ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಂಗಭೂಮಿ, ಕನ್ನಡ ಭಾಷೆ, ರಾಜಕಾರಣ... ಮುಖ್ಯಮಂತ್ರಿ ಚಂದ್ರು ಮಾತುಗಳು

By ಮೈಸೂರು ಪ್ರತಿನಿಧಿ
|
Google Oneindia Kannada News

Recommended Video

ರಾಜ್ ಕುಮಾರ್, ಅಂಬರೀಷ್ ಗೆ ಇದ್ದಂತಹ ಗತ್ತು ಇವರಿಗೆಲ್ಲ ಇಲ್ಲ ಬಿಡಿ. | MukyaMantri Chandru | Raj kumar |Vishnu

ಮೈಸೂರು, ಫೆಬ್ರವರಿ 14: ಕೇವಲ ಚಂದ್ರಶೇಖರ್ ಇದ್ದವನು ಮೈಮ್ ಚಂದ್ರು, ಯುನಿವರ್ಸಿಟಿ ಚಂದ್ರು, ನಂತರ ಮುಖ್ಯಮಂತ್ರಿ ಚಂದ್ರು ಹೇಗಾದೆ ಎಂಬುದನ್ನು ಹೇಳಿಕೊಳ್ಳುತ್ತಾ ಇಂದು ಹಿರಿಯ ಚಲನಚಿತ್ರ ನಟ, ರಂಗಕರ್ಮಿ ಮುಖ್ಯಮಂತ್ರಿ ಚಂದ್ರು ತಮ್ಮ ನೆನಪುಗಳನ್ನು ಮೆಲುಕು ಹಾಕಿಕೊಂಡರು.

ಇಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡರು. ತಮ್ಮ ರಂಗಭೂಮಿಯ 45 ವರ್ಷಗಳ ನಂಟನ್ನು ತೆರೆದಿಟ್ಟರು. ಬಹುರೂಪಿ ವಿಚಾರದಲ್ಲಿ 'ಗಾಂಧಿಪಥ' ಕೇಳಿ ಸಂತೋಷದಿಂದ ಒಪ್ಪಿಕೊಂಡು ಬಂದೆ ಎಂದು ತಿಳಿಸಿದರು. ರಂಗಭೂಮಿ, ಕನ್ನಡ ಭಾಷೆ, ರಾಜಕಾರಣ... ಹೀಗೆ ಹಲವು ವಿಷಯಗಳ ಕುರಿತು ತಮ್ಮ ಅನುಭವ, ಅನಿಸಿಕೆಗಳನ್ನು ಹಂಚಿಕೊಂಡರು.

 ಮುಖ್ಯಮಂತ್ರಿ ಚಂದ್ರು ಆಗಿದ್ದು...

ಮುಖ್ಯಮಂತ್ರಿ ಚಂದ್ರು ಆಗಿದ್ದು...

"ಮುಖ್ಯಮಂತ್ರಿ ನಾಟಕ ಮಾಡಿದಾಗಿನಿಂದ ಮುಖ್ಯಮಂತ್ರಿ ಚಂದ್ರು ಆಗಿ ಗುರುತಿಸಿಕೊಂಡೆ. ಆಗ ನನಗೆ 27-28 ವರ್ಷ ಇರಬಹುದಷ್ಟೆ. ಕಿರುತೆರೆ, ಹಿರಿತೆರೆ ಎಲ್ಲದರಲ್ಲೂ ಅಭಿನಯಿಸಿದರೂ ರಂಗಭೂಮಿಯೇ ಮೈಲುಗಲ್ಲಾಯಿತು" ಎಂದು ಸಂತಸಪಟ್ಟರು. "ಮುಖ್ಯಮಂತ್ರಿ ಚಂದ್ರು" ನಾಟಕ ಪ್ರತಿವರ್ಷ 20 ರಿಂದ 24 ಪ್ರದರ್ಶನಗಳನ್ನು ಕಾಣುತ್ತಿತ್ತು. ರಾಜ್ಯ, ಹೊರರಾಜ್ಯ, ಗಡಿಭಾಗ, ನ್ಯೂಜಿಲ್ಯಾಂಡ್, ಮಲೇಶಿಯಾ, ಆಸ್ಟ್ರೇಲಿಯಾ, ಮಲೇಶಿಯಾ, ಲಂಡನ್ ನಲ್ಲಿ ಕೂಡ ಪ್ರದರ್ಶನ ಕಂಡಿದೆ ಎಂದು ವಿವರಿಸಿದರು. ನಾನು 45 ವರ್ಷಗಳಿಂದ ರಂಗಭೂಮಿಯಲ್ಲಿದ್ದು 40 ವರ್ಷಗಳಿಂದಲೂ ಮುಖ್ಯಮಂತ್ರಿ ಪಾತ್ರ ಮಾಡುತ್ತಿದ್ದೇನೆ. ಹವ್ಯಾಸಿ ರಂಗಭೂಮಿಯಲ್ಲಿ ಇದು ಮೈಲುಗಲ್ಲಾಗಿದ್ದು ಗಿನ್ನಿಸ್ ದಾಖಲೆ ಸೇರಲು ಪ್ರಯತ್ನಗಳು ಸಾಗಿವೆ. ಈಗಾಗಲೇ 700 ಪ್ರದರ್ಶನ ಕಂಡಿರುವ ಮುಖ್ಯಮಂತ್ರಿ ನಾಟಕ ಈ ಬಾರಿಯ ಬಹುರೂಪಿ ನಾಟಕೋತ್ಸವದಲ್ಲಿ ನಾಳೆ 701ನೇ ಪ್ರದರ್ಶನ ಕಾಣುತ್ತಿರುವುದು ವಿಶೇಷ ಎಂದರು.

