಳಿತ
ಮಂಡಳಿಯ
ಉಪನಿರ್ದೇಶಕ
ಟಿ.ಎಸ್.ಸುಬ್ರಹ್ಮಣ್ಯ,
ಅರಮನೆಯ
ಭದ್ರತಾ
ಪಡೆಯ
ಎಸಿಪಿ
ಚಂದ್ರಶೇಖರ್
ಸೇರಿದಂತೆ
ಕೆಲವರು
ಮಾತ್ರ
ಉಪಸ್ಥಿತರಿದ್ದರು.
ರಾಜವಂಶಸ್ಥರು ಸಮ್ಮತಿಸಿದರೆ ಗುರುವಾರದಿಂದಲೇ ಅರಮನೆ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಪ್ರತ್ಯೇಕ ಟಿಕೆಟ್ ವ್ಯವಸ್ಥೆಗೆ ಅವಕಾಶ ನೀಡಲಾಗುತ್ತದೆ ಎಂದು ಅರಮನೆ ಮೂಲಗಳು ತಿಳಿಸಿವೆ.
ಮರಳಿನಲ್ಲಿ
ಮೂಡಿಬಂದ
ಅಪ್ಪು
ಮೈಸೂರಿನ
ದಸರಾ
ವಸ್ತು
ಪ್ರದರ್ಶನ
ಆವರಣದಲ್ಲಿ
ನಟ
ಡಾ.ಪುನೀತ್
ರಾಜ್ಕುಮಾರ್
ನೆನಪಿನಾರ್ಥವಾಗಿ
ಮರಳು
ಕಲಾಕೃತಿ
ತಯಾರಾಗಿದೆ.
ಸದ್ಯ
ಇದು
ಎಲ್ಲರನ್ನು
ಗಮನ
ಸೆಳೆಯುತ್ತಲೇ
ಇದೆ.
ದಸರಾ
ವಸ್ತು
ಪ್ರದರ್ಶನ
ಆವರಣದಲ್ಲಿ
ಮರಳಿನಲ್ಲಿ
ಅರಳಿದ
ಪವರ್
ಸ್ಟಾರ್
ಪುನೀತ್
ರಾಜ್ಕುಮಾರ್
ಕಾಲಾಕೃತಿ
ಸಾರ್ವಜನಿಕರನ್ನು
ತನ್ನತ್ತ
ಸೆಳೆಯುತ್ತಿದೆ.
ಅಪ್ಪು
ಜೊತೆ
ಡಾ.ರಾಜ್ಕುಮಾರ್
ಹಾಗೂ
ಪಾರ್ವತಮ್ಮ
ರಾಜ್ಕುಮಾರ್
ಮರಳು
ಕಲಾಕೃತಿ
ಕೂಡ
ಮೂಡಿಬಂದಿದೆ.
350
ಟನ್
ಎಂ
ಸ್ಯಾಂಡ್
ಬಳಸಿ
ಕಾಲಾಕೃತಿ
ರಚಿಸಲಾಗಿದೆ.
ಮೈಸೂರಿನ
ಹೆಸರಾಂತ
ಮರಳು
ಕಲಾವಿದೆ
ಗೌರಿ
ಕೈ
ಚಳಕದಲ್ಲಿ
ಕಲಾಕೃತಿ
ಮೂಡಿಬಂದಿದೆ.
ಪುನೀತ್
ರಾಜ್ಕುಮಾರ್
ಕೊನೆಯ
ಚಿತ್ರ
ಜೇಮ್ಸ್,
ಬಾಲ
ನಟನೆಯ
ಆರಂಭಿಕ
ಚಿತ್ರದ
ಪಾತ್ರಗಳನ್ನು
ಬಿಡಿಸಿದ್ದಾರೆ.