ಸಂಗೀತ ವಿದ್ವಾಂಸ ರಾ.ಸತ್ಯನಾರಾಯಣ ನಿಧನ
ಮೈಸೂರು, ಜನವರಿ 17: ಸಂಗೀತ ವಿದ್ವಾಂಸರಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಾ.ಸತ್ಯನಾರಾಯಣ (93) ಅವರು ಇಂದು ನಿಧನರಾಗಿದ್ದಾರೆ. ಇಲ್ಲಿನ ಜಯನಗರ ನಿವಾಸದಲ್ಲಿ ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
1927 ಮೇ 9ರಂದು ಜನಿಸಿದ ಲಾ.ಸತ್ಯನಾರಾಯಣ ಅವರು, ಕರ್ನಾಟಕ ಸಂಗೀತದಲ್ಲಿ ಮೈಸೂರನ್ನು ಉನ್ನತ ಮಟ್ಟಕ್ಕೇರಿಸಿದ್ದ ಮಹಾ ಪ್ರತಿಭೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. 2018ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜರನಾಗಿದ್ದರು.
ಮೈಸೂರು-ಬೆಳಗಾವಿ ಮಧ್ಯೆ ವಿಮಾನ ಹಾರಾಟಕ್ಕೆ ಚಾಲನೆ
ಪುತ್ರ ರಾಸ ನಂದಕುಮಾರ್, ಪುತ್ರಿ ರೋಹಿಣಿ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅವರು ಅಗಲಿದ್ದಾರೆ.
ಚನ್ನಪಟ್ಟಣದ ಬಳಿ ನಿರ್ಮಿಸಿರುವ ರಸಋಷಿ ಪ್ರತಿಷ್ಠಾನ ಸಂಶೋಧನಾ ಕೇಂದ್ರದಲ್ಲಿ ಅವರ ಅಂತಿಮ ವಿಧಿ ವಿಧಾನ ಪ್ರಕ್ರಿಯೆಗಳು ನೆರವೇರಲಿವೆ. ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ಗೌರವ ವಂದನೆ ಸಲ್ಲಿಸಲಿದ್ದು, ಪೊಲೀಸರು ಮೂರು ಸುತ್ತು ಗುಂಡು ಹಾರಿಸುವ ಮೂಲಕ ಗೌರವ ಸಮರ್ಪಣೆ ಮಾಡಲಿದ್ದಾರೆ.