ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನರೇಂದ್ರ ಮೋದಿ ಇಸ್ರೋಗೆ ಕಾಲಿಟ್ಟ ಘಳಿಗೆ ಚೆನ್ನಾಗಿಲ್ಲ ಎಂದ ಕುಮಾರಣ್ಣ

|
Google Oneindia Kannada News

ಮೈಸೂರು, ಸೆಪ್ಟೆಂಬರ್ 12: ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ಕೇಂದ್ರದಲ್ಲಿ ಇದ್ದದ್ದು ವಿಜ್ಞಾನಿಗಳ ಪಾಲಿಗೆ ಕೆಟ್ಟ ಶಕುನ ಆಯಿತು ಎಂದು ಮಾಜಿ ಮುಖ್ಯಮಂತ್ರಿ- ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಎಚ್. ಡಿ. ಕುಮಾರಸ್ವಾಮಿ ಗುರುವಾರ ಮೈಸೂರಿನಲ್ಲಿ ಹೇಳಿದ್ದಾರೆ.

ಕಳೆದ ಜುಲೈನಲ್ಲಿ ಚಂದ್ರಯಾನ ಎರಡರ ಯಾನಕ್ಕೆ ಉಡ್ಡಯನ ಯಶಸ್ವಿ ಆಗಿತ್ತು. ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲೆ ಇನ್ನೇನು ಇಳಿಯಬೇಕು ಎನ್ನುವಷ್ಟರಲ್ಲಿ ಸಂಪರ್ಕ ಕಳೆದುಕೊಂಡಿತ್ತು.

"ನರೇಂದ್ರ ಮೋದಿ ತಾವೇ ಚಂದ್ರಯಾನ ಎರಡನ್ನು ಅಲ್ಲಿಗೆ ತಲುಪಿಸುತ್ತಿರುವವರ ಥರ ಹಾಗೂ ಆ ಮೂಲಕ ಅಂಥ ಸಂದೇಶ ಕಳುಹಿಸಲು ಬಂದಿದ್ದರು" ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Modi Stepped Moment Into ISRO was Not Right For The Scientists: HDK

ಹತ್ತು ವರ್ಷಗಳಿಂದ ವಿಜ್ಞಾನಿಗಳು ಚಂದ್ರಯಾನಕ್ಕಾಗಿ ಬಹಳ ಶ್ರಮಪಟ್ಟಿದ್ದಾರೆ. ಆದರೆ ತಾವೇ ಇದನ್ನು ಮಾಡುತ್ತಿರುವವರ ಥರ ಬೆಂಗಳೂರಿಗೆ ಪ್ರಧಾನಮಂತ್ರಿ ಬಂದಿದ್ದರು. ನರೇಂದ್ರ ಮೋದಿ ಅವರು ಇಸ್ರೋದಲ್ಲಿ ಕಾಲಿಟ್ಟ ಘಳಿಗೆ ವಿಜ್ಞಾನಿಗಳ ಪಾಲಿಗೆ ಚೆನ್ನಾಗಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

English summary
Former chief minister of Karnataka HD Kumaraswamy blamed PM Modi as bad omen for Chandrayaan 2 setback.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X