ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮಾಜ್ ಮೂಲಕ ಉತ್ತಮ ವರ ಸಿಗುವ ಆಮಿಷ; ಹುಣಸೂರಿಯಲ್ಲಿ ಮೌಲ್ವಿಯಿಂದ ಅತ್ಯಾಚಾರ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 03: ಮಸೀದಿಯಲ್ಲಿ ದೇವರಿಗೆ ವಿಶೇಷ ನಮಾಜ್‌ ಸಲ್ಲಿಸಿದರೆ ವಿವಾಹವಾಗುತ್ತದೆ ಎಂದು ಯುವತಿಯನ್ನು ನಂಬಿಸಿ, ಮೌಲ್ವಿಯೊಬ್ಬ ಆಕೆ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿರುವ ಪ್ರಕರಣ ಇಲ್ಲಿಗೆ ಸಮೀಪದ ಹುಣಸೂರು ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ.

ಚಿಲ್ಕುಂದ ಗ್ರಾಮದ ಯುವತಿ ಅತ್ಯಾಚಾರಗೊಳಗಾಗಿದ್ದು, ಹುಣಸೂರಿನ ಲಾಲ್​​​​ಬನ್ ಬೀದಿಯ ವಾಸಿ, ಹೈರಿಗೆ ಗ್ರಾಮದ ಮಸೀದಿಯ ಧರ್ಮಗುರು ಜಬೀವುಲ್ಲಾ ಎಂಬಾತ ಪ್ರಕರಣದ ಆರೋಪಿ ಆಗಿದ್ದಾನೆ. ಪರಿಚಿತಳಾಗಿದ್ದ ಈ ಯುವತಿಗೆ ಉತ್ತಮ ವರ ಸಿಗಬೇಕಾದರೆ ವಿಶೇಷ ನಮಾಜ್‌ ಮಾಡುತ್ತೇನೆ ಎಂದು ನಂಬಿಸಿದ್ದ. ಈ ಮೂಲಕ ಯುವತಿಯ ವಿಶ್ವಾಸ ಗಳಿಸಿಕೊಂಡ ಈತ ನಂತರ ಈ ನೆಪದಲ್ಲಿ ಯುವತಿಯ ಮೇಲೆಯೇ ಅತ್ಯಾಚಾರ ಎಸಗಿದ್ದ.

Moulvi Raped Young Woman And Escaped In Mysuru

 ಲಾಕ್‌ಡೌನ್: ಮನೆಗೆ ಬಂದಿದ್ದ ಮಗಳ ಮೇಲೆ ತಂದೆಯಿಂದ ಅತ್ಯಾಚಾರ ಲಾಕ್‌ಡೌನ್: ಮನೆಗೆ ಬಂದಿದ್ದ ಮಗಳ ಮೇಲೆ ತಂದೆಯಿಂದ ಅತ್ಯಾಚಾರ

ಈತನ ಪೈಶಾಚಿಕ ಕೃತ್ಯದಿಂದ ನೊಂದ ಯುವತಿ, ತನ್ನ ತಂದೆಗೆ ಘಟನೆ ಬಗ್ಗೆ ತಿಳಿಸಿದ್ದಾಳೆ. ಯುವತಿಯ ತಂದೆಯು ಹುಣಸೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮೌಲ್ವಿ ವಿರುದ್ಧ ದೂರು ದಾಖಲಿಸಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.

English summary
A moulvi raped young woman and escaped from masjid in hunasuru of mysuru district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X