ಮುದ್ದಹನುಮೇಗೌಡರು ನಾಮಪತ್ರ ಹಿಂಪಡೆಯಲು ಸಮ್ಮತಿಸಿದ್ದಾರೆ: ಸಿದ್ದರಾಮಯ್ಯ
ಮೈಸೂರು, ಮಾರ್ಚ್ 29 : ತುಮಕೂರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮುದ್ದಹನುಮೇಗೌಡರು ನಾಮಪತ್ರ ವಾಪಸ್ ಪಡೆಯಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುದ್ದ ಹನುಮೇಗೌಡರಿಗೆ ಟಿಕೇಟ್ ಸಿಗದೆ ಅನ್ಯಾಯವಾಗಿದೆ. ಆದ ಅನ್ಯಾಯವನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ. ಅವರೊಂದಿಗೆ ಮಾಥುಕತೆ ನಡೆಸಿದ್ದೇವೆ. ಮುದ್ದಹನುಮೇಗೌಡರು ನಾಮಪತ್ರ ವಾಪಸ್ ಪಡೆಯಲು ಸಮ್ಮತಿಸಿದ್ದಾರೆ ಎಂದು ಹೇಳಿದರು.
ತುಮಕೂರಲ್ಲೇ ನನ್ನ ಸ್ಪಷ್ಟ ನಿರ್ಧಾರ ತಿಳಿಸುವೆ: ಮುದ್ದಹನುಮೇಗೌಡ
ನಿನ್ನೆ ಐಪಿಎಲ್ ಮ್ಯಾಚ್ ನೋಡಲು ಹೋಗಿದ್ದೆ. ಪಾಪ ಸೋತು ಬಿಟ್ಟರು. ನಾನು 11 ಗಂಟೆ ರಾತ್ರಿಗೆ ವಾಪಸ್ ಬಂದೆ. ದರೆ ರಾಜಕೀಯದ ಮಧ್ಯೆ ಇವೆಲ್ಲಾ ಇರಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.
ತೆರಿಗೆ ಇಲಾಖೆ ದಾಳಿಗೆ ನಮ್ಮ ವಿರೋಧವಿಲ್ಲ. ಆದರೆ ಚುನಾವಣೆ ಸಂದರ್ಭದಲ್ಲಿ ಏಕೆ ಎಂದು ಪ್ರಶ್ನಿಸಿದರು. ಇದು ರೂಟಿನ್ ಕಾರ್ಯವಾಗಿದ್ದರೆ ಬಿಜೆಪಿಯವರ ಬಳಿ ದುಡ್ಡಿಲ್ಲವೇ ? ಯಡಿಯೂರಪ್ಪ 25 ಕೋಟಿ ಶಾಸಕರಿಗೆ ಆಫರ್ ಕೊಟ್ಟಿರಲಿಲ್ಲವೇ?.
ಈಶ್ವರಪ್ಪ ಬಳಿ ನೋಟು ಎಣಿಸುವ ಮಿಷನ್ ಸಿಕ್ಕಿರಲಿಲ್ಲವೇ? ಅವರ ಮನೆಗಳ ಮೇಲೆ ಏಕೆ ದಾಳಿ ಮಾಡ್ತಾ ಇಲ್ಲ ? ಇದು ನಮಗೆ ಭಯ ಅಲ್ಲ, ಇಂತಹ ದಾಳಿಗಳಿಂದ ನಮಗೆ ಬೆಂಬಲಿಸುವವರು ಸಹಾಯ ಮಾಡುವವರು ಹಿಂದೆ ಸರಿಯುತ್ತಾರೆ. ಕಾರ್ಯಕರ್ತರು ಮುಖಂಡರು ಭಯದಿಂದ ಚುನಾವಣೆ ಹಿಂದೆ ಸರಿಯುತ್ತಾರೆ.
ಸಿದ್ದರಾಮಯ್ಯ ಸಂಧಾನ ಫಲ: ಮುದ್ದಹನುಮೇಗೌಡ ನಾಮಪತ್ರ ವಾಪಸ್ಗೆ ಒಪ್ಪಿಗೆ ?
ಹೀಗಾಗಿ
ಇಂತಹ
ದಾಳಿಗಳು
ನಮಗೆ
ಸ್ವಲ್ಪ
ಪರಿಣಾಮ
ಬೀರುತ್ತದೆ.
ಪಾರದರ್ಶಕವಾಗಿ
ಚುನಾವಣೆ
ನಡೆಯಬೇಕು
ಎಂಬುದು
ನಮ್ಮ
ಉದ್ದೇಶ.
ಮೋದಿಯವರು
ಇದನ್ನು
ಪಾಲಿಸಬೇಕು
ಎಂದರು.
ನಾನು
ಸ್ಟಾರ್
ಪ್ರಚಾರಕ.
28
ಕ್ಷೇತ್ರಗಳಲ್ಲಿ
ನಾನು
ಪ್ರವಾಸ
ಮಾಡುತ್ತೇನೆ.
ಜೆಡಿಎಸ್
ಕಾಂಗ್ರೆಸ್
ಪಕ್ಷದ
ಅಭ್ಯರ್ಥಿಗಳ
ಪ್ರಚಾರ
ಮಾಡುತ್ತೇನೆ
ಎಂದರು.