ಶಾಸಕ ತನ್ವೀರ್ ಸೇಠ್ ಆರೋಗ್ಯದಲ್ಲಿ ಚೇತರಿಕೆ : ಆಸ್ಪತ್ರೆಯಿಂದ ಡಿಸ್ಚಾರ್ಜ್
ಮೈಸೂರು,
ನವೆಂಬರ್
26:
ಮಾರಣಾಂತಿಕ
ಹಲ್ಲೆಗೊಳಗಾಗಿ
ಆಸ್ಪತ್ರೆಗೆ
ದಾಖಲಾಗಿದ್ದ
ಶಾಸಕ
ತನ್ವೀರ್
ಸೇಠ್
ಆರೋಗ್ಯದಲ್ಲಿ
ಚೇತರಿಕೆ
ಕಂಡು
ಬಂದಿದೆ.
ಈ
ಹಿನ್ನೆಲೆಯಲ್ಲಿ,
ಆಸ್ಪತ್ರೆಯಿಂದ
ಡಿಸ್ಚಾರ್ಜ್
ಮಾಡಲಾಗಿದೆ.
ಈ
ಹಿಂದೆ
ಫರ್ಹಾನ್
ಎಂಬ
ವ್ಯಕ್ತಿ
ನಡೆಸಿದ
ಹಲ್ಲೆಯಿಂದ
ಗಂಭೀರವಾಗಿ
ಗಾಯಗೊಂಡಿದ್ದ
ಶಾಸಕ
ತನ್ವೀರ್
ಸೇಠ್
ಅವರಿಗೆ
ಮೈಸೂರಿನ
ಕೊಲಂಬಿಯಾ
ಏಷಿಯಾ
ಆಸ್ಪತ್ರೆಗೆ
ದಾಖಲಿಸಿದ್ದು,
ಚಿಕಿತ್ಸೆ
ನೀಡಲಾಗುತಿತ್ತು.
ತನ್ವೀರ್
ಸೇಠ್
ಕೊಲೆ
ಯತ್ನ;
ಮಾಸ್ಟರ್
ಮೈಂಡ್
ಯಾರು?
ತನಿಖೆಯಿಂದ
ಹೊರಬಿತ್ತು
ಸ್ಫೋಟಕ
ಮಾಹಿತಿ
ಈ
ನಡುವೆ
ಶಾಸಕ
ತನ್ವೀರ್
ಸೇಠ್
ಅವರ
ಆರೋಗ್ಯದಲ್ಲಿ
ಚೇತರಿಕೆ
ಕಂಡು
ಬಂದಿರುವ
ಹಿನ್ನೆಲೆ
ಸೋಮವಾರ
ರಾತ್ರಿ
ವೇಳೆಗೆ
ವೈದ್ಯರ
ಸೂಚನೆಯಂತೆ
ಆಸ್ಪತ್ರೆಯಿಂದ
ಡಿಸ್ಚಾರ್ಜ್
ಮಾಡಲಾಗಿದೆ.
ಸದ್ಯದ
ಮಟ್ಟಿಗೆ
ಶಾಸಕರಿಗೆ
ಮನೆಯಲ್ಲೇ
ವಿಶ್ರಾಂತಿ
ಪಡೆಯುವಂತೆ
ವೈದ್ಯರು
ಸೂಚಿಸಿದ್ದಾರೆ.
ಈ
ಹಿನ್ನಲೆಯಲ್ಲಿ
ಇನ್ನಷ್ಟು
ದಿನಗಳ
ಕಾಲ
ಶಾಸಕ
ತನ್ವೀರ್
ಸೇಠ್
ಬೆಡ್
ರೆಸ್ಟ್
ನಲ್ಲಿ
ಇರಲಿದ್ದಾರೆ.
8
ದಿನಗಳ
ನಂತರ
ಶಾಸಕ
ತನ್ವೀರ್
ಸೇಠ್
ಆಸ್ಪತ್ರೆಯಿಂದ
ಡಿಸ್ಚಾರ್ಜ್
ಆಗಿದ್ದಾರೆ.
ಈ
ಹಿಂದೆ
ಕಳೆದ
ನವೆಂಬರ್.17ರ
ರಾತ್ರಿ
ತನ್ವೀರ್
ವೇಳೆಯಲ್ಲಿ
ತನ್ವೀರ್
ಸೇಠ್
ಅವರ
ಮೇಲೆ
ಕೊಲೆ
ಯತ್ನ
ನಡೆದಿತ್ತು.
ಮೈಸೂರಿನ
ಬನ್ನಿಮಂಟಪದ
ಬಾಲಭವನದಲ್ಲಿ
ಫರ್ಹಾನ್
ಎಂಬ
ವ್ಯಕ್ತಿ
ಶಾಸಕರ
ಕೊಲೆಗೆ
ಯತ್ನಿಸಿದ್ದು,
ದಾಳಿಯಲ್ಲಿ
ತನ್ವೀರ್
ಸೇಠ್
ಅವರ
ಕುತ್ತಿಗೆ
ಹಾಗೂ
ಕಿವಿಭಾಗಕ್ಕೆ
ಗಂಭೀರ
ಗಾಯವಾಗಿತ್ತು.