ಮೈಸೂರು ದಸರಾ: ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ
ಮೈಸೂರು, ಅಕ್ಟೋಬರ್ 15: ಕೊರೊನಾ ಕಾರಣದಿಂದ ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕ ಮೈಸೂರು ದಸರಾದ ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಇಂದು (ಶುಕ್ರವಾರ) ಸಂಜೆ ಅರಮನೆ ಆವರಣಕ್ಕೆ ಸೀಮಿತವಾಗಿ ಜಂಬೂಸವಾರಿ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಕೋವಿಡ್ ಮೂರನೇ ಅಲೆ ಮುನ್ನೆಚ್ಚರಿಕೆ ಕ್ರಮವಾಗಿ ಸತತ ಎರಡನೇ ವರ್ಷ ದಸರಾವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಸುಮಾರು 500 ಮಂದಿ ಗಣ್ಯರಿಗೆ ಜಂಬೂಸವಾರಿ ವೀಕ್ಷಿಸುವ ಅವಕಾಶವಿದ್ದು, ಮಳೆ ಆತಂಕದ ಹಿನ್ನೆಲೆಯಲ್ಲಿ ಗಣ್ಯರು ಕುಳಿತುಕೊಳ್ಳುವ ಜಾಗಕ್ಕೆ ವಾಟರ್ ಫ್ರೂಫ್ ಪೆಂಡಾಲ್ ಹಾಕಲು ನಿರ್ಧರಿಸಲಾಗಿದೆ. ಉಳಿದಂತೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.
ಮೈಸೂರಿನೆಲ್ಲೆಡೆ ಕಳೆಕಟ್ಟಿದ ದಸರಾ ಸಂಭ್ರಮ: ಆನೆಗಳಿಗೆ ಜಂಬೂಸವಾರಿ ತಾಲೀಮು
ಅ.15ರ ಸಂಜೆ 4.36ರಿಂದ 4.46ರವರೆಗಿನ ಮೀನ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಂದಿಧ್ವಜ ಪೂಜೆ ಮೂಲಕ ಅಂತಿಮ ದಿನದ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ನಂತರ 5 ಗಂಟೆಗೆ ಅರಮನೆ ಆವರಣದಲ್ಲಿ ವಿಜಯ ದಶಮಿ ಪ್ರಯುಕ್ತ ಜಂಬೂಸವಾರಿಗೆ ಪುಷ್ಪಾರ್ಚಾನೆ ಮಾಡಲಿದ್ದಾರೆ. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಮೇಯರ್ ಸುನಂದಾ ಪಾಲನೇತ್ರ ಹಾಗೂ ಶಾಸಕ ಎಸ್.ಎ. ರಾಮದಾಸ್, ಸಂಸದ ಪ್ರತಾಪ್ ಸಿಂಹ ಭಾಗವಹಿಸಲಿದ್ದಾರೆ.
ಮೈಸೂರಿನಲ್ಲಿ ಮಾವುತರಿಗೆ, ಕಾವಾಡಿಗರಿಗೆ ಉಪಾಹಾರ ಕೂಟ ಏರ್ಪಡಿಸಿದ ಸಚಿವೆ ಶೋಭಾ ಕರಂದ್ಲಾಜೆ
ಸಾರ್ವಜನಿಕರಿಗೆ ಪ್ರವೇಶ ನಿಷೇಧ
ಕೋವಿಡ್ ಹಿನ್ನೆಲೆಯಲ್ಲಿ ಅರಮನೆ ಆವರಣಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿದ್ದಲ್ಲದೆ, ಅರಮನೆ ಜಂಬೂಸವಾರಿ ನಡೆಯುವ ಪ್ರದೇಶವನ್ನು ಶೂನ್ಯ ವಲಯ ಎಂದು ಘೋಷಿಸಲಾಗಿದೆ. ಶ್ರೀರಂಗಪಟ್ಟಣದಲ್ಲಿ ಅಂಬಾರಿ ಹೊತ್ತಿದ್ದ ಗೋಪಾಲಸ್ವಾಮಿ ಆನೆ ಸಿಡಿಮದ್ದಿನಿಂದ ಗಾಬರಿಯಾಗಿ ಅರ್ಧಕ್ಕೆ ಮೆರವಣಿಗೆ ನಿಂತ ಹಿನ್ನೆಲೆಯಲ್ಲಿ ಮೈಸೂರಿನಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ.
ಕುಶಾಲತೋಪುಗಳನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯ ಪಟಾಕಿ ಅಥವಾ ಸಿಡಿಮದ್ದುಗಳನ್ನು ಸಿಡಿಸುವಂತಿಲ್ಲ. ಆನೆಗಳ ಜೊತೆಗೆ ಮಾವುತರು, ಕಾವಾಡಿಗಳು ಹಾಗೂ ಕರ್ತವ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿ ಹೊರತುಪಡಿಸಿ ಬೇರೆ ಯಾರೂ ಮಾರ್ಗದಲ್ಲಿ ಇರುವಂತಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಅರಮನೆ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್
ದಸರಾ ನಡುವೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ಗೆ ಕ್ರಮ ತೆಗೆದುಕೊಂಡಿದ್ದಾರೆ. ಅರಮನೆಯ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ನಿಷೇಧಿಸಲಾಗಿದೆ. ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಸಿದ್ಧತೆ ಪರಿಶೀಲಿಸಿದ್ದು, ವಿವಿಧ ತಂಡಗಳನ್ನು ರಚಿಸಿ ಕರ್ತವ್ಯಕ್ಕೆ ನಿಯೋಜಿಸಿದ್ದಾರೆ.
