'ನಮ್ಮ ಗೆಲುವನ್ನು ಜಿಟಿಡಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ '
ಮೈಸೂರು, ಮೇ 2:ಜೆಡಿಎಸ್ ವೋಟುಗಳು ಬಿಜೆಪಿಗೆ ಬಂದಿದೆ ಎಂಬ ಸಚಿವ ಜಿ.ಟಿ.ದೇವೇಗೌಡ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ. ಕೇವಲ ಜೆಡಿಎಸ್ ಮತಗಳು ಮಾತ್ರವಲ್ಲ, ಕಾಂಗ್ರೆಸ್ ಕಾರ್ಯಕರ್ತರ ಮತಗಳೂ ನನಗೆ ಬಂದಿವೆ ಎಂದು ತಿಳಿಸಿದ್ದಾರೆ.
ಗೆಲ್ಲಲಾಗದವರು ಪುಕ್ಕಲುತನದಿಂದ ಹೀಗೆ ಮಾಡಿದರು:ಪ್ರತಾಪ್ ಸಿಂಹ
ಈ ಹಿಂದಿನಿಂದಲೂ ಮೈಸೂರಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ನವರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಹಾಗಾಗಿಯೇ ಮೈಸೂರು ಕ್ಷೇತ್ರದಲ್ಲಿ ಬಿಜೆಪಿ ಸತತ ಗೆಲುವು ಸಾಧ್ಯವಾಗುತ್ತಿದೆ.1990 ರಿಂದಲೂ ಮೈಸೂರಿನಲ್ಲಿ ಈ ಸಂಸ್ಕೃತಿ ಮುಂದುವರಿದಿದೆ. ಹಿಂದೆ ಎರಡು ಮತಗಳು ಇದ್ದಾಗಲೂ ಎಸ್.ಎಂ.ಕೆ ಹಾಗೂ ವಾಜಪೇಯಿ ಇಬ್ಬರಿಗೂ ಜನ ಮತ ನೀಡಿದ್ದರು ಎಂದು ಹೇಳಿದ್ದಾರೆ. ಜಿಟಿ ದೇವೇಗೌಡರ ಹೇಳಿಕೆ ಸ್ವಾಗತಾರ್ಹ. ನಮ್ಮ ಗೆಲುವನ್ನು ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
Comments
lok sabha elections 2019 gt devegowda pratap simha mysuru ಲೋಕಸಭಾ ಚುನಾವಣೆ 2019 ಜಿಟಿ ದೇವೇಗೌಡ ಕಾಂಗ್ರೆಸ್ ಮೈಸೂರು ಪ್ರತಾಪ್ ಸಿಂಹ
English summary
MP Pratap Simha reacts minister GT devegowda statement.He said that I have not only the JDS votes but also the votes of Congress workers.
Story first published: Thursday, May 2, 2019, 12:38 [IST]