ಎಷ್ಟು ಸರ್ಕಾರ ಬದಲಾದರೂ ಕರ್ನಾಟಕಕ್ಕೆ ಇವರೇ 'ಮುಖ್ಯಮಂತ್ರಿ'!ಎಷ್ಟು ಸರ್ಕಾರ ಬದಲಾದರೂ ಕರ್ನಾಟಕಕ್ಕೆ ಇವರೇ 'ಮುಖ್ಯಮಂತ್ರಿ'!

 ಕನ್ನಡ ಭಾಷೆಯ ಬಗೆಗಿನ ಚಂದ್ರು ಅಭಿಮಾನ

ಕನ್ನಡ ಭಾಷೆಯ ಬಗೆಗಿನ ಚಂದ್ರು ಅಭಿಮಾನ

ನಾಡು, ನುಡಿ, ಗಡಿ ವಿಚಾರದಲ್ಲಿ ಇಡೀ ಕನ್ನಡ ನಾಡನ್ನು ಡಾ. ರಾಜಕುಮಾರ್ ಒಂದುಗೂಡಿಸಿದ್ದರು. ಗೋಕಾಕ್ ಚಳುವಳಿಗೆ ಬಲ ತಂದು ಕೊಟ್ಟಿದ್ದೇ ಡಾ. ರಾಜಕುಮಾರ್. ನಂತರ ಅಂಬರೀಷ್ ಅವರ ಸ್ಥಾನವನ್ನು ತುಂಬಿದರು. ಅವರಿಬ್ಬರೂ ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಕನ್ನಡದ ವಿಚಾರದಲ್ಲಿ ಚಲನಚಿತ್ರ ರಂಗದ ಎಲ್ಲ ದಿಗ್ಗಜ ನಟರು ಒಟ್ಟಾಗಿ ನಿಲ್ಲಬೇಕು ಎಂದರು. ಕನ್ನಡದ ರಾಯಭಾರಿಯಾಗಿಯೂ ನಾನು ಕೆಲಸ ಮಾಡಿದ್ದೇನೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿಯೂ ಇದ್ದೆ. ಕನ್ನಡ ಪರ ಹೋರಾಟಗಳನ್ನು ನಡೆಸಿದ್ದೇವೆ. ಆದರೆ ಇದುವರೆಗೂ ಆಳ್ವಿಕೆ ನಡೆಸಿದ ಎಲ್ಲಾ ಸರ್ಕಾರಗಳ ಬೇಜವಾಬ್ದಾರಿತನದಿಂದಾಗಿ ಕನ್ನಡ ಭಾಷೆ ತೊಂದರೆಗೆ ಸಿಲುಕಿದೆ. ಶಿಕ್ಷಣ ನೀತಿಯ ಸರಳೀಕರಣ, ವ್ಯಾಪಾರಿಕರಣದಿಂದಾಗಿಯೂ ಕನ್ನಡ ಭಾಷಾ ಬೆಳವಣಿಗೆಗೆ ಧಕ್ಕೆಯಾಗಿದೆ. ಭಾಷೆ ಭವಿಷ್ಯಕ್ಕೆ ದಾರಿ ಎಂಬುದನ್ನು ಸರ್ಕಾರ ಅರಿಯಬೇಕು. ಕನ್ನಡ ಭಾಷೆಗೆ ಆದ್ಯತೆ ಎನ್ನುವ ಬದಲು ಕನ್ನಡ ಭಾಷೆಯನ್ನು ಕಡ್ಡಾಯ ಮಾಡಬೇಕು ಎಂದು ಪ್ರತಿಪಾದಿಸಿದರು.

