ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಸಿಕ್ಕ ಚಿನ್ನದ ಕುರಾನ್ ಜಮ್ಮುವಿನಲ್ಲಿ ಕಳುವಾಗಿದ್ದು?

|
Google Oneindia Kannada News

ಮೈಸೂರು, ಆಗಸ್ಟ್ 24 : ಮೈಸೂರಿನಲ್ಲಿ ಪೊಲೀಸರು ವಶಪಡಿಸಿಕೊಂಡ ಚಿನ್ನದ ಲೇಪನವಿರುವ ಹಾಳೆಗಳ ಕುರಾನ್ ಜಮ್ಮು-ಕಾಶ್ಮೀರದ ಸಂಗ್ರಹಾಲಯದಿಂದ ಕಳುವಾಗಿದ್ದು ಎಂದು ಶಂಕಿಸಲಾಗಿದೆ. ಜಮ್ಮು-ಕಾಶ್ಮೀರದ ಪೊಲೀಸರು ಈ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಲು ಶೀಘ್ರದಲ್ಲೇ ಮೈಸೂರಿಗೆ ಭೇಟಿ ನೀಡುವ ಸಾಧ್ಯತೆ ಇದೆ.

ಈ ಕುರಾನ್ ಜಮ್ಮು-ಮತ್ತು ಕಾಶ್ಮೀರದ ಶ್ರೀನಗರದ ವಸ್ತು ಸಂಗ್ರಹಾಲಯದಿಂದ 2003ರಲ್ಲಿ ಕಳುವಾಗಿದ್ದು ಎಂಬ ಶಂಕೆ ವ್ಯಕ್ತವಾಗಿದೆ. ಮಾಧ್ಯಮಗಳ ಮೂಲಕ ಮಾಹಿತಿ ತಿಳಿದ ಪ್ರತಾಪ್ ಸಿಂಗ್ ವಸ್ತುಸಂಗ್ರಹಾಲಯದ ಸಿಬ್ಬಂದಿ ಈ ಕುರಿತು ಮೈಸೂರು ಪೊಲೀಸರಿಗೆ ಈ ಮೇಲ್ ಮೂಲಕ ಮಾಹಿತಿ ರವಾನಿಸಿದ್ದಾರೆ, ಕಾಶ್ಮೀರ ಪೊಲೀಸರಿಗೂ ಮಾಹಿತಿ ಕೊಟ್ಟಿದ್ದಾರೆ. [ಖುರಾನ್ ಪಠಿಸದ ಪುತ್ರನ ಕೊಂದುಸುಟ್ಟ ಮಹಾತಾಯಿ]

quran

ಪ್ರತಾಪ್ ಸಿಂಗ್ ವಸ್ತು ಸಂಗ್ರಹಾಲಯದಿಂದ ಕುರಾನ್ ಕಳುವಾದ ಬಗ್ಗೆ ಜಮ್ಮು-ಕಾಶ್ಮೀರ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿತ್ತು. ಆದರೆ, ತನಿಖೆಯಲ್ಲಿ ಈ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈಗ ಕಾಶ್ಮೀರ ಪೊಲೀಸರು ಮೈಸೂರಿಗೆ ಭೇಟಿ ನೀಡಿ ಕುರಾನ್ ಪರಿಶೀಲನೆ ನಡೆಸಲಿದ್ದಾರೆ.

5 ಕೋಟಿಗೆ ಮಾರಲು ಹೊರಟಿದ್ದರು : ಆ.10ರಂದು ಕೆ.ಆರ್.ನಗರ ತಾಲೂಕಿನ ಹೊಸ ಅಗ್ರಹಾರ ಬಳಿ ಕುರಾನ್ ಮಾರಲು ಯತ್ನಿಸುತ್ತಿದ್ದ 10 ಮಂದಿಯ ತಂಡವನ್ನು ಪೊಲೀಸರು ಬಂಧಿಸಿದ್ದರು. ಕುರಾನ್ ವಶಪಡಿಸಿಕೊಂಡ ಬಳಿಕ ಹಾಳೆಗಳ ಮೇಲೆ ಚಿನ್ನದ ಲೇಪನವಿರುವುದು ಬಹಿರಂಗಗೊಂಡಿದೆ. ಸುಮಾರು 5 ಕೋಟಿ ರೂ.ಗಳಿಗೆ ಇದನ್ನು ಮಾರಲು ಯತ್ನಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

English summary
A rare copy of the Holy Quran that Mysuru Police recovered from a gang which was trying to sell it was stolen from the Srinagar museum in 2003. Quran has its pages plated with gold and is believed to be 400 years old. Mysuru Police received an email from Pratap Singh Museum Srinagar claiming the copy recovered by the police could be the one stolen from museum 12 years ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X