"ಜಂಬೂಸವಾರಿಗೆ ಎಲ್ಲಾ ರೀತಿಯ ಸಿದ್ಧತೆಗಳು ಪೂರ್ಣಗೊಂಡಿವೆ. ಆನೆಗಳ ತಾಲೀಮು ಪೂರ್ಣಗೊಂಡಿವೆ. ಮದ ಇಳಿಯದ ಕಾರಣ ಪಟ್ಟದ ಆನೆ ವಿಕ್ರಮ ಹಾಗೂ ಮೊದಲ ಬಾರಿಗೆ ಆಗಮಿಸಿರುವ ಲಕ್ಷ್ಮಿ ಆನೆಗಳು ಜಂಬೂಸವಾರಿಯಲ್ಲಿ ಭಾಗವಹಿಸವುದಿಲ್ಲ. ಉಳಿದಂತೆ ಎಲ್ಲಾ ಆನೆಗಳು ವಾತಾವರಣಕ್ಕೆ ಹೊಂದಿಕೊಂಡಿವೆ," ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದ್ದಾರೆ.
ಕೇವಲ ಆರು ಸ್ತಬ್ಥಚಿತ್ರಗಳು ಭಾಗವಹಿಸಲಿವೆ
ಅರಮನೆ ಆವರಣದೊಳಗೆ ನಡೆಯುವ ಜಂಬೂಸವಾರಿ ಮೆರವಣಿಗೆಯಲ್ಲಿ ಕೇವಲ ಆರು ಸ್ತಬ್ಥಚಿತ್ರಗಳು ಭಾಗವಹಿಸಲಿದ್ದು, ನೋಡುಗರ ಗಮನ ಸೆಳೆಯಲಿವೆ. ಅದ್ಧೂರಿ ದಸರಾ ಸಂದರ್ಭದಲ್ಲಿ ಹಲವು ಸ್ತಬ್ಧಚಿತ್ರಗಳು ಭಾಗವಹಿಸುತ್ತಿದ್ದವು. ಕೊರೊನಾ ಕಾರಣದಿಂದ 2020ರಲ್ಲಿ ಕೇವಲ ಎರಡು ಸ್ತಬ್ಧಚಿತ್ರಗಳು ಮಾತ್ರ ಭಾಗವಹಿಸಿದ್ದವು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮೈಸೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಗುಂಪು ಮನೆಗಳ ಕುರಿತು ಸ್ತಬ್ಧಚಿತ್ರ ನಿರ್ಮಾಣವಾಗುತ್ತಿದೆ. 'ಕೊರೊನಾ ಮುಕ್ತ ಕರ್ನಾಟಕಕ್ಕಾಗಿ ಪ್ರಾರ್ಥಿಸೋಣ' ಎನ್ನುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ತಬ್ಧಚಿತ್ರದಲ್ಲಿ ಯಾವ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಕುರಿತು ಬೆಳಕು ಚೆಲ್ಲಲಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ಸಮಗ್ರ ಕೃಷಿ ಕುರಿತು ಮಾಹಿತಿ, ಪರಿಸರ ಸಂರಕ್ಷಣೆ ಹಾಗೂ ವಾದ್ಯಗೋಷ್ಠಿಯ ವಿಶೇಷತೆಯನ್ನು ಸಾರುವ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ.
750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯು
ಜಂಬೂಸವಾರಿಗೆ
ಗಜಪಡೆಗಳ
ಅಂತಿಮ
ತಾಲೀಮು
ಪೂರ್ಣಗೊಂಡಿದೆ.
ಕ್ಯಾಪ್ಟನ್
ಅಭಿಮನ್ಯು
ಆನೆ
750
ಕೆ.ಜಿ
ತೂಕದ
ಚಿನ್ನದ
ಅಂಬಾರಿ
ಹೊರಲಿದ್ದು,
ಕಾವೇರಿ
ಹಾಗೂ
ಚೈತ್ರ
ಕುಮ್ಕಿ
ಆನೆಗಳಾಗಿ
ಜೊತೆಯಲ್ಲಿ
ಹೆಜ್ಜೆ
ಹಾಕಲಿವೆ.
ಜಂಬೂಸವಾರಿ
ಸಂದರ್ಭ
21
ಬಾರಿ
ಕುಶಾಲತೋಪುಗಳನ್ನು
ಹಾರಿಸಲಾಗುತ್ತದೆ.
ಈ
ಸದ್ದಿಗೆ
ಆನೆಗಳು
ಹಾಗೂ
ಅಶ್ವಾರೋಹಿ
ಪಡೆಯ
ಕುದುರೆಗಳು
ಗಾಬರಿಯಾಗದಂತೆ
ತಾಲೀಮು
ನಡೆಸಲಾಗಿದೆ.
ಸರಳ
ಹಾಗೂ
ಸಾಂಪ್ರದಾಯಿಕವಾಗಿ
ಅರಮನೆ
ಆವರಣದಲ್ಲಿ
ನಡೆಯಲಿರುವ
ಜಂಬೂಸವಾರಿ
ಮೆರವಣಿಗೆಯಲ್ಲಿ
ಅಭಿಮನ್ಯು
ಚಿನ್ನದ
ಅಂಬಾರಿ
ಹೊರಲಿದೆ.
ಸುಮಾರು
800
ಮೀಟರ್
ಸಾಗಿ
ಅರ್ಧ
ಗಂಟೆಯಲ್ಲಿ
ಪೂರ್ಣಗೊಳ್ಳಲಿದೆ.