ದ್ವಿಚಕ್ರ ವಾಹನ ಕಳ್ಳನನ್ನು ಬಂಧಿಸಿದ ಮೈಸೂರು ಪೊಲೀಸರು
ಮೈಸೂರು, ಜನವರಿ 18: ಮೈಸೂರು ನಗರ ಸಿಸಿಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಗುರುವಾರದಂದು ಹೂಟಗಳ್ಳಿ, ಎಸ್ಆರ್ಎಸ್ ಕಾಲೋನಿ, ಕೆಇಬಿ ಕಛೇರಿಯ ಬಳಿ ಕಾರ್ಯಾಚರಣೆ ನಡೆಸಿ, ದ್ವಿಚಕ್ರ ವಾಹನ ಕಳ್ಳತನ ಮಾಡುವ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಮಹದೇವ ಬಿನ್ ಚೆಲುವಯ್ಯ( 22), ಲಕ್ಷ್ಮಿಪುರ ಗ್ರಾಮ, ಕೆ.ಆರ್.ನಗರ ಮೈಸೂರು ಜಿಲ್ಲೆ ಎಂದು ಗುರುತಿಸಲಾಗಿದ್ದು, ಈತನನ್ನು ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಲಾಗಿದೆ.
ಬೆಂಗಳೂರು: 16 ಕೋಟಿ ಮೌಲ್ಯದ 70 ಕೆಜಿ ಚಿನ್ನ ಕದ್ದ ಐನಾತಿ ಕಳ್ಳರು
ಈತ ಮೈಸೂರು ನಗರ, ಮೈಸೂರು ಜಿಲ್ಲೆ, ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈತನಿಂದ 6,00,000ರೂ. ಮೌಲ್ಯದ ವಿವಿಧ ಕಂಪನಿಯ 11 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪತ್ತೆ ಕಾರ್ಯದಿಂದ ಮೈಸೂರು ನಗರದ ಜಯಲಕ್ಷ್ಮಿಪುರಂ ಠಾಣೆಯ 1, ಮೈಸೂರು ಜಿಲ್ಲೆ ಕೆ.ಆರ್. ನಗರ ಠಾಣೆಯ 1, ಪಿರಿಯಾಪಟ್ಟಣ ಠಾಣೆಯ 1, ಬೆಂಗಳೂರು ನಗರ ವಿಜಯನಗರ ಠಾಣೆಯ 1 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, ಇನ್ನು 07 ವಾಹನಗಳ ವಾರಸುದಾರರು ಪತ್ತೆಯಾಗಬೇಕಾಗಿದೆ.