ಮೈಸೂರು- ಬೆಂಗಳೂರು- ಚೆನ್ನೈ ಹೈಸ್ಪೀಡ್ ರೈಲು ಸರ್ವೆ; ಡಿಪಿಆರ್ಗೆ ಕೇಂದ್ರ ಸಮ್ಮತಿ
ಮೈಸೂರು, ಫೆಬ್ರವರಿ 12: ಬಹುನಿರೀಕ್ಷಿತ ಮೈಸೂರು- ಬೆಂಗಳೂರು- ಚೆನ್ನೈ ಹೈಸ್ಪೀಡ್ ರೈಲು ಯೋಜನೆ ಸರ್ವೆ ಹಾಗೂ ಡಿಪಿಆರ್ ಪ್ರಕ್ರಿಯೆಗೆ ಕೇಂದ್ರ ಸರಕಾರ ಹಸಿರು ನಿಶಾನೆ ತೋರಿದೆ. ಈ ಯೋಜನೆ ಯಶಸ್ವಿಯಾದರೆ ಮೈಸೂರು- ಚೆನ್ನೈ ಪ್ರಯಾಣದ ಅವಧಿ ಕೇವಲ 2.30 ತಾಸಿಗೆ ಇಳಿಕೆಯಾಗಲಿದೆ.
ಈ ಕುರಿತು ಹೇಳಿಕೆ ನೀಡಿರುವ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ, ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಯೋಜನೆ ಕುರಿತು ವಿಶೇಷ ಆಸಕ್ತಿ ತೋರಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ.
ಏನಿದು
ಯೋಜನೆ?
ಮೈಸೂರು-
ಬೆಂಗಳೂರು-
ಚೆನ್ನೈ
ರೈಲಿನಲ್ಲಿ
ಕೇವಲ
40
ನಿಮಿಷಗಳಲ್ಲಿ
ಮೈಸೂರಿನಿಂದ
ಬೆಂಗಳೂರಿಗೆ
ತಲುಪಬಹುದಾಗಿದೆ.
ಅದೇ
ರೀತಿ
ಮೈಸೂರು-
ಚೆನ್ನೈ
ನಡುವೆ
ಕೇವಲ
2.30
ತಾಸಿನಲ್ಲಿ
ಪ್ರಯಾಣಿಸಬಹುದಾಗಿದೆ.
435
ಕಿ.ಮೀ
ದೂರದ
ಈ
ಮಾರ್ಗದಲ್ಲಿ
ರೈಲು
ಗಂಟೆಗೆ
320
ಕಿ.ಮೀ
ವೇಗದಲ್ಲಿ
ಚಲಿಸಲಿದೆ.
ಇದರಿಂದಾಗಿ
ಈಗಿನ
ಪ್ರಯಾಣದ
ಅವಧಿಯಲ್ಲಿ
ಒಟ್ಟು
7
ತಾಸುಗಳು
ಕಡಿತವಾಗಲಿವೆ.
ಯೋಜನೆಯ
ಅಂದಾಜು
ವೆಚ್ಚ
1
ಲಕ್ಷ
ಕೋಟಿ
ರೂ.
ಆಗಿದೆ.
'ಒಡೆಯರ್
ಎಕ್ಸ್ಪ್ರೆಸ್'
ನಾಮಕರಣಕ್ಕೆ
ಮನವಿ
ಟಿಪ್ಪು
ಎಕ್ಸ್ಪ್ರೆಸ್
ಬದಲು
ಮೈಸೂರಿಗೆ
ರೈಲು
ಸಂಪರ್ಕ
ತಂದ
ಮಹಾರಾಜರ
ಕೊಡುಗೆಯ
ಪ್ರತೀಕವಾಗಿ
ಮೈಸೂರು-
ಬೆಂಗಳೂರು-
ಚೆನ್ನೈ
ಹೈಸ್ಪೀಡ್
ರೈಲಿಗೆ
'ಒಡೆಯರ್
ಎಕ್ಸ್ಪ್ರೆಸ್'
ಎಂದು
ನಾಮಕರಣ
ಮಾಡುವಂತೆ
ಕೇಂದ್ರ
ರೈಲ್ವೆ
ಸಚಿವ
ಅಶ್ವಿನಿ
ವೈಷ್ಣವ್
ಅವರಿಗೆ
ಸಂಸದ
ಪ್ರತಾಪ್
ಸಿಂಹ
ಮನವಿ
ಮಾಡಿದ್ದಾರೆ.
Recommended Video
ಮಂಗಳೂರಿಗೆ
ನಿತ್ಯ
ರೈಲು
ವಾರದಲ್ಲಿ
3
ದಿನದ
ಬದಲಾಗಿ
ಮೈಸೂರಿನಿಂದ
ಮಂಗಳೂರಿಗೆ
ನಿತ್ಯ
ರೈಲು
ಸಂಪರ್ಕ
ಕಲ್ಪಿಸಲು
ಸಂಸದ
ಪ್ರತಾಪ್
ಸಿಂಹ
ಮನವಿ
ಮಾಡಿದ್ದಾರೆ.
''ಮೈಸೂರಿನಿಂದ
ಕಾರವಾರ/
ಕಣ್ಣೂರಿಗೆ
ನಿತ್ಯ
ರೈಲು
ಸೇವೆಗಳನ್ನು
ಮರು-
ಪರಿಚಯಿಸಲು
ರೈಲ್ವೆಯೊಂದಿಗೆ
ಪ್ರಸ್ತಾಪಿಸಿ
ಒತ್ತಾಯಿಸಿದ್ದೇನೆ.
ಆದರೆ
ಇದುವರೆಗೂ
ಯಾವುದೇ
ಪ್ರಗತಿಯಾಗಿಲ್ಲ,''
ಎಂದು
ಪ್ರತಾಪ
ಸಿಂಹ
ತಿಳಿಸಿದ್ದಾರೆ.