ಮೈಸೂರಿನಲ್ಲಿ ಸಿಕ್ಕ ಚಿನ್ನದ ಕುರಾನ್ ಜಮ್ಮುವಿನಲ್ಲಿ ಕಳುವಾಗಿದ್ದು?
ಮೈಸೂರು, ಆಗಸ್ಟ್ 24 : ಮೈಸೂರಿನಲ್ಲಿ ಪೊಲೀಸರು ವಶಪಡಿಸಿಕೊಂಡ ಚಿನ್ನದ ಲೇಪನವಿರುವ ಹಾಳೆಗಳ ಕುರಾನ್ ಜಮ್ಮು-ಕಾಶ್ಮೀರದ ಸಂಗ್ರಹಾಲಯದಿಂದ ಕಳುವಾಗಿದ್ದು ಎಂದು ಶಂಕಿಸಲಾಗಿದೆ. ಜಮ್ಮು-ಕಾಶ್ಮೀರದ ಪೊಲೀಸರು ಈ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಲು ಶೀಘ್ರದಲ್ಲೇ ಮೈಸೂರಿಗೆ ಭೇಟಿ ನೀಡುವ ಸಾಧ್ಯತೆ ಇದೆ.
ಈ
ಕುರಾನ್
ಜಮ್ಮು-ಮತ್ತು
ಕಾಶ್ಮೀರದ
ಶ್ರೀನಗರದ
ವಸ್ತು
ಸಂಗ್ರಹಾಲಯದಿಂದ
2003ರಲ್ಲಿ
ಕಳುವಾಗಿದ್ದು
ಎಂಬ
ಶಂಕೆ
ವ್ಯಕ್ತವಾಗಿದೆ.
ಮಾಧ್ಯಮಗಳ
ಮೂಲಕ
ಮಾಹಿತಿ
ತಿಳಿದ
ಪ್ರತಾಪ್
ಸಿಂಗ್
ವಸ್ತುಸಂಗ್ರಹಾಲಯದ
ಸಿಬ್ಬಂದಿ
ಈ
ಕುರಿತು
ಮೈಸೂರು
ಪೊಲೀಸರಿಗೆ
ಈ
ಮೇಲ್
ಮೂಲಕ
ಮಾಹಿತಿ
ರವಾನಿಸಿದ್ದಾರೆ,
ಕಾಶ್ಮೀರ
ಪೊಲೀಸರಿಗೂ
ಮಾಹಿತಿ
ಕೊಟ್ಟಿದ್ದಾರೆ.
[ಖುರಾನ್
ಪಠಿಸದ
ಪುತ್ರನ
ಕೊಂದುಸುಟ್ಟ
ಮಹಾತಾಯಿ]
ಪ್ರತಾಪ್ ಸಿಂಗ್ ವಸ್ತು ಸಂಗ್ರಹಾಲಯದಿಂದ ಕುರಾನ್ ಕಳುವಾದ ಬಗ್ಗೆ ಜಮ್ಮು-ಕಾಶ್ಮೀರ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿತ್ತು. ಆದರೆ, ತನಿಖೆಯಲ್ಲಿ ಈ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈಗ ಕಾಶ್ಮೀರ ಪೊಲೀಸರು ಮೈಸೂರಿಗೆ ಭೇಟಿ ನೀಡಿ ಕುರಾನ್ ಪರಿಶೀಲನೆ ನಡೆಸಲಿದ್ದಾರೆ.
5 ಕೋಟಿಗೆ ಮಾರಲು ಹೊರಟಿದ್ದರು : ಆ.10ರಂದು ಕೆ.ಆರ್.ನಗರ ತಾಲೂಕಿನ ಹೊಸ ಅಗ್ರಹಾರ ಬಳಿ ಕುರಾನ್ ಮಾರಲು ಯತ್ನಿಸುತ್ತಿದ್ದ 10 ಮಂದಿಯ ತಂಡವನ್ನು ಪೊಲೀಸರು ಬಂಧಿಸಿದ್ದರು. ಕುರಾನ್ ವಶಪಡಿಸಿಕೊಂಡ ಬಳಿಕ ಹಾಳೆಗಳ ಮೇಲೆ ಚಿನ್ನದ ಲೇಪನವಿರುವುದು ಬಹಿರಂಗಗೊಂಡಿದೆ. ಸುಮಾರು 5 ಕೋಟಿ ರೂ.ಗಳಿಗೆ ಇದನ್ನು ಮಾರಲು ಯತ್ನಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.