ಮೈಸೂರಿನಲ್ಲಿ ಭಾರತ್ ಬಂದ್ ಗೆ ಜೆಡಿಎಸ್ ಬೆಂಬಲ, ಶಾಲಾ ಕಾಲೇಜಿಗೆ ರಜೆಯಿಲ್ಲ
ಮೈಸೂರು, ಸೆಪ್ಟೆಂಬರ್.9 : ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಕರೆ ನೀಡಿರುವ ಭಾರತ್ ಬಂದ್ ಗೆ ಕಾಂಗ್ರೆಸ್ ನೊಂದಿಗೆ ಜೆಡಿಎಸ್ ಸಹ ಬೆಂಬಲ ವ್ಯಕ್ತಪಡಿಸಿದೆ ಎಂದು ಸಚಿವ ಸಾರಾ ಮಹೇಶ್ ತಿಳಿಸಿದರು.
ನಗರದ ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳು ಭಾರತ್ ಬಂದ್ ಗೆ ಬೆಂಬಲ ನೀಡಲಿವೆ. ಉಳಿದ ಸಂಘ, ಸಂಸ್ಥೆಗಳ ಮುಖಂಡರನ್ನು ಭೇಟಿ ಮಾಡಿ ಬೆಂಬಲ ಸೂಚಿಸುವಂತೆ ಮನವಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಶಾಸಕ ತನ್ವೀರ್ ಸೇಠ್ ಕೂಡ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸೆ.10 ರಂದು ಭಾರತ ಬಂದ್, ಏನಿರುತ್ತೆ? ಏನಿರೋಲ್ಲ?
ನಂತರ ಮಾತನಾಡಿದ ಅವರು ನಗರ ಮತ್ತು ಗ್ರಾಮಾಂತರ ಬಸ್ ಗಳು ಸಂಚರಿಸದಂತೆ ಬಸ್ ಡಿಪೊ ಹಾಗೂ ನಿಲ್ದಾಣಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು.
ನಂತರ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ತೆರಳಿ ಬಂದ್ ಯಶಸ್ವಿಗೊಳಿಸಲಾಗುವುದು. ಹೊರವಲಯದ ಬಡಾವಣೆಗಳಲ್ಲಿ ಕೂಡ ಬಂದ್ ಗೆ ಕರೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಆಸ್ಪತ್ರೆ, ಮೆಡಿಕಲ್ ಸ್ಟೋರ್, ಹಾಲು ಮಾರಾಟ ಕೇಂದ್ರ ಹಾಗೂ ತುರ್ತು ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆಟೋ, ಲಾರಿ, ಮ್ಯಾಕ್ಸಿಕ್ಯಾಬ್ ಮಾಲೀಕರು ಮತ್ತು ಚಾಲಕರೂ ಬಂದ್ ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕರು ತಿಳಿಸಿದರು.
ಭಾರತ ಬಂದ್ : ಕೆಎಸ್ಆರ್ಟಿಸಿ, ಬಿಎಂಟಿಸಿ ಸಂಚಾರವಿಲ್ಲ?
ಇನ್ನು ಬಂದ್ ಬಗ್ಗೆ ಹೋಟೆಲ್ ಮಾಲೀಕರ ಸಂಘ ಸದಸ್ಯರ ಸಭೆ ನಂತರ ನಿರ್ಧಾರ ತೆಗೆದುಕೊಳ್ಳುವುದು ಎಂದು ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹೇಳಿದರೆ, ಆಟೋ ಮಾಲೀಕರ ಸಭೆ ನಡೆಸಿದ ನಂತರ ಬಂದ್ ಗೆ ಬೆಂಬಲ ನೀಡಬೇಕೇ, ಬೇಡವೆ ಎಂಬುದರ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮೈಸೂರು ಆಟೋ ಮಾಲೀಕರ ಮತ್ತು ಚಾಲಕರ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ಸಾಯಿ ಬಾಬಾ ನಾಗರಾಜ್ ತಿಳಿಸಿದ್ದಾರೆ.
ಹಾಗೆಯೇ ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ಪ್ರಶಾಂತ್ ಮಾತನಾಡಿ, ಬೆಂಗಳೂರಿನ ನಮ್ಮ ಸಂಘಟನೆಯ ಪದಾಧಿಕಾರಿಗಳು ಸಭೆ ನಡೆಸಲಿದ್ದು, ಅಂತಿಮ ನಿರ್ಧಾರ ಪ್ರಕಟಿಸುತ್ತೇವೆ ಎಂದರು.
ಆದರೆ ಮೈಸೂರು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟ ಬಂದ್ ಗೆ ಪೂರ್ಣಬೆಂಬಲ ವ್ಯಕ್ತಪಡಿಸಿದೆ. ಸೋಮವಾರ ಬೆಳಗ್ಗೆ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಬಳಿಗೆ ತೆರಳಿ ಕೆಲಕಾಲ ಪ್ರತಿಭಟಿಸುವ ಮೂಲಕ ಬಂದ್ಗೆ ಬೆಂಬಲ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಕೋದಂಡರಾಮು ತಿಳಿಸಿದ್ದಾರೆ.
ಖಂಡಿತಾ ಈ ಎಲ್ಲಾ ವಿಚಾರಗಳಿಗೆ ಭಾರತ ಬಂದ್ ಆಗಲೇಬೇಕು : ಟಿ.ಎ.ಶರವಣ
ಶಾಲಾ-ಕಾಲೇಜು
ರಜೆ
ಇಲ್ಲ
ಸೋಮವಾರ
ಜಿಲ್ಲೆಯಲ್ಲಿ
ಶಾಲಾ,
ಕಾಲೇಜುಗಳಿಗೆ
ರಜೆ
ನೀಡಿಲ್ಲ.
ಶಿಕ್ಷಣ
ಸಂಸ್ಥೆಗಳು
ಎಂದಿನಂತೆ
ಕಾರ್ಯ
ನಿರ್ವಹಿಸಲಿವೆ
ಎಂದು
ಜಿಲ್ಲಾಧಿಕಾರಿ
ಅಭಿರಾಂಜಿ.ಶಂಕರ್
ತಿಳಿಸಿದ್ದಾರೆ.
ಪರಿಸ್ಥಿತಿ
ನೋಡಿಕೊಂಡು
ಶಾಲೆ-ಕಾಲೇಜಿಗೆ
ರಜೆ
ನೀಡಬೇಕೇ,
ಬೇಡವೆ
ಎಂಬ
ಬಗ್ಗೆ
ತೀರ್ಮಾನಿಸಲಾಗುವುದು
ಎಂದು
ಖಾಸಗಿ
ಶಿಕ್ಷಣ
ಸಂಸ್ಥೆಗಳ
ಮುಖ್ಯಸ್ಥರು
ತಿಳಿಸಿದ್ದಾರೆ.