"ನನಗೆ ಟಿಕೆಟ್ ಕೊಟ್ಟರೂ ಚುನಾವಣೆಗೆ ನಿಲ್ಲುವುದಿಲ್ಲ"

"ನಾನು ರಂಗಭೂಮಿ, ಚಿತ್ರರಂಗ, ಕಿರುತೆರೆ, ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದೇನೆ. ರಾಜಕಾರಣ ಪ್ರವೇಶಿಸಿದ ಕೇವಲ 20 ದಿನದಲ್ಲೇ ಶಾಸಕನಾಗಿ ಆಯ್ಕೆಯಾದೆ, ಆನಂತರ ಎರಡು ಬಾರಿ ಎಂ.ಎಲ್.ಸಿ ಆದೆ. ರಾಜಕಾರಣವನ್ನು ಸುಮ್ಮನೆ ಮಾಡಿದೆ. ಆದರೀಗ ನನಗೆ ಟಿಕೆಟ್ ಕೊಟ್ಟರೂ ಚುನಾವಣೆಗೆ ನಿಲ್ಲುವುದಿಲ್ಲ. ನಾನು ಪ್ರಾಮಾಣಿಕನಾಗಿದ್ದು, ರಾಜಕಾರಣ ಸೇರಿ ಹಣ ಆಸ್ತಿ ಮಾಡಿಲ್ಲ. ಹಾಗಾಗಿ ನನಗೆ ಚುನಾವಣೆಯಲ್ಲಿ ನಿಲ್ಲುವ ಶಕ್ತಿ ಇಲ್ಲ. ಆಕಸ್ಮಿಕವಾಗಿ ರಂಗಭೂಮಿಗೆ ಬಂದ ನಾನು ಚಲನಚಿತ್ರ ರಂಗ, ಕಿರುತೆರೆಯಲ್ಲೂ ಸಕ್ರಿಯನಾದೆ. ಆದರೆ ಸಿನಿಮಾದಿಂದಾಗಿ ಬಲಗಣ್ಣು, ಎಡಗಿವಿ ಕಳೆದುಕೊಂಡು ಮಾತನಾಡಲಾಗದ ಸ್ಥಿತಿಗೆ ತಲುಪಿದ್ದೆ. ಆನಂತರ ಚೇತರಿಸಿಕೊಂಡೆ. ನನ್ನ ಕೈಕಾಲು ಗಟ್ಟಿಯಾಗಿರುವವರೆಗೂ ನಾಟಕ ಆಡುವುದನ್ನು ನಿಲ್ಲಿಸುವುದಿಲ್ಲ ಎಂದರು

ಮುತ್ತು-ಹವಳಗಳ ನಾಡು ಬಹರೇನ್‌ನಲ್ಲಿ ಕನ್ನಡ ಡಿಂಡಿಮಮುತ್ತು-ಹವಳಗಳ ನಾಡು ಬಹರೇನ್‌ನಲ್ಲಿ ಕನ್ನಡ ಡಿಂಡಿಮ

 ರಂಗಭೂಮಿ ಬಗ್ಗೆ ಮುಖ್ಯಮಂತ್ರಿ ಚಂದ್ರು ಮಾತು

ರಂಗಭೂಮಿ ಬಗ್ಗೆ ಮುಖ್ಯಮಂತ್ರಿ ಚಂದ್ರು ಮಾತು

ನಾಟಕಕ್ಕೆ ತನ್ನದೇ ಶಕ್ತಿಯಿದೆ. ಆದರೆ ನಾಟಕಕಾರರು ರಾಜೀಸೂತ್ರ ಅನುಸರಿಸುತ್ತಿದ್ದಾರೆ. ಅಂದಿನ ದಿನಗಳಲ್ಲಿ ಇದ್ದ ಹೋರಾಟದ ಮನೋಭಾವ ಈಗ ಇಲ್ಲದಂತಾಗಿದೆ. ಒಬ್ಬ ಹವ್ಯಾಸಿ ರಂಗ ತಂಡದಿಂದ ಕಲಾಗಂಗೋತ್ರಿಯ ಓರ್ವ ನಟನಾಗಿ ನಿರಂತರವಾಗಿ 40 ವರ್ಷ ಅಭಿನಯಿಸಿ 700 ಪ್ರದರ್ಶನಗಳನ್ನು ನೀಡಿರುವುದು ರಂಗ ದಾಖಲೆ. ರಂಗಭೂಮಿ ನನ್ನ ಬದುಕಿನ ಇತಿಹಾಸವನ್ನೇ ರೂಪಿಸಿದೆ. ಎಲ್ಲವೂ ಆಕಸ್ಮಿಕವಾಗಿಯೇ ನಡೆದಿದ್ದು. ರಂಗಭೂಮಿ, ಕಿರುತೆರೆ, ಹಿರಿತೆರೆ, ರಾಜಕಾರಣ ಎಲ್ಲವೂ ಆಕಸ್ಮಿಕವೇ ಎಂದರು.

'ಮೋದಿ ವಿದೇಶಿ ಪ್ರವಾಸಕ್ಕೆ 2 ಸಾವಿರ ಕೋಟಿ ಖರ್ಚು ಮಾಡಿರುವುದೇ ಸಾಧನೆ''ಮೋದಿ ವಿದೇಶಿ ಪ್ರವಾಸಕ್ಕೆ 2 ಸಾವಿರ ಕೋಟಿ ಖರ್ಚು ಮಾಡಿರುವುದೇ ಸಾಧನೆ'

English summary
Mukhya mantri Chandru recalled his old memories in mysuru addressing Mysuru District Journalists Association